ಉಡುಪಿ: ಶ್ರೀ ಕೃಷ್ಣ ಮಠದ ರಾಜಾಂಗಣದ ಶ್ರೀನರಸಿಂಹತೀರ್ಥ ವೇದಿಕೆಯಲ್ಲಿ ಪರ್ಯಾಯ ಶ್ರೀ ಅದಮಾರು ಮಠದ ಆಶ್ರಯದಲ್ಲಿ ಕರ್ನಾಟಕ ರಾಜ್ಯ ವಿಕಲಚೇತನರ ಮಹಾಸಂಘಗಳ ಒಕ್ಕೂಟದ ವತಿಯಿಂದ ಚಾಲನಾ ತರಬೇತಿಯನ್ನು ಪರ್ಯಾಯ ಅದಮಾರು ಶ್ರೀಈಶಪ್ರಿಯತೀರ್ಥ ಶ್ರೀಪಾದರು ಉದ್ಘಾಟಿಸಿದರು.ಒಕ್ಕೂಟದ ಕಾರ್ಯದರ್ಶಿ ಜಗದೀಶ್ ,ಸರಕಾರದಿಂದ ಸಿಗುವ ಸೌಲಭ್ಯಗಳು ವಿಳಂಬವಾಗುತ್ತಿರುವದರಿಂದ ತಾವೇ ವಿಕಲಚೇತನರಿಗೆ ಉಚಿತವಾಗಿ ತ್ರಿಚಕ್ರವಾಹನದ ತರಬೇತಿಯನ್ನು ನೀಡಿ,ಅವರನ್ನು ಬಾಹ್ಯ ಪ್ರಪಂಚಕ್ಕೆ ಕರೆತರುವಲ್ಲಿ ಸಹಕರಿಸಿ,ಮಾತ್ರವಲ್ಲದೆ ವಾಹನದ ಕಂಪೆನಿಯಿಂದ ತಪಾಸಣೆ ನಡೆಸುವಲ್ಲಿ ಒಕ್ಕೂಟ ಮತ್ತು ಇಲಾಖೆಯೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.












