ಮಂಗಳೂರು:ದೇಶದ ಪ್ರತಿಷ್ಠಿತ ಐಐಟಿಗಳಲ್ಲಿ ಎಂಜಿನಿಯರಿಂಗ್ ಶಿಕ್ಷಣದ ಪ್ರವೇಶಕ್ಕಾಗಿ ನಡೆಯುವ ಅಖಿಲ ಭಾರತ ಮಟ್ಟದ ಜೆಇಇ ಅಡ್ವಾನ್ಸ್ಡ್ ಪರೀಕ್ಷೆಯ ಜನರಲ್ ಮೆರಿಟ್ ವಿಭಾಗದಲ್ಲಿ ಮಂಗಳೂರಿನ ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜಿನ ಅನಿಕೇತ್ ಮಗದಂ ಜನರಲ್ ಕೆಟಗರಿ ವಿಭಾಗದಲ್ಲಿ 1021ನೇ ರ್ಯಾಂಕ್ ಪಡೆದುಕೊಂಡಿದ್ದಾರೆ.
ಜನರಲ್ ಮೆರಿಟ್ ವಿಭಾಗದಲ್ಲಿ ಸಿದ್ದೇಶ್ ಬಿ.ದಮ್ಮಳ್ಳಿ 3,538ನೇ ರ್ಯಾಂಕ್, ಸಾಯಿಶ್ ಶ್ರವಣ ಪಂಡಿತ್ 4562 ನೇ ರ್ಯಾಂಕ್, ಕೆ.ರೆಹಾನ್ ಮೊಹಮ್ಮದ್ 5712ನೇ ರ್ಯಾಂಕ್, ಅವನೀಶ್ ಬಿ. 6413ನೇ ರ್ಯಾಂಕ್, ಯಶಸ್ ಯೋಗೀಂದ್ರ 9088ನೇ ರ್ಯಾಂಕ್, ಧನುಷ್ ಎಚ್.ಎ. 9876 (ಕ್ಯಾಟಗರಿ ವಿಭಾಗದಲ್ಲಿ ೨೨೪೧ನೇ ರ್ಯಾಂಕ್) ಪಡೆದಿದ್ದಾರೆ.
ಕೆಟಗರಿ ವಿಭಾಗದಲ್ಲಿ ಪ್ರಜ್ಞಾ ಮಂಜುನಾಥ 112ನೇ ರ್ಯಾಂಕ್, ಸಾಯಿ ಲಕ್ಷ್ಮೀನಾರಾಯಣನ್ 1066ನೇ ರ್ಯಾಂಕ್, ಶೋಬಿತ್ ಪ್ರಕಾಶ್ ಎಸ್. 1287ನೇ ರ್ಯಾಂಕ್, ಸೃಷ್ಟಿ ಕಿರಣ್ ಗಂಗಣ್ಣವರ್ 1426ನೇ ರ್ಯಾಂಕ್, ಎಸ್.ಪಿ. ದುಷ್ಯಂತ್ ಜೈನ್ ಎಸ್ 2260 ನೇ ರ್ಯಾಂಕ್, ಪ್ರೇಮ್ ವಿ.ಅರ್ಕಸಾಲಿ 3019ನೇ ರ್ಯಾಂಕ್, ಯಶಸ್ ರೆಡ್ಡಿ 3058 ನೇ ರ್ಯಾಂಕ್, ಪ್ರತೀಕ್ಷಾ ಎಂ.ಆರ್.ಎಸ್.3264 ನೇ ರ್ಯಾಂಕ್, ವಚನ ಅಲ್ಲಮಪ್ರಭು ಬಾಗೋಡಿ 3645ನೇ ರ್ಯಾಂಕ್, ಇಂಚರ ಪ್ರವೀಣ್ಕುಮಾರ್ ಚವಾನ್ 3960ನೇ ರ್ಯಾಂಕ್, ಹೊಯ್ಸಳ ಚಂದ್ರ ದೇವ್ 4033ನೇ ರ್ಯಾಂಕ್, ಮೊಹಮ್ಮದ್
ಬಿಲಾಲ್ ಶಿಬ್ಲಿ 4289 ನೇ ರ್ಯಾಂಕ್, ಪಾವನಿ ಶೆಟ್ಟಿ ಆರ್ ಎಸ್ 4923 ನೇ ರ್ಯಾಂಕ್ ಪಡೆದುಕೊಂಡಿದ್ದಾರೆ.
ಖರಗ್ಪುರ್, ಮುಂಬಯಿ, ಚೆನೈ, ಕಾನ್ಪುರ, ಹೊಸದಿಲ್ಲಿ,
ಗೌಹಾಟಿ, ರೂರ್ಕಿ, ರೋಪರ್, ಭುವನೇಶ್ವರ, ಗಾಂಧಿನಗರ,
ಹೈದರಾಬಾದ್, ಜೋದಪುರ, ಪಾಟ್ನಾö, ಇಂದೋರ್, ಮಂಡಿ, ವಾರಣಾಸಿ, ಪಾಲಕ್ಕಾಡ್, ತಿರುಪತಿ, ಧನ್ಬಾದ್, ಭಾಲೈö, ಗೋವಾ, ಜಮ್ಮು, ಧಾರವಾಡ ಐಐಟಿಗಳಲ್ಲಿ ಕಲಿಯುವ ಅವಕಾಶ ಈ ವಿದ್ಯಾರ್ಥಿಗಳಿಗೆ ದೊರೆತಿದೆ. ರ್ಯಾಂಕ್ ವಿಜೇತರಾಗಿರುವ ಎಲ್ಲ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್ ಅಭಿನಂದಿಸಿದ್ದಾರೆ.












