ಮಣಿಪಾಲದ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರದ 3ನೇ ವಾರ್ಷಿಕೋತ್ಸವ

ಮಣಿಪಾಲ: ಮಣಿಪಾಲ ಕೆಎಂಸಿ ಆಸ್ಪತ್ರೆಯ ಸಮಗ್ರ ಕ್ಯಾನ್ಸರ್ ಕೇರ್ ಸೆಂಟರ್ (MCCCC) ತನ್ನ 3 ನೇ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಿತು.

ಯೂನಿಯನ್ ಫಾರ್ ಇಂಟರ್ನ್ಯಾಷನಲ್ ಕ್ಯಾನ್ಸರ್ ಕಂಟ್ರೋಲ್ (UICC) ಅಧ್ಯಕ್ಷ ಡಾ. ಅನಿಲ್ ಡಿ ಕ್ರೂಜ್ ಮಾತನಾಡಿ, ಕ್ಯಾನ್ಸರ್ ತಡೆಗಟ್ಟುವ ಪ್ರಾಮುಖ್ಯತೆ, ಕ್ಯಾನ್ಸರ್ ಚಿಕಿತ್ಸೆಯಲ್ಲಿ ಚಿಕಿತ್ಸೆಯ ಸಮಾನತೆ  , ವೆಚ್ಚ-ಪರಿಣಾಮಕಾರಿ ನವೀನ ಕ್ಯಾನ್ಸರ್ ಸಂಶೋಧನೆ ಮತ್ತು ಗುಣಮಟ್ಟದ ಜೀವನ ಕ್ರಮಗಳ ಕುರಿತು ಮಾಹಿತಿ ನೀಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಹೆ ಮಣಿಪಾಲದ ಸಹ ಕುಲಪತಿಗಳಾದ  ಡಾ. ಎಚ್.ಎಸ್.ಬಲ್ಲಾಲ್ ಅವರು, ಆರಂಭದಲ್ಲೇ  ಪತ್ತೆ ಹಚ್ಚುವುದು, ಉತ್ತಮ ಗುಣಮಟ್ಟದ ಚಿಕಿತ್ಸೆ ಮತ್ತು ಉಪಶಾಮಕ ಆರೈಕೆಯ ಅಗತ್ಯದ ಬಗ್ಗೆ ತಿಳಿಸಿದರು.

ವಸಂತಿ ಆರ್ ಪೈ, ಟ್ರಸ್ಟಿ, ಮಾಹೆ ಟ್ರಸ್ಟ್, ಮಣಿಪಾಲ, ಲೆಫ್ಟಿನೆಂಟ್ ಜನರಲ್ (ಡಾ) ಎಮ್‌ ಡಿ ವೆಂಕಟೇಶ್ – ಉಪಕುಲಪತಿ, ಮಾಹೆ ಮಣಿಪಾಲ, ಡಾ. ಪಿಎಲ್‌ಎನ್‌ಜಿ ರಾವ್ ಸಹ ಉಪಕುಲಪತಿಗಳು , ಆರೋಗ್ಯ ವಿಜ್ಞಾನ ವಿಭಾಗ, ಮಾಹೆ ಮಣಿಪಾಲ ಅವರು ಗೌರವ ಅತಿಥಿಗಳಾಗಿದ್ದರು.

ಮಾಹೆಯ ಉಪಕುಲಪತಿ (ಲೆಫ್ಟಿನೆಂಟ್ ಜನರಲ್ ) ಡಾ. ಎಂ. ಡಿ ವೆಂಕಟೇಶ್ ಮಾತನಾಡಿ, ಮಾಹೆಯ ಮುಂಬರುವ ಯೋಜನೆಗಳಾದ ಮಾರಣಾಂತಿಕ ಕಾಯಿಲೆ ಇರುವ ರೋಗಿಗಳಿಗೆ ಅವಶ್ಯವಾದ ಮಣಿಪಾಲ್ ವಿಶ್ರಾಂತಿ ಮತ್ತು ಉಪಶಾಮಕ ಆರೈಕೆ ಕೇಂದ್ರ ಮತ್ತು ಕ್ಯಾನ್ಸರ್ ಪೀಡಿತ ಮಕ್ಕಳಿಗೆ ಮತ್ತು ಅವರ ಕುಟುಂಬಗಳಿಗೆ ಮನೆಯಿಂದ ಹೊರಗೆ ಮನೆ  ಸೌಲಭ್ಯದ ಕುರಿತು ಮಾಹಿತಿ ನೀಡಿದರು.

ಮಣಿಪಾಲ ಕಾಲೇಜ್ ಆಫ್ ಫಾರ್ಮಾಸ್ಯುಟಿಕಲ್ ಸೈನ್ಸಸ್‌ನ ಫಾರ್ಮಸಿ ಪ್ರಾಕ್ಟೀಸ್ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ.ಮಹಾದೇವ ರಾವ್ ಅವರು ಗ್ಲೋಬಲ್ ಕ್ಯಾನ್ಸರ್ ಕನ್ಸೋರ್ಟಿಯಂ ಮತ್ತು ಅದರ ಸಹಯೋಗಿಗಳು, ಅದರ ವ್ಯಾಪ್ತಿ, ಚಟುವಟಿಕೆಗಳು ಮತ್ತು ಪರಿಣಾಮವನ್ನು ವಿವರಿಸಿದರು. ಅವರು ಒಕ್ಕೂಟದ ವೆಬ್‌ಸೈಟ್ www.glocacon.org ಅನ್ನು ಪ್ರಸ್ತುತಪಡಿಸಿದರು ಮತ್ತು ಕಳೆದ ವರ್ಷದಲ್ಲಿ ನಡೆದ ವಿವಿಧ ಸೆಮಿನಾರ್‌ಗಳು, ಸಮುದಾಯ  ಸರಣಿ ಕಾರ್ಯಕ್ರಮಗಳು  ಮತ್ತು ಸಣ್ಣ ವಿಚಾರ ಸಂಕಿರಣಗಳ ಕುರಿತು ವಿವರಿಸಿದರು.

ಮಾಹೆ ಟ್ರಸ್ಟ್ ಟ್ರಸ್ಟಿ ವಸಂತಿ ಆರ್ ಪೈ, ಸಹ ಕುಲಪತಿ ಡಾ. ಪಿಎಲ್‌ಎನ್‌ಜಿ ರಾವ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಡೀನ್ ಡಾ. ಶರತ್ ಕುಮಾರ್ ರಾವ್ ಅವರು ತಮ್ಮ ಸ್ವಾಗತ ಭಾಷಣದಲ್ಲಿ ಮಣಿಪಾಲದ ಕ್ಯಾನ್ಸರ್ ಕೇಂದ್ರದ ಪಯಣ ಮತ್ತು ಬೆಳವಣಿಗೆಯನ್ನು ತಿಳಿಸಿದರು. ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ  ವಂದನಾರ್ಪಣೆಗೈದರು.