ಮಂಗಳೂರು: ಕರಾವಳಿಯಾದ್ಯಂತ ಭಾರೀ ಮಳೆ: ತೀವ್ರಗೊಂಡ ಕಡಲ್ಕೊರೆತ

ಮಂಗಳೂರು: ಕರಾವಳಿಯಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಅರಬ್ಬೀ ಸಮುದ್ರ ಪ್ರಕ್ಷುಬ್ಧಗೊಂಡಿದೆ.
ಹೀಗಾಗಿ ಕಡಲ್ಕೊರೆತ ತೀವ್ರಗೊಂಡಿದ್ದು, ಮಂಗಳೂರು ‌ಹೊರವಲಯ ಉಳ್ಳಾಲ ವ್ಯಾಪ್ತಿಯ ಸೋಮೇಶ್ವರ ಬೆಟ್ಟಂಪಾಡಿಯಲ್ಲು ಅಲೆಗಳ ರಭಸಕ್ಕೆ ರಸ್ತೆ ಸಮುದ್ರ ಪಾಲಾಗಿದೆ. ಸೋಮೇಶ್ವರ, ಉಚ್ಚಿಲ, ಕೈಕೊ
ಪ್ರದೇಶದಲ್ಲಿ ಕಡಲ್ ಕೊರೆತ ತೀವ್ರಗೊಂಡಿದೆ. ಅನೇಕ ಮನೆಗಳು ಅಪಾಯದ ಅಂಚಿನಲ್ಲಿದೆ. ಈಗಾಗಲೇ ಜಿಲ್ಲಾಡಳಿತ ಮೀನುಗಾರರಿಗೆ, ಹಾಗೂ ನದಿ ತಟದಲ್ಲಿ ವಾಸಿಸುವ ಮನೆಗಳಿಗೆ ಎಚ್ಚರಿಯನ್ನು ನೀಡಿದೆ.
ಜಿಲ್ಲೆಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ರೆಡ್ ಅಲಟ್೯ ಘೋಷಿಸಲಾಗಿದೆ.