ಎ.17 ರಂದು ಮುಂಬೈ ರಾಜಾಪುರ ಸಾರಸ್ವತ ಸಂಘದ 75 ನೇ ವರ್ಷದ ಸಂಭ್ರಮಾಚರಣೆ

ಮುಂಬೈ: ಮುಂಬೈ ಸಾರಸ್ವತರ ಅತೀ ಹಿರಿಯ ಸಂಸ್ಥೆಯಾದ ರಾಜಾಪುರ ಸಾರಸ್ವತ ಸಂಘ (ರಿ)ವು ತನ್ನ ಅಮೃತ ಮಹೋತ್ಸವದ ಸಂಭ್ರಮದಲ್ಲಿದ್ದು ಎ.17 ರಂದು ತನ್ನ 75ನೆ ವರ್ಷಾಚರಣೆಯನ್ನು ಆಚರಿಸಲಿದೆ.

ಪ್ರಾತಃಕಾಲ 7 ಗಂಟೆಗೆ ಪರೇಲ್ ನ ಸ್ವಂತ ಕಟ್ಟಡದಲ್ಲಿಗಣಪತಿ ಹೋಮ, 10.30 ಕ್ಕೆ ಸಯಾನ್ ಪೂರ್ವದ ಜಿಎಸ್ ಬಿ ಸೇವಾಮಂಡಲದ ಸಭಾಭಾವನದಲ್ಲಿ ಸತ್ಯನಾರಾಯಣ ಮಹಾ ಪೂಜೆ ಹಾಗೂ ಚೈತ್ರಗೌರೀ ಅರಶಿನ ಕುಂಕುಮ ಕಾರ್ಯಕ್ರಮ ಜರುಗಲಿದೆ.

ಅಪರಾಹ್ನ 2 ಗಂಟೆಗೆ ಸಭಾಕಾರ್ಯಕ್ರಮವಿದ್ದು 75 ನೆಯ ವರ್ಷಾಚರಣೆಯ ಕಾರ್ಯಕ್ರಮಗಳ ವಿದ್ಯುಕ್ತ ಉದ್ಘಾಟನೆ ಜರಗಲಿರುವುದು. ಮುಖ್ಯ ಅತಿಥಿಗಳಾಗಿ ಬೆಂಗಳೂರು ರಾಜಾಪುರ ಸಾರಸ್ವತ ಸಂಘದ ಅಧ್ಯಕ್ಷ ಡಿ. ನಾಗೇಂದ್ರ ಕಾಮತ್ , ಪದ್ಮಶ್ರೀ ಎಚ್.ಸದಾನಂದ ಕಾಮತ್ ಹಾಗೂ ಮುಂಬೈ ಸಂಘದ ಮಾಜಿ ಅಧ್ಯಕ್ಷ ಮಾಧವ ವಿ. ಪ್ರಭು ಉಪಸ್ಥಿತರಿರುವರು.

ದೂರದೃಷ್ಟಿಯುಳ್ಳ ಸಮಾಜದ ಹಿರಿಯರು 1950 ನೆಯ ಇಸವಿ ಮಾರ್ಚ್ ತಾ.15 ರ ರಾಮ ನವಮಿಯಂದು ಈ ಸಂಸ್ಥೆಯನ್ನು ಹುಟ್ಟುಹಾಕಿದ್ದು ವಿವಿಧ ಸಮಾಜಪರ ಕಾರ್ಯಕ್ರಮಗಳನ್ನು ಜರಗಿಸಿಕೊಂಡು ಬರುತ್ತಾ ಇದೀಗ ಜರಗುವ 75 ವರ್ಷಾಚರಣೆಯ ಆರಂಭೋತ್ಸವಕ್ಕೆ ಮಹಾರಾಷ್ಟ್ರದಾದ್ಯಂತ ಇರುವ ಸಮಾಜ ಸದಸ್ಯ ಬಂಧುಗಳೆಲ್ಲರೂ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸ ಬೇಕಾಗಿ ಅಧ್ಯಕ್ಷ ರಾಮಚಂದ್ರ ಎಸ್. ನಾಯಕ್ , ಕಾರ್ಯದರ್ಶಿ ರಮೇಶ ಯು.ಕಾಮತ್ ಹಾಗೂ ಖಜಾಂಚಿ ಅನಿಲ್ ಪಿ. ನಾಯಕ್ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ

ವರದಿ: ಪಿ.ಆರ್.ರವಿಶಂಕರ್ ಮುಂಬೈ, 8483980035