ಬಾಯಿಗೆ ರುಚಿಕರ ಮೈದಾ ಹಿಟ್ಟು ಆರೋಗ್ಯಕ್ಕೆ ಹಿತಕರವೇ? ಬಳಸುವ ಮುನ್ನ ಒಮ್ಮೆ ಇದನ್ನು ಓದಿ

ಇತ್ತೀಚಿನ ದಿನಗಳಲ್ಲಿ ಬೇಕರಿ ತಿಂಡಿ-ತಿನಿಸುಗಳಿಂದ ಹಿಡಿದು, ದಿನನಿತ್ಯ ಬಳಕೆಯ ಹಲವು ಅಡಿಗೆಗೆಳಲ್ಲೂ ಮೈದಾ ಬಳಕೆ ಹೆಚ್ಚಾಗುತ್ತಿದೆ. ಹೋಟೆಲ್ ಗಳಲ್ಲಿ, ಸಮಾರಂಭದ ಅಡುಗೆಗಳಲ್ಲಿ ಅಷ್ಟೇ ಏಕೆ ಮನೆಗಳಲ್ಲೂ ರುಚಿಕರ ಹಾಗೂ ಸುಲಭ ಎಂದು ಮೈದಾ ಬಳಸಿದ ಅಡುಗೆಗಳು ತಯಾರಾಗುತ್ತವೆ. ಆದರೆ ಮೈದಾ ಹೇಗೆ ತಯಾರಾಗುತ್ತದೆ, ಆರೋಗ್ಯಕ್ಕೆ ಇದರಿಂದಾಗುವ ಹಾನಿಯ ಕುರಿತು ತಿಳಿದು ಮತ್ತೆ ಮೈದಾ ಬಳಸುವುದು ಉತ್ತಮ. ಮೈದಾ ಹೇಗೆ ತಯಾರಾಗುತ್ತದೆ? ಮೈದಾ ಹಿಟ್ಟನ್ನು ಗೋಧಿಯ ಒಳಗಿನ ಬಿಳಿ ಭಾಗವನ್ನು (Endosperm) ಮಾತ್ರ ಬಳಸಿಕೊಂಡು ತಯಾರಿಸಲಾಗುತ್ತದೆ. ಗೋಧಿ ಕಾಳಿನ ನಾರುಯುಕ್ತ […]
ಧಾರ್ಮಿಕ ಕಾರ್ಯಕ್ರಮಗಳು ಜನರಲ್ಲಿ ಭಕ್ತಿ ಮೂಡಿಸಲು ಪರಿಣಾಮಕಾರಿ-ಡಾ. ಎಚ್. ಎಸ್.ಬಲ್ಲಾಳ್

ಉಡುಪಿ: ದೇವಸ್ಥಾನದ ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವ, ನಾಗಮಂಡಲ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು ಜನರಲ್ಲಿ ಭಕ್ತಿ ಮೂಡಿಸುವ ನಿಟ್ಟಿನಲ್ಲಿ ಹೆಚ್ಚು ಪರಿಣಾಮಕಾರಿ ಎಂದು ಮಾಹೆ ವಿವಿ ಸಹ ಕುಲಾಧಿಪತಿ ಡಾ. ಎಚ್. ಎಸ್.ಬಲ್ಲಾಳ್ ಹೇಳಿದರು. ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ದೈವಭಕ್ತಿ, ಶಿಕ್ಷಣ ಹಾಗೂ ಆರೋಗ್ಯ ಎಲ್ಲರಿಗೂ ಆವಶ್ಯಕ. ಈ ನಿಟ್ಟಿನಲ್ಲಿ ಡಾ. ಜಿ. ಶಂಕರ್ ಅವರು ಬಡ ರೋಗಿಗಳಿಗೆ ಸಹಾಯಹಸ್ತ ಚಾಚುವ ಬಹುದೊಡ್ಡ ಕಾರ್ಯಗಳನ್ನು ದಶಕಗಳಿಂದ ಮಾಡಿಕೊಂಡು ಬರುತ್ತಿದ್ದಾರೆ. […]
ಹೂಗಳ ಮಧುರ ರಹಸ್ಯ: ಜೇನುತುಪ್ಪ ಹೇಗೆ ಸಿದ್ಧವಾಗುತ್ತದೆ ಬಲ್ಲಿರಾ? ಆಸಕ್ತಿಕರ ಮಾಹಿತಿ ಇಲ್ಲಿದೆ

