ಉಡುಪಿ: ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರುತ್ತಿದ್ದ ಸಂದರ್ಭದಲ್ಲಿ ಉಡುಪಿ ಶ್ರೀಕೃಷ್ಣಮಠದ ಗೋಶಾಲೆಯಲ್ಲಿ ಕಪಿಲೆ ಎಂಬ ದೇಸಿ ದನವು ಗಂಡು ಕರುವಿಗೆ ಜನ್ಮ ನೀಡಿದೆ.
ಪರ್ಯಾಯ ಅದಮಾರು ಮಠದ ಈಶಪ್ರಿಯ ಶ್ರೀಗಳ ಅಚ್ಚುಮೆಚ್ಚಿನ ಮಣ್ಣಿನ ಬಣ್ಣ ಕರು ಇದಾಗಿದ್ದು, ಅವರು ಈ ಕರುವಿಗೆ ‘ಶ್ರೀರಾಮ’ ಎಂದು ನಾಮಕರಣ ಮಾಡಿದ್ದಾರೆ.













