ಎಲ್‌ಐಸಿ ವಲಯ ಸಲಹಾ ಸಮಿತಿ ಸದಸ್ಯೆಯಾಗಿ ಡಾ.ಉಷಾ ಪ್ರಭಾ ಎನ್.ನಾಯಕ್ ಪುನರ್ ನೇಮಕ

ಮಂಗಳೂರು: ಭಾರತೀಯಜೀವ ವಿಮಾ ನಿಗಮದ ವಲಯ ಸಲಹಾ ಸಮಿತಿಯ ಸದಸ್ಯರಾಗಿ ಎರಡನೆಯ ಅವಧಿಗೆ ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷೆ ಡಾ.ಉಷಾಪ್ರಭಾ ಎನ್. ನಾಯಕ್‌ ಅವರನ್ನು ಪುನರ್ ನೇಮಕ ಮಾಡಲಾಗಿದೆ.

ಎರಡು ವರ್ಷದ ಎಲ್‌ಐಸಿಯ ಸೌತ್ ಸೆಂಟ್ರಲ್ ವಲಯದ ಸಲಹಾ ಸಮಿತಿಗೆ ಎರಡನೆಯ ಅವಧಿಗೆ ಅವರನ್ನು ಪುನರ್‌ ನೇಮಕ  ಮಾಡಲಾಗಿದೆ.

ಜೀವ ವಿಮಾ ನಿಗಮದ ಬೆಳವಣಿಗೆ ದೃಷ್ಟಿಯಿಂದ ನಡೆಯುವ ಸಭೆಗಳಲ್ಲಿ ಭಾಗವಹಿಸಿ ವಿಚಾರ ವಿಮರ್ಶೆ ಮಾಡಿ ಚರ್ಚಿಸಿ ಸೂಕ್ತ ಶಿಫಾರಸು ನೀಡುವ ಉದ್ದೇಶದಿಂದ ಇವರನ್ನು ನೇಮಕ ಮಾಡಲಾಗಿದೆ.

ಮಂಗಳೂರಿನ ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ  ಎಲ್‌ಐಸಿ ಮಂಗಳೂರು ಶಾಖಾ ಪ್ರಬಂಧಕ  ವಿ.ಎಸ್.ಕುಮಾರ್‌, ಡಾ.ಉಷಾಪ್ರಭಾ ಎನ್. ನಾಯಕ್‌ ಅವರಿಗೆ ಆಯ್ಕೆಯ ಅಧಿಕೃತ ಪತ್ರವನ್ನು ನೀಡಿದರು.

ಈ ಸಂದರ್ಭದಲ್ಲಿ ಎಲ್‌ಐಸಿಯ ಅಭಿವೃದ್ಧಿ ಅಧಿಕಾರಿ ಜಗದೀಶ್‌ ವಿ.ಗೋಳಿ,  ದೀಪಿಕಾ ಎ.ನಾಯಕ್, ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ರಾಮಚಂದ್ರ ಭಟ್, ಕನ್ನಡ ವಿಭಾಗದ ಮುಖ್ಯಸ್ಥ ಕರುಣಾಕರ ಬಳ್ಕೂರು, ಸಾರ್ವಜನಿಕ ಸಂಪರ್ಕಅಧಿಕಾರಿ ಸುರೇಶ್‌ಕಾಮತ್‌ ಅವರು ಉಪಸ್ಥಿತರಿದ್ಧರು.

ಕರುಣಾಕರ ಬಳ್ಕೂರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.