ಆಹಾ! ಜೇನುತುಪ್ಪ ಎನ್ನುತ್ತಿದ್ದಂತೇ ಬಾಯಲ್ಲಿ ನೀರೂರುತ್ತದೆ. ತಿಳಿ ಹಳದಿ, ಚಿನ್ನದ ಬಣ್ಣದ ಜೇನುತುಪ್ಪ ತಿನ್ನಲು ಅದೆಷ್ಟು ರುಚಿಯೋ ಹಾಗೇ ಅಷ್ಟೇ ಆರೋಗ್ಯಕರವೂ ಹೌದು. ಆದರೆ ಈ ಜೇನುತುಪ್ಪ ಹೇಗೆ ತಯಾರಾಗುತ್ತದೆ ಅನ್ನುವುದರ ಬಗ್ಗೆ ಹಲವರಿಗೆ ಕುತೂಹಲವಿರುತ್ತದೆ. ಅದನ್ನೀಗ ತಿಳಿದುಕೊಳ್ಳೋಣ. ಜೇನುತುಪ್ಪ ವನ್ನು ಜೇನುನೊಣಗಳು ಪ್ರಕೃತಿಯಲ್ಲಿ ಸ್ವಾಭಾವಿಕವಾಗಿ ತಯಾರಿಸುತ್ತವೆ. ಹೂವಿನ ಮಕರಂದ ಹೀರುವ ಜೇನುಹುಳಗಳು ಅದನ್ನು ತುಪ್ಪವನ್ನಾಗಿ ಪರಿವರ್ತಿಸುವ ಪ್ರಕ್ರಿಯೆ ಇಲ್ಲಿದೆ. ಪ್ರಕೃತಿಯಿಂದ ದೊರೆಯುವ ಪ್ರಕೃತಿ ಸಹಜವಾದ ಅಧಿಕ ಪೋಷಕಾಂಶವುಳ್ಳ ಜೇನುತುಪ್ಪ ತುಂಬಾ ಆರೋಗ್ಯಕರ. ಜೇನುನೊಣಗಳು ಇದನ್ನು ತಮ್ಮ […]
ಹೊಂಬಾಳೆ ಫಿಲ್ಮ್ಸ್ ನಿಂದ ಸಿಕ್ತು ಬಿಗ್ ಅಪ್ ಡೇಟ್; ಸೆಟ್ಟೇರಲಿದೆ “ಮಹಾವತಾರ ಪರಶುರಾಮ”

ಕೆ.ಜಿ.ಎಫ್., ಕಾಂತಾರ, ಸಲಾರ್, ಮಹಾವತಾರ ನರಸಿಂಹ ಮುಂತಾದ ಸಿನಿಮಾಗಳ ಫುಲ್ ಫೇಮಸ್ ಆಗಿರುವ ‘ಹೊಂಬಾಳೆ ಫಿಲ್ಮ್ಸ್ʼ ಈಗ ಪರಶುರಾಮನ ಕಥೆಯನ್ನ ಕೈಗೆತ್ತಿಕೊಂಡಿದೆ. ಇದು ಕೇವಲ ಒಂದು ಸಿನಿಮಾವಲ್ಲ, ಬದಲಾಗಿ ಭಾರತದ ಸಾಂಸ್ಕೃತಿಕ ಬೇರುಗಳನ್ನ ಇಂದಿನ ಪೀಳಿಗೆಗೆ ತಲುಪಿಸುವ ಒಂದು ಬೃಹತ್ ಪ್ರಯತ್ನ. ವಿಷ್ಣುವಿನ ಅವತಾರಗಳಲ್ಲಿ ಅತ್ಯಂತ ಉಗ್ರ ಹಾಗೂ ಶಕ್ತಿಶಾಲಿ ಎನಿಸಿಕೊಂಡಿರುವ ಪರಶುರಾಮನ ಜೀವನದ ರೋಚಕ ಘಟ್ಟಗಳನ್ನ ಈ ಸಿನಿಮಾ ಒಳಗೊಂಡಿರಲಿದೆ. ಪರಶುರಾಮ ಜಯಂತಿಯ ವಿಶೇಷ ದಿನದಂದು Hombale Films ತನ್ನ ಹೊಸ ಮಹತ್ವಾಕಾಂಕ್ಷೆಯ ಸಿನಿಮಾ ‘ಮಹಾವತಾರ […]
ಫ್ರೀ ಬಸ್ ಆಯ್ತು; ಇದೀಗ ಬಂತು ಫ್ರೀ ಟ್ರೈನ್!

ಹೈದರಾಬಾದ್: ತೆಲಂಗಾಣ ಸಂಸ್ಥಾಪನ ದಿನ ಉಡುಗೊರೆಯಾಗಿ ಜೂನ್ ಎರಡರಿಂದ ಒಂದು ವರ್ಷದ ಕಾಲ ಪ್ರಯೋಗಾತ್ಮಕವಾಗಿ ಹೈದರಾಬಾದ್ ನಿವಾಸಿಗಳಿಗೆ ಆಡಳಿತರೂಢ ಕಾಂಗ್ರೆಸ್ ಸರ್ಕಾರ ಮತ್ತೊಂದು ಗ್ಯಾರಂಟಿ ನೀಡಲು ಮುಂದಾಗಿದ್ದು, ಸರ್ಕಾರದ ಎಂಎಂಟಿಸ್ ರೈಲುಗಳಲ್ಲಿ ಪ್ರಯಾಣಿಕರಿಗೆ ಉಚಿತವಾಗಿ ಪ್ರಯಾಣ ಮಾಡಲು ಅವಕಾಶ ನೀಡಲು ಸಿದ್ಧತೆ ನಡೆಸಿದೆ. ಈ ಕುರಿತು ದಕ್ಷಿಣ ಮಧ್ಯ ರೈಲ್ವೆ(ಎಸ್ಸಿಆರ್)ಗೆ ಸರ್ಕಾರ ಪ್ರಸ್ತಾವನೆ ಮಾಡಿ ಪತ್ರವನ್ನು ಬರೆದಿದ್ದು, ರೈಲ್ವೆ ಬೋರ್ಡ್ ಅನುಮತಿ ಲಭ್ಯವಾದ ಕೂಡಲೇ ಈ ಯೋಜನೆ ಜಾರಿ ಆಗುವುದು ಖಚಿತ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ಈನಾಡು […]