ಕುಂದಾಪುರ: ಛಾಯಾಗ್ರಾಹಕರು ತಮ್ಮ ಕಣ್ಣುಗಳನ್ನು ದಾನ ಮಾಡುವ ಮೂಲಕ ಇತರರ ಬಾಳಿಗೆ ಬೆಳಕಾಗುವ ಕೆಲಸಕ್ಕೆ ಮುಂದಾಗಿರುವುದು ಶ್ಲಾಘನೀಯ ಕಾರ್ಯ. ತಮ್ಮ ಮನಸ್ಸು, ಕನಸುಗಳನ್ನು ಜನರಿಗೆ ಅರ್ಪಿಸಿ ಪ್ರಾಮಾಣಿಕ ಸೇವೆ ನೀಡುವ ಛಾಯಗ್ರಾಹಕರಿಗೆ ದೇವರು ಎಂದಿಗೂ ಒಳ್ಳೇದನ್ನೇ ಕರುಣಿಸುತ್ತಾನೆ ಎಂದು ಉದ್ಯಮಿ ಸುರೇಶ್ ಡಿ ಪಡುಕೋಣೆ ಹೇಳಿದರು.
ಅವರು ಸೋಮವಾರ ಸಂಜೆ ಇಲ್ಲಿನ ಬೋರ್ಡ್ ಹೈಸ್ಕೂಲ್ ಮೈದಾನದಲ್ಲಿ ನಡೆದ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್(ರಿ) ಕುಂದಾಪುರ ವಲಯದ ಬೆಳ್ಳಿ ಹಬ್ಬದ ಸವಿ ನೆನೆಪು ಹಾಗೂ 26ನೇ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಸ್ಕೆಪಿಎ ಉಡುಪಿ ಜಿಲ್ಲಾಧ್ಯಕ್ಷ ಶ್ರೀಧರ್ ಶೆಟ್ಟಿಗಾರ್, ಹಿಂದಿನಿಂದಲೂ ಎಸ್ಕೆಪಿಎ ಕುಂದಾಪುರ ವಲಯ ಸಮಾಜಸೇವೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದೆ. ಪ್ರಮೋದ್ ಚಂದನ್ ಅವರ ಮುಂದಾಳತ್ವದಲ್ಲಿ ಸಂಘವು ಅನೇಕ ಚಟುವಟಿಕೆಗಳನ್ನು ನಡೆಸಿದೆ. ನೂತನ ಅಧ್ಯಕ್ಷ ರಾಜಾ ಮಠದಬೆಟ್ಟು ನಾಯಕತ್ವದಲ್ಲಿ ಶೀಘ್ರವೇ ಈ ಭಾಗದಲ್ಲಿ ಛಾಯಾಗ್ರಾಹಕರಿಗೆ ಅಗತ್ಯವಿರುವ ಛಾಯಾ ಭವನ ನಿರ್ಮಾಣಗಳ್ಳಲಿ. ತನ್ಮೂಲಕ ಛಾಯಾಗ್ರಾಹಕರಿಗೆ ಈ ಭವನ ಚಟುವಟಿಕೆಯ ಕೇಂದ್ರವಾಗಲಿ ಎಂದರು.
ಕೆಜಿಎಫ್ ಸಿನೆಮಾ ಸಂಗೀತ ನಿರ್ದೇಶಕ ರವಿ ಬಸ್ರೂರು ಮಾತನಾಡಿ, ಭೂಮಿ ಏನೆ ಕೊಡಲಿ ಆದರೆ ಒಬ್ಬ ರೈತನ ಮನಸ್ಸಲ್ಲಿರುವುದು ಬೆಳೆ ಬೆಳೆಯಬೇಕೆನ್ನುವುದು. ನನ್ನ ಕೆಲಸವೂ ಅಷ್ಟೇ. ಕುಂದಾಪುರ ನನ್ನ ಪುಣ್ಯ ಭೂಮಿ. ಇಲ್ಲಿ ನಾನು ನನ್ನ ಕೆಲಸಗಳನ್ನು ಮಾಡುತ್ತಲೇ ಇರುತ್ತೇನೆ. ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತೇನೆ. ಸೋಲು ಗೆಲುವು ನನಗೆ ಮುಖ್ಯವಲ್ಲ. ಬೆಳೆ ಫಸಲು ಬಿಡುತ್ತದೊ ಇಲ್ಲವೊ ಗೊತ್ತಿಲ್ಲ. ಆದರೆ ಬೆಳೆ ಬೆಳೆಯುವುದು ಮಾತ್ರ ನಿಲ್ಲಿಸಲ್ಲ. ನನ್ನಂತೆಯೇ ಪ್ರತಿಭೆಗಳು ಮೇಲೆ ಬರಬೇಕು. ಅವರಿಗೊಂದು ವೇದಿಕೆ ಸಿಗಬೇಕು ಎನ್ನುವುದಷ್ಟೇ ನನ್ನ ಉದ್ದೇಶ ಎಂದರು.
ಪತ್ರಕರ್ತ ಜಾನ್ ಡಿಸೋಜಾ, ಎಸ್ಕೆಪಿಎನ ಅಶೋಕ್ ಕುಮಾರ್ ಶೆಟ್ಟಿ, ಉದ್ಯಮಿ ಸಂಪತ್ ಕುಮಾರ್ ಶೆಟ್ಟಿ, ಎಸ್ಕೆಪಿಎ ಶ್ರೀಧರ ಹೆಗ್ಡೆ ಮಾತನಾಡಿದರು.
ಎಸ್ಕೆಪಿಎ ಕುಂದಾಪುರ ವಲಯ ನಿಕಟಪೂರ್ವ ಅಧ್ಯಕ್ಷರಾದ ಪ್ರಮೋದ್ ಚಂದನ್ ನೂತನ ಅಧ್ಯಕ್ಷ ರಾಜಾ ಮಠದಬೆಟ್ಟು ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಛಾಯಾ ಪತ್ರಕರ್ತ ಸಂತೋಷ್ ಕುಂದೇಶ್ವರ ಅವರನ್ನು ಸನ್ಮಾನಿಸಲಾಯಿತು.
ಜಿಲ್ಲಾ ಸಮಿತಿಯಲ್ಲಿ ದುಡಿದ ವಿಠಲ್ ಚೌಟ ಹಾಗೂ ಕುಂದಾಪುರ ವಲಯದ ನಿಕಟಪೂರ್ವ ಅಧ್ಯಕ್ಷ ಪ್ರಮೋದ್ ಚಂದನ್ ಅವರನ್ನು ಇದೇ ವೇಳೆಯಲ್ಲಿ ಸನ್ಮಾನಿಸಲಾಯಿತು. ಮುಖ್ಯಅತಿಥಿಗಳಾಗಿ ಉದ್ಯಮಿ ಗಣೇಶ್ ಕಿಣಿ, ಚಂದ್ರಶೇಖರ್ ಶೆಟ್ಟಿ ಕೈಲಾಡಿ, ರಾಬರ್ಟ್ ಡಿಸೋಜಾ, ನಾಗರಾಜ ರಾಯಪ್ಪನಮಠ, ಹರೀಶ್ ಅಡ್ಯಾರ್, ವಾಸುದೇವ್ ರಾವ್, ಗಿರೀಶ್ ಜಿಕೆ, ಅಧ್ಯಕ್ಷ ರಾಜಾ ಮಠದಬೆಟ್ಟು, ಕಾರ್ಯದರ್ಶಿ ಅಮೃತ್ ಬೀಜಾಡಿ, ಕೋಶಾಧಿಕಾರಿ ಗೋಪಾಲ್ ಕಾಂಚನ್, ಬಾಲಕೃಷ್ಣ ಶೆಟ್ಟಿ, ಸುರೇಶ್ ಜಮದಗ್ನಿ, ಚಂದ್ರಶೇಖರ್, ಪ್ರಕಾಶ್ ಕುಂದೇಶ್ವರ್ ಮೊದಲಾಸವರು ಉಪಸ್ಥಿತರಿದ್ದರು.
ಪ್ರಮೋದ್ ಚಂದನ್ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಚಂದ್ರಕಾಂತ್(ಚೆನ್ನ) ಧನ್ಯವಾದವಿತ್ತರು. ಸುರೇಶ್ ಕಾರ್ಯಕ್ರಮವನ್ನು ನಿರೂಪಿಸಿದರು. ಬಾಕ್ಸ್ ಐಟಂ: ಪದಪ್ರದಾನ ಸಮಾರಂಭದ ಬಳಿಕ ಕನ್ನಡಕೋಗಿಲೆ ಖ್ಯಾತಿಯ ಟ್ಯಾಗ್ ಸ್ಟಾರ್ ಅರ್ಜುನ್ ಇಟಗಿ ಅವರಿಂದ ಮನೋರಂಜನಾ ಕಾರ್ಯಕ್ರಮ ನಡೆಯಿತು. ಇಂಟರ್ನ್ಯಾಶನಲ್ ರಿಯಾಲಿಟಿ ಶೋ ವಿನ್ನರ್ ಸೀಜಲಿಂಗ್ ಗೈಸ್ ತಂಡದವರಿಂದ ವಿಶೇಷ ನೃತ್ಯ ಕಾರ್ಯಕ್ರಮ ಹಾಗೂ ವಿಶೇಷ ಆಹ್ವಾನಿತ ತಂಡಗಳಿಂದ “ಕಾಮಿಡಿ ಮಜಾ ವಾರ್” ನಡೆಯಿತು. ರಂಗಕರ್ಮಿ ಜಯಶೇಖರ್ ಮಡಪ್ಪಾಡಿ, ಕನಸು ಕಾರ್ತಿಕ್, ವಿಶಾಲ ಯೋಗೀಶ್ ಆಚಾರ್ಯ ಕಾಮಿಡಿ ವಾರ್ಗೆ ತೀರ್ಪುಗಾರರಾಗಿ ಸಹಕರಿಸಿದರು.
ಶಿವಶಕ್ತಿ ಕಲಾತಂಡ ಕನ್ನುಕೆರೆ ಪ್ರಥಮ, ಕಲಾಸ್ಪೂರ್ತಿ ದ್ವಿತೀಯ ಹಾಗೂ ಕಲಾಶಕ್ತಿ ಕಲಾತಂಡ ತೃತೀಯ ಸ್ಥಾನ ಪಡೆದುಕೊಂಡಿತು. ವಿಜೇತ ತಂಡಕ್ಕೆ ನಗದು ಹಾಗೂ ಪ್ರಶಸ್ತಿ ನೀಡಿ ಗೌರವಿಸಲಾಯಿತು.












