ಉಡುಪಿ: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ ) ನೇತ್ರಾವತಿ ವಲಯ ಕರ್ನಾಟಕ. ವಿವೇಕಾನಂದ ಯೋಗ ಶಾಖೆ ಆತ್ರಾಡಿ ಇದರ ವಾರ್ಷಿಕೋತ್ಸವ ಕಾರ್ಯಕ್ರಮವು ಸವ್ಯಸಾಚಿ ಶಿಶು ಮಂದಿರದ ಸಭಾಂಗಣದಲ್ಲಿ ಪಾದೆಕಲ್ ವಿಷ್ಣು ಭಟ್ ರವರ ಅದ್ಯಕ್ಷತೆಯಲ್ಲಿ ಜರಗಿತು.
ಮುಖ್ಯ ಅತಿಥಿ ಯೋಗ ಗುರು ಶ್ರೀ ಸುದರ್ಶನ್ ರವರು ಶ್ರೀ ರಾಮಸ್ವಾಮಿ ಯವರಿಂದ 45 ವರ್ಷಗಳ ಹಿಂದೆ ಸ್ಥಾಪನೆ ಗೊಂಡ ಪತಂಜಲಿ ಯೋಗ ಸಂಸ್ಥೆಯು “ಸಂಸ್ಕಾರ ಸಂಘಟನೆ ಸೇವೆ ” ಎಂಬ ದ್ಯೇಯ ವಾಕ್ಯದಡಿಯಲ್ಲಿ ಮಾಡುತ್ತಿರುವ ಉಚಿತ ಯೋಗ ಶಿಕ್ಷಣದ ವಿಚಾರವನ್ನು ತಿಳಿಸಿದರು.

ವೇದಿಕೆಯಲ್ಲಿ ಸ್ಥಳೀಯ ಪ್ರಮುಖ ಹರೀಶ್ ಹೆಗ್ಡೆ ಪರೀಕ, ರಾಜಂಗಣ ಶಾಖೆಯ ಶ್ರೀಮತಿ ಲಲಿತಾ ಕೇದ್ಲಾಯ, ಡಾ.ದೀಪ್ತಿ ಉದಯಪುರ, ಹಿರಿಯರಾದ ರಮಾನಾಥ್ ನಾಯಕ್ ಮುಂತಾದವರು ಉಪಸ್ಥಿತರಿದ್ದರು.

ಕಾರ್ಯಕ್ರದಲ್ಲಿ ಯೋಗ ಸಮಿತಿ ಯ ಜಿಲ್ಲಾ ಪ್ರಮುಖ ರಾದ ಗುರುರಾಜ ರಾವ್, ಮೋಹನ್ ರಾವ್ ಮಾರ್ಪಳ್ಳಿ ಶ್ರೀಮತಿ ವಾಣಿ, ಶ್ರೀಮತಿ ಸುಷ್ಮಾ ಮತ್ತು ಉಡುಪಿ ಅಭಿರಾಮ ಧಾಮ ಶಾಖೆಯ ಸದಸ್ಯರು , ಸ್ಥಳೀಯ ಪ್ರಮುಖರಾದ ಹರೀಶ್ ಮೆಡಿಕಲ್, ರತ್ನಾಕರ ಶೆಟ್ಟಿ, ಗಂಗಾಧರ್ ಪ್ರಭು ಜಡ್ಡು, ಬಾಲಕೃಷ್ಣ ಹೆಗ್ಡೆ, ಸದಾಶಿವ ನಾಯಕ್, ಅಪ್ಪು ನಾಯಕ್, ರಾಜೀವ ಕರ್ಕೇರ ಮುಂತಾದವರು ಉಪಸ್ಥಿತರಿದ್ದರು.
ಆರಂಭದಲ್ಲಿ ಅಶೋಕ್ ಕಾಂಚನ್ ರವರ ನೇತೃತ್ವದಲ್ಲಿ ಯೋಗ ಬಂದುಗಳಿಂದ ಭಜನೆ ಕಾರ್ಯಕ್ರಮ ನಡೆಯಿತು. ಸವ್ಯ ಸಾಚಿ ಶಿಶು ಮಂದಿರದ ಪುಟಾಣಿ ಗಳಿಂದ ಸಂಸ್ಕೃತ ಭಾಷ್ ಹಾಡಿನ ನೃತ್ಯ ಮತ್ತು ಮಂಕು ತಿಮ್ಮನ ಕಗ್ಗದ ಹಾಡನ್ನು ಹಾಡಿದರು. ಅಭಿರಾಮದಾಮ ಶಾಖೆ ಉಡುಪಿ ಇದರ ಮಕ್ಕಳಿಂದ ಯೋಗ ನೃತ್ಯ ಕಾರ್ಯಕ್ರಮ ನಡೆಯಿತು. ಮತ್ತು ಸಾಮೂಹಿಕ ಭಕ್ತಿ ಗೀತೆಯನ್ನು ಹಾಡಿದರು.
ಯೋಗ ಬಂಧು ಶ್ರೀಮತಿ ಪ್ರಮೀಳಾ ಶೆಟ್ಟಿಗಾರ್ ರವರು ಎಲ್ಲರನ್ನೂ ಸ್ವಾಗತಿಸಿದರು. ಯೋಗ ಬಂಧು ಶ್ರೀಮತಿ ಕುಸುಮ ರವರು ಎಲ್ಲರಿಗೂ ಧನ್ಯವಾದ ವನ್ನಿತ್ತರು. ಅಶೋಕ್ ಕಾಂಚನ್ ರವರು ಕಾರ್ಯಕ್ರಮದ ನಿರೂಪಣೆ ಮಾಡಿದರು.












