ಮಂಗಳೂರು: ಬ್ಯಾಂಕ್ ಗಳ ವಿಲೀನ ಖಂಡಿಸಿ ಮಂಗಳೂರಲ್ಲಿ‌ ಪ್ರತಿಭಟನೆ 

ಮಂಗಳೂರು: ಬ್ಯಾಂಕುಗಳ ತವರು ಅವಿಭಜಿತ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಹುಟ್ಟಿದ ಸಿಂಡಿಕೇಟ್ ಬ್ಯಾಂಕ್, ಕೆನರಾ ಬ್ಯಾಂಕ್ ಮತ್ತು ಕಾರ್ಪೊರೇಷನ್ ಬ್ಯಾಂಕುಗಳ ವಿಲೀನ ಮಾಡಿದ ಕೇಂದ್ರ ಸರಕಾರದ ಕ್ರಮವನ್ನು ವಿರೋಧಿಸಿ ಮಂಗಳೂರಿನಲ್ಲಿ ಬ್ಯಾಂಕ್ ನೌಕರರು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.
ಮಂಗಳೂರಿನ‌ ಪಾಂಡೇಶ್ವರದಲ್ಲಿರುವ ಕಾರ್ಪೊರೇಷನ್ ಬಳಿ ಪ್ರತಿಭಟನೆ ನಡೆಸಿದ ಬ್ಯಾಂಕ್ ನೌಕರರು, ಬ್ಯಾಂಕ್ ವಿಲೀನದಿಂದ ದೇಶದ ಆರ್ಥಿಕ ಸ್ಥಿತಿಗೆ ಸಹಾಯವಾಗುವುದಿಲ್ಲ. ಇದರಿಂದಾಗಿ ಗ್ರಾಹಕರಿಗೆ ಹಾಗೂ ಬ್ಯಾಂಕ್ ನೌಕರಿಗೆ ಸಮಸ್ಯೆ ಆಗುತ್ತದೆ.‌ ಅಲ್ಲದೇ ಈ ಪ್ರಕ್ರಿಯೆಯಿಂದ ನೌಕರರು ಬೇರೆ ಕಡೆ ಅನಿವಾರ್ಯ ವಾಗಿ ವರ್ಗಾವಣೆ ಆಗಬೇಕಾಗುತ್ತದೆ. ವಿಲೀನದಿಂದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಯಾಗುವುದಿಲ್ಲ‌.
ಹಾಗಾಗಿ ಕೇಂದ್ರ ವಿಲೀನ ಪ್ರಕ್ರಿಯೆ ನಿರ್ಧಾರ ಹಿಂಪಡೆಯದಿದ್ದರೆ ಕಾನೂನು ಹೋರಾಟ ಮಾಡುತ್ತೇವೆ ಎಂದು ಹೇಳಿದರು.