ಉಡುಪಿ ಜಿಲ್ಲಾ ಶ್ರೀರಾಮಸೇನೆಗೆ ಸಾಮೂಹಿಕ ರಾಜೀನಾಮೆ: ವಕ್ತಾರ ಶರತ್ ಮಣಿಪಾಲ

ಉಡುಪಿ: ಉಡುಪಿ ಜಿಲ್ಲಾ ಶ್ರೀ ರಾಮಸೇನೆಯ ಜಿಲ್ಲಾಧ್ಯಕ್ಷರಾದ ಜಯರಾಂ ಅಂಬೇಕಲ್ಲು ಅವರು ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿಯವರ ಮಾತಿನಿಂದ ಬೇಸತ್ತು ಸಂಘಟನೆಗೆ ಒಂದು ವಾರದಿಂದ ಹಿಂದೆಯೇ ರಾಜೀನಾಮೆ ನೀಡಿದ್ದಾರೆ.

ಆದರೆ ಸಂಘಟನೆಯ ರಾಜ್ಯ ನಾಯಕರು ಜಿಲ್ಲಾ ಪದಾಧಿಕಾರಿಗಳನ್ನು ಸಂಪರ್ಕಿಸದೆ ಇರುವುದು ಹಾಗೂ ಜಿಲ್ಲಾಧ್ಯಕ್ಷರ ಮನವೊಲಿಕೆಗೆ ಪ್ರಯತ್ನಿಸದಿರುವುದನ್ನು ಮನಗಂಡು ಶ್ರೀ ರಾಮಸೇನೆಯ ಉಡುಪಿ ಜಿಲ್ಲಾ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಅತೀವಾ ನೋವಿನಿಂದ ಸಂಘಟನೆಗೆ ಸಾಮೂಹಿಕ ರಾಜೀನಾಮೆಯನ್ನು ನೀಡುತ್ತಿದ್ದೇವೆ. ಉಡುಪಿ ಜಿಲ್ಲಾ ಶ್ರೀ ರಾಮಸೇನೆಯನ್ನು ಬರ್ಖಸ್ತು ಮಾಡುತ್ತಿರುವುದಾಗಿ ಸಂಘಟನೆಯ ಜಿಲ್ಲಾ ವಕ್ತಾರ ಶರತ್. ಕೆ ಮಣಿಪಾಲ ತಿಳಿಸಿದ್ದಾರೆ.