ಮಂಗಳೂರು: ಕಠಿಣ ಪರಿಶ್ರಮ ಸಾಧನೆಯ ಮೂಲಮಂತ್ರ.ಇದು ಕೇವಲ ವಿದ್ಯಾರ್ಥಿ ಜೀವನಕ್ಕೆ ಮಾತ್ರ ಸೀಮಿತವಲ್ಲ. ಜೀವನದುದ್ದಕ್ಕೂ ಪ್ರತೀ ಹಂತದಲ್ಲೂ ಅನ್ವಯಿಸುತ್ತದೆ ಪದವಿ ಪೂರ್ವ ಹಂತದ ಈ ಎರಡು ವರ್ಷದ ವಿದ್ಯಾಭ್ಯಾಸ ಬರೀ ಕಲಿಕೆಯಲ್ಲ ಅದು ನಮ್ಮ ಪೂರ್ಣ ರೂಪ ಬೆಳವಣಿಗೆಗೆ ಸಹಾಯವಾಗಬೇಕು ಎಂಬುದು ಎಕ್ಸಪರ್ಟ್ ವಿದ್ಯಾಸಂಸ್ಠೆಯ ಮುಖ್ಯ ಉದ್ದೇಶವಾಗಿದೆ. ಸಾಧನೆಗೆ ಎಂದು ಎಕ್ಸ್ಪರ್ಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನರೇಂದ್ರಎಲ್ ನಾಯಕ್ ಹೇಳಿದರು.
ಅವರು ಎಕ್ಸ್ಪರ್ಟ್ ಪದವಿ ಪೂರ್ವಕಾಲೇಜು, ಕೊಡಿಯಲ್ ಬೈಲ್ನ ಸಭಾಂಗಣದಲ್ಲಿ ನಡೆದ ಹಳೆ ವಿದ್ಯಾರ್ಥಿಗಳ ಮಹಾಸಭೆ ಎಕ್ಸ್ಸಂಗಮ್’ ಉದ್ಘಾಟಿಸಿ ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ರಾಮಚಂದ್ರಭಟ್ ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಇದೇ ವೇಳೆ ೨೦೨೦ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಹಳೆ ವಿದ್ಯಾರ್ಥಿ ಸಂಘದ ನೂತನ ಅಧ್ಯಕ್ಷರಾಗಿ ಆಕೀಫ಼್, ಉಪಾಧ್ಯಕ್ಷೆಯಾಗಿ ಮೀರಾ ಬಿ.ಎನ್, ಕಾರ್ಯದರ್ಶಿಯಾಗಿ ಚಿರಾಗ್, ಜೊತೆ ಕಾರ್ಯದರ್ಶಿಯಾಗಿ ವಿಶಾಖ, ಪ್ರಾಂತೀಯ ನಿರ್ವಾಹಕರು ಬೆಂಗಳೂರು ವಿಭಾಗಕ್ಕೆ ಕಾರ್ತಿಕ್, ದಕ್ಷಿಣಕನ್ನಡ ಮತ್ತು ಉಡುಪಿ ವಿಭಾಗಕ್ಕೆ ಸಂಭ್ರಮ್ ಶೆಟ್ಟಿ, ಮೈಸೂರು ವಿಭಾಗಕ್ಕೆವರುಣ್, ಉತ್ತರ ಕರ್ನಾಟಕ ವಿಭಾಗಕ್ಕೆಶ್ರಾವಣಿ ಆಯ್ಕೆಯಾದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ರಾಮಚಂದ್ರಭಟ್, ಕಾಲೇಜಿನ ಹಳೆವಿದ್ಯಾರ್ಥಿಯಾದ ಎಕ್ಸ್ಪರ್ಟ್ ಶಿಕ್ಷಣ ಸಂಸ್ಥೆಯ ಮಾಹಿತಿ-ತಂತ್ರಜ್ಞಾನ ವಿಭಾಗದ ನಿರ್ದೇಶಕರಾದ ಅಂಕುಶ್. ಎನ್. ನಾಯಕ್, ವಾಸ್ತುಶಿಲ್ಪಿ ದೀಪಿಕಾ ಎ.ನಾಯಕ್, ೨೦೧೯ನೇ ಸಾಲಿನ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷೆಯಾಗಿದ್ದ ವೃಶಾಲಿ, ಉಪಾಧ್ಯಕ್ಷೆಯಾಗಿದ್ದ ಅಕ್ಷತಾ, ಜೊತೆ ಕಾರ್ಯದರ್ಶಿಯಾಗಿದ್ದ ಸಮರ್ಥ್ ಪ್ರಭು ಎಲ್ಲಾ ವಿಭಾಗದ ಮುಖ್ಯಸ್ಥರು, ಕಾರ್ಯಕ್ರಮ ಸಂಯೊಜಕರಾದ ಝೀಟಾ ಡಿ’ಸೋಜ ಉಪಸ್ಥಿತರಿದ್ದರು.
ಹಳೆ ವಿದ್ಯಾರ್ಥಿಗಳು ಸೇರಿದ್ದ ಈ ದಶಮಾನೋತ್ಸವದ ಸಂಭ್ರಮದಲ್ಲಿ ವಿದ್ಯಾರ್ಥಿಗಳಿಗೆ ಸ್ಪರ್ಧೆಯನ್ನುಏರ್ಪಡಿಸಲಾಗಿತ್ತು. ಇದೇ ವೇಳೆ ಹಲವು ವಿದ್ಯಾರ್ಥಿಗಳು ತಮ್ಮ ಅನಿಸಿಕೆಯನ್ನು ಹಂಚಿಕೊಂಡರು. ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷೆಯಾಗಿದ್ದ ವೃಶಾಲಿ ಸ್ವಾಗತಿಸಿದರು, ಮೀರಾ ಬಿ.ಎನ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.












