ಇಂದಿನಿಂದ(ಜು.1) ರೈಲು ಪ್ರಯಾಣ ದುಬಾರಿ: ಎಸಿ, ನಾನ್ ಎಸಿ ಕೋಚ್ ಗಳ ಪರಿಷ್ಕೃತ ದರ ಹೀಗಿದೆ.!

ನವದೆಹಲಿ: ಜುಲೈ 1ರಿಂದಲೇ ಅನ್ವಯವಾಗುವಂತೆ ಮೇಲ್ ಹಾಗೂ ಎಕ್ಸ್ಪ್ರೆಸ್ ರೈಲುಗಳ ಹವಾನಿಯಂತ್ರಿತ (ಎಸಿ) ದರ್ಜೆಯ ಪ್ರಯಾಣದರವನ್ನು ಪ್ರತಿ ಕಿ.ಮೀಗೆ 2 ಪೈಸೆ, ಹವಾನಿಯಂತ್ರಣ ರಹಿತ (ನಾನ್ ಎ.ಸಿ) ದರ್ಜೆಯ ದರವನ್ನು 1 ಪೈಸೆ ಏರಿಕೆ ಮಾಡಿ ರೈಲ್ವೆ ಇಲಾಖೆಯು ಸೋಮವಾರ ಆದೇಶ ಹೊರಡಿಸಿದೆ. ಜೂನ್ 24ರಂದೇ ಪ್ರಯಾಣದರ ಏರಿಕೆ ಮಾಡುವ ಸುಳಿವನ್ನು ಇಲಾಖೆಯ ಅಧಿಕಾರಿಗಳು ನೀಡಿದ್ದರು. ಆದಾಗ್ಯೂ, ರೈಲು ಹಾಗೂ ದರ್ಜೆಗೆ ಅನುಗುಣವಾಗಿ ದರ ಏರಿಕೆಯ ಅಧಿಕೃತ ಅಧಿಸೂಚನೆಯನ್ನು ಸೋಮವಾರ ಪ್ರಕಟಿಸಿದೆ. ನಿತ್ಯ ಪ್ರಯಾಣಿಸುವ ಪ್ರಯಾಣಿಕರನ್ನು ಗಮನದಲ್ಲಿರಿಸಿಕೊಂಡು, […]
ಎಲ್ಪಿಜಿ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ ಭಾರೀ ಇಳಿಕೆ.

ನವದೆಹಲಿ: ತೈಲ ಮಾರುಕಟ್ಟೆ ಕಂಪನಿಗಳು 19 ಕೆಜಿ ಎಲ್ಪಿಜಿ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ 60 ರೂ.ನಷ್ಟು ಕಡಿತ ಮಾಡಿವೆ. ಪರಿಷ್ಕೃತ ದರ ಇಂದಿನಿಂದಲೇ ಜಾರಿಗೆ ಬಂದಿದೆ.14 ಕೆಜಿ LPG ಸಿಲಿಂಡರ್ನ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಪ್ರತಿ ತಿಂಗಳ ಮೊದಲ ದಿನದಂದು ತೈಲ ಮಾರುಕಟ್ಟೆ ಕಂಪನಿಗಳು ಗ್ಯಾಸ್ ಸಿಲಿಂಡರ್ಗಳ ಬೆಲೆಗಳನ್ನು ಪರಿಷ್ಕರಿಸುತ್ತವೆ. ಈ ತಿಂಗಳು ಸಿಲಿಂಡರ್ ದರವನ್ನು ಕಡಿಮೆ ಮಾಡಲು ನಿರ್ಧರಿಸಲಾಗಿದೆ. ದೇಶಾದ್ಯಂತ ವಾಣಿಜ್ಯ ಅನಿಲ ಸಿಲಿಂಡರ್ಗಳ ಬೆಲೆ ಕಡಿಮೆ ಮಾಡಿರುವುದಾಗಿ ತೈಲ ಮಾರುಕಟ್ಟೆ ಕಂಪನಿಗಳು ಘೋಷಿಸಿವೆ. 19 […]
ತೆಲಂಗಾಣ ಔಷಧ ಕಾರ್ಖಾನೆಯಲ್ಲಿ ಸ್ಫೋಟ: ಮೃತರ ಸಂಖ್ಯೆ 35ಕ್ಕೆ ಏರಿಕೆ.

ಹೈದರಾಬಾದ್: ತೆಲಂಗಾಣದ ಸಂಗರೆಡ್ಡಿಯಲ್ಲಿರುವ ಔಷಧ ಕಾರ್ಖಾನೆಯಲ್ಲಿ ಸೋಮವಾರ ಸಂಭವಿಸಿದ ಸ್ಫೋಟದಲ್ಲಿ ಸಾವಿನ ಸಂಖ್ಯೆ 35ಕ್ಕೆ ಏರಿಕೆ ಆಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈವರೆಗೂ 31 ಮೃತದೇಹಗಳನ್ನು ಅವಶೇಷಗಳ ಅಡಿಯಿಂದ ಹೊರತೆಗೆಯಲಾಗಿದೆ. ಸದ್ಯ ಅಂತಿಮ ಹಂತದಲ್ಲಿ ರಕ್ಷಣಾ ಕಾರ್ಯಚರಣೆ ನಡೆಯುತ್ತಿದೆ. ಸತ್ತವರಲ್ಲಿ ಕೆಲವರ ದೇಹ ಸಂಪೂರ್ಣ ಸುಟ್ಟುಹೋಗಿದ್ದು, ಗುರುತು ಪತ್ತೆಹಚ್ಚಲು ಡಿಎನ್ಎ ಟೆಸ್ಟ್ ಮಾಡಲಾಗುವುದು ಎಂದು ಐಜಿಪಿ ವಿ.ಸತ್ಯನಾರಾಯಣ್ ಮಾಹಿತಿ ನೀಡಿದ್ದಾರೆ. ರಿಯಾಕ್ಟರ್ ಸ್ಫೋಟಗೊಳ್ಳುತ್ತಿದ್ದಂತೆ, ಬೆಂಕಿ ಹೊತ್ತಿಕೊಂಡಿದೆ. ಇನ್ನೂ, ಸ್ಫೋಟದ ತೀವ್ರತೆಯಿಂದಾಗಿ ಕಾರ್ಮಿಕರ ಮೃತದೇಹಗಳು 100 ಮೀಟರ್ ದೂರಕ್ಕೆ […]
ಹಳೆಯ ರೋಗಿಗೆ ತಗಲುತ್ತಿವೆ ಹೊಸ ಹೊಸ ಕಾಯಿಲೆಗಳು, ಬೇಕಿದೆ ಪರಿಹಾರೋಪಾಯಗಳು ಡಾ.ವೈ ಸುದರ್ಶನ್ ರಾವ್ ಬರೆದ ಡಾಕ್ಟರ್ ಡೇ ವಿಶೇಷ ಬರಹ.

ಇತ್ತೀಚಿಗೆ ನಮ್ಮೂರಿನ ