ಶಿರಿಯಾರ: ಬ್ರಹ್ಮಾವರ ತಾಲೂಕಿನ ಶಿರಿಯಾರ- ಕಲ್ಮರ್ಗಿ ಶ್ರೀ ರಾಮ ಮಂದಿರದಲ್ಲಿ ಶ್ರೀ ರಾಮಾಂಜನೇಯ ಸೇವಾ ಟ್ರಸ್ಟ್ನ ಸಭೆಯು ಜೂನ್ 21ರಂದು ಜರುಗಿತು. ಟ್ರಸ್ಟಿ ಗಣೇಶ ನಾಯಕ್ ಸೂಚಿಸಿದರು. ಹಾಗೂ ಹಿರಿಯರಾದ ಕೃಷ್ಣಾನಂದ ಶೆಣೈ ಅನುಮೋದಿಸಿದರು. ಸರ್ವಾನುಮತದಿಂದ ಅಧ್ಯಕ್ಷರಾಗಿ ನ್ಯಾಯವಾದಿ, ನೋಟರಿ, ಸಾಮಾಜಿಕ ಕಾರ್ಯಕರ್ತ ಶಿರಿಯಾರ ಕಲ್ಮರ್ಗಿ ಪ್ರಭಾಕರ ನಾಯಕ್ ಆಯ್ಕೆ ಮಾಡಲಾಯಿತು. ಶ್ರೀ ರಾಮಾಂಜನೇಯ ಸೇವಾ ಟ್ರಸ್ಟ್ ನ ಯುವ ಮುಖಂಡ ರವೀಂದ್ರ ಹೆಗ್ಡೆ ಎತ್ತಿನಟ್ಟಿರವರನ್ನು ಪ್ರಧಾನ ಕಾರ್ಯದರ್ಶಿ ಮತ್ತು ಉದ್ಯಮಿ ಶ್ರೀ ದಾಮೋದರ ನಾಯಕ್ ಕಲ್ಮರಗಿ ರವರನ್ನು ಖಜಾಂಚಿಯಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಟ್ರಸ್ಟಿ ಶ್ರೀ ಸರ್ವೋತ್ತಮ ಶಾನುಭೋಗ್ ಹಿರಿಯ ಸಲಹೆಗಾರರಾದ ರತ್ನಾಕರ ಶೆಣೈ ಇತರರು, ಇನ್ನನೇಕರು ಮುಂತಾದವರು ಹಾಜರಿದ್ದರು. ಶ್ರೀ ರಾಮಾಂಜನೇಯ ಸೇವಾ ಟ್ರಸ್ಟ್ ನ ಸ್ಥಾಪಕ ಅಧ್ಯಕ್ಷ ಪ್ರಭಾಕರ ನಾಯಕ್ ರವರು ಧನ್ಯವಾದಗೈದರು. ಮುಂದಿನ ಶ್ರೀ ರಾಮಾಂಜನೇಯ ಸೇವಾ ಟ್ರಸ್ಟ್ ನ ಸಭೆಯನ್ನು ಜುಲೈ 4ರಂದು ಮುಂದೂಡಲಾಯಿತು. ಟ್ರಸ್ಟಿ ಶ್ರೀ ಗಣೇಶ ನಾಯಕ್ ಕಾರ್ಯಕ್ರಮ ನಿರೂಪಿಸಿದರು.












