ಕಾರ್ಕಳ: ಬೆಳ್ಮಣ್ ಗ್ರಾಮದ ಜಂತ್ರ ಪರಿಸರದಿಂದ ಪಿಲಾರು ಸೂಡ ಕ್ರಾಸ್ ವರೆಗೆ ಸುಮಾರು 180 ರಾಷ್ಟ್ರೀಯ ಸೇವಾ ಯೋಜನಾ ಸ್ವಯಂ ಸೇವಕರು ಶನಿವಾರ ಶ್ರಮದಾನದ ಮೂಲಕ ರಸ್ತೆ ಬದಿಯನ್ನು ಸ್ವಚ್ಛತೆಗೊಳಿಸಿದರು.
ಕಾರ್ಕಳ ಡಾ. ಎನ್ಎಸ್ಎಎಂ ಪ್ರಥಮ ದರ್ಜೆ ಕಾಲೇಜಿನ ಎನ್ಎಸ್ಎಸ್ ಅವಳಿ ಘಟಕಗಳು, ಸ್ವಚ್ಛತಾ ತಂಡ ಬೆಳ್ಮಣ್, ಜೆಸಿಐ ಬೆಳ್ಮಣ್, ಲಯನ್ಸ್ ಕ್ಲಬ್ ಬೆಳ್ಮಣ್, ಲಯನ್ಸ್ ಕ್ಲಬ್ ಸೆಂಚೂರಿ ಬೆಳ್ಮಣ್ ಇವರ ಸಹಭಾಗಿತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಜೆಸಿಐ ಬೆಳ್ಮಣ್ಣು ನಿಕಟ ಪೂರ್ವ ಅಧ್ಯಕ್ಷ ಗಣಪತಿ ಆಚಾರ್ಯ ಕಾರ್ಯಕ್ರಮ ಉದ್ಘಾಟಿಸಿದರು. ಲಯನ್ಸ್ ಜಿಲ್ಲಾ ಗವರ್ನರ್ ಲಯನ್ ಎನ್. ಎಮ್ ಹೆಗ್ಡೆ ಸ್ವಚ್ಛತಾ ಕಾರ್ಯದ ಸ್ಥಳಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳ ನಿಸ್ವಾರ್ಥ ಸೇವಾ ಮನೋಭಾವನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾಲೇಜಿನ ಎನ್ಎಸ್ಎಸ್ ಘಟಕಗಳ ಸಂಯೋಜನಾಧಿಕಾರಿ ಭರತ್ ಎಸ್. ಭಟ್ ಸ್ವಾಗತಿಸಿದರು. ಸಹ ಸಂಯೋಜನಾಧಿಕಾರಿ ಅನುಷಾ ಆಚಾರ್ಯ ವಂದಿಸಿದರು. ಸ್ವಚ್ಛತಾ ಆಂದೋಲನ ಕಾರ್ಯಕ್ರಮದ ರೂವಾರಿಗಳಾದ ವಿಘ್ನೇಶ್ ಶೆಣೈ ಬಿ, ಲಯನ್ ವಿಶ್ವನಾಥ್ ಪಾಟ್ಕರ್, ಜೆಸಿ ರಘನಾಥ್ ನಾಯಕ್ ಪುನಾರ್, ಜೆಸಿ ಸರ್ವಜ್ಞ ತಂತ್ರಿ, ಜೆಸಿ ಐ ಬೆಳ್ಮಣ್ಣಿನ ಅಧ್ಯಕ್ಷ ಜೆಸಿ ಕೃಷ್ಣ ಪವಾರ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.












