ಬಂಟ್ವಾಳ: ಡೆಂಗ್ಯೂಗೆ ವ್ಯಕ್ತಿ ಮೃತ್ಯು.

ಬಂಟ್ವಾಳ: ವ್ಯಕ್ತಿಯೊಬ್ಬರು ಡೆಂಗ್ಯೂ ಜ್ವರದಿಂದ ದೇರಳಕಟ್ಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಶನಿವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಮೃತರನ್ನು ಶಂಭೂರು ಗರಡಿ ಮನೆ ನಿವಾಸಿ ಯತೀಶ್ (50).

ಮೂಲತಃ ಬಂಟ್ವಾಳ ಶಂಭೂರು ನಿವಾಸಿ, ಪ್ರಸ್ತುತ ಪುತ್ತೂರಿನ ಕಬಕದಲ್ಲಿ ನೆಲೆಸಿದ್ದು, ಇವರಿಗೆ ಜು. 10ರಂದು ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬಿ.ಸಿ.ರೋಡಿನ ಕೆಲಸದ ಸ್ಥಳದಿಂದ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಔಷಧಕ್ಕಾಗಿ ತೆರಳಿದ್ದರು.

ಅಲ್ಲಿ ಅವರನ್ನು ಪರೀಕ್ಷಿಸಿದಾಗ ಡೆಂಗ್ಯು ಪಾಸಿಟಿವ್ ಬಂದಿದ್ದು, ಪ್ಲೇಟ್ ಲೆಟ್ ಕೌಂಟ್ ತೀರಾ ಕಡಿಮೆ ಕಂಡುಬಂದಿತ್ತು. ಹೀಗಾಗಿ ಹೆಚ್ಚಿನ ಚಿಕಿತ್ಸೆಗೆ ದೇರಳಕಟ್ಟೆ ಆಸ್ಪತ್ರೆಗೆ ಸಾಗಿಸಲಾಗಿತ್ತು.