ಕೆಂಜೂರು ಲಯನ್ಸ್ ಕ್ಲಬ್‌ ಪದಾಧಿಕಾರಿಗಳ ಪದಗ್ರಹಣ

ಕೆಂಜೂರು: ನೂತನವಾಗಿ ರಚನೆಯಾದ ಕೆಂಜೂರು ಲಯನ್ಸ್ ಕ್ಲಬ್‌ ನ ಪದಾಧಿಕಾರಿಗಳ ಹಾಗೂ ಸದಸ್ಯರ ಪದಗ್ರಹಣ ಸಮಾರಂಭ ಈಚೆಗೆ ನಡೆಯಿತು.
ಜಿಲ್ಲಾ ಗವರ್ನರ್ ಎನ್.ಎಂ. ಹೆಗಡೆ ಅವರು ನೂತನ ಸದಸ್ಯರಿಗೆ ಪ್ರಮಾಣವಚನ ಬೋಧಿಸಿದರು. ಜಿಲ್ಲಾ ಪ್ರಥಮ ಮಹಿಳೆ ಸಂಧ್ಯಾ ಹೆಗಡೆ ಕಾರ್ಯಕ್ರಮ ಉದ್ಘಾಟಿಸಿದರು.

ನೂತನ ಕ್ಲಬ್‌ನ ಅಧ್ಯಕ್ಷರಾಗಿ ಜಯಶ್ರೀ ವಿಜಯ ಕುಮಾರ್ ಶೆಟ್ಟಿ ಕೆಂಜೂರು, ಕಾರ್ಯದರ್ಶಿಯಾಗಿ ವಿನುತಾ ಎಸ್. ಶೆಟ್ಟಿ, ಕೋಶಾಧಿಕಾರಿಯಾಗಿ ಲಕ್ಷ್ಮೀ ಅಡಿಗ ಹಾಗೂ ಇನ್ನಿತರ ಸದಸ್ಯರು ಅಧಿಕಾರ ಸ್ವೀಕರಿಸಿದರು.

ಅತಿಥಿಗಳಾಗಿ ಆಗಮಿಸಿದ್ದ ಕೋಟೇಶ್ವರ ಲಯನ್ಸ್ ಕ್ಲಬ್‌ನ ಅಧ್ಯಕ್ಷೆ ರಮಾ ಬೋಳಾರ್, ಕಾರ್ಯದರ್ಶಿ ಜ್ಯೋತಿ ಶೆಟ್ಟಿ ಹಾಗೂ ಏಕನಾಥ ಬೋಳಾರ್, ರವಿರಾಜ ನಾಯಕ್, ರವೀಂದ್ರ ಜಿ. ಆಚಾರ್ಯ ನೂತನ ಕ್ಲಬ್ ಗೆ ಶುಭ ಹಾರೈಸಿದರು.

ಕ್ಲಬ್ ನ ವಿಸ್ತರಣಾಧಿಕಾರಿ ಮತ್ತು ಸಮ್ಮೇಳನ ಹಾಗೂ ವಿಚಾರ ಸಂಕೀರ್ಣಗಳ ಜಿಲ್ಲಾಧ್ಯಕ್ಷ ಅಕ್ಷಯ್ ಹೆಗ್ಡೆ ಮೊಳಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ‌ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಕೆಂಜೂರಿನ ಎಲ್ಲಾ ಮಹಿಳಾ ಸದಸ್ಯರು ಉಪಸ್ಥಿತರಿದ್ದರು.