ಉಡುಪಿ: ಸಿಎ ಅಂತಿಮ ಪರೀಕ್ಷೆಯಲ್ಲಿ ಎಂ. ಸಮೀರ ಆಚಾರ್ಯ ತೇರ್ಗಡೆ

ಉಡುಪಿ: ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆ (ಐಸಿಎಐ) ನವೆಂಬರ್ ತಿಂಗಳಲ್ಲಿ ನಡೆಸಿದ ಸಿಎ ಅಂತಿಮ ಪರೀಕ್ಷೆಯಲ್ಲಿ ಎಂ. ಸಮೀರ ಆಚಾರ್ಯ ಪ್ರಥಮ ಪ್ರಯತ್ನದಲ್ಲಿ ತೇರ್ಗಡೆಯಾಗಿದ್ದಾರೆ.​

ಅವರು ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಹಳೆವಿದ್ಯಾರ್ಥಿ ಹಾಗೂ ​ಚಿಟ್ಪಾಡಿ ನಿವಾಸಿ ನಿವೃತ್ತ ​ಬಿಎಸ್ ಎನ್ ಎಲ್ ಅಕೌಂಟ್ಸ್​ ಆಫೀಸರ್ ಎಂ​ ಶ್ರೀವತ್ಸ ಆಚಾರ್ಯ ಮತ್ತು ಉಡುಪಿ ಅಂಚೆ ಇಲಾಖೆ ಉದ್ಯೋಗಿ ಜ್ಯೋತಿ ಎಸ್ ಆಚಾರ್ಯ ದಂಪತಿಗಳ ಸುಪುತ್ರ.​

ಅವರು ಉಡುಪಿಯ ಭಾರತೀಶ ಆಂಡ್ ​ಅಸೋಸಿಯೇಟ್ಸ್ ನಲ್ಲಿ ಆರ್ಟಿಕಲ್ ಶಿಪ್ ಮಾಡಿದ್ದರು.