ಕಾರ್ಕಳ: ತುಳುನಾಡಿನ ಜನಪದ ಕ್ರೀಡೆ ಕಂಬಳ ಋತು ಪ್ರಾರಂಭಕ್ಕೂ ಮೊದಲು ಕೋಣಗಳನ್ನು ತಯಾರುಗೊಳಿಸುವ ಕುದಿ ಕಂಬಳಕ್ಕೆ (ತರಬೇತಿ ಕಂಬಳಕ್ಕೆ) ಭಾನುವಾರ ಮೂಡುಬಿದಿರೆಯ ಕೋಟಿ-ಚೆನ್ನಯ ಕಂಬಳಕರೆಯಲ್ಲಿ ಚಾಲನೆ ನೀಡಲಾಯಿತು.
ಕಂಬಳ ಅಕಾಡೆಮಿಯ ಸಂಚಾಲಕ ಗುಣಾಪಾಲ ಕಡಂಬ ಅವರು ಚಾಲನೆ ನೀಡಿದರು.
ಕೊಳಕೆ ಇರ್ವತ್ತೂರು ಭಾಸ್ಕರ ಸುಬ್ಬಯ್ಯ ಕೋಟ್ಯಾನ್, ರಂಜಿತ್ ತೋಡಾರು ಮತ್ತಿತರರು ಉಪಸ್ಥಿತರಿದ್ದರು.
ಮಾಸ್ಕ್ ವಿತರಿಸಿ ಜಾಗೃತಿ :
ಮೂಡಬಿದಿರೆ, ಬಾರಾಡಿಬೀಡು, ಮಿಯ್ಯಾರು ಮೂರು ಕಡೆಗಳಲ್ಲಿ ಕುದಿ ಕಂಬಳ ನಡೆಯಿತು. ಕೊರೊನಾ ಹಿನ್ನೆಲೆಯಲ್ಲಿ ಜಾಗೃತಿಗಾಗಿ ಮಾಸ್ಕ್ ಕೂಡ ವಿತರಣೆ ಮಾಡಲಾಯಿತು.
ಬಾರಾಡಿ ಬೀಡು, ಬೇಲಾಡಿಬಾವ, ಮೋರ್ಲಾ, ಬೆಳ್ಳಿಪಾಡಿ ಕೈಪ, ನಾರಾವಿ, ನಕ್ರೆ, ಕಾರಿಂಜ ಕೊಂಬೇಲು ಹೀಗೆ ವಿವಿಧ ಭಾಗಗಳ ವಿವಿಧ ವಿಭಾಗದ ಕೋಣಗಳು ಭಾಗವಹಿಸಿದ್ದವು.












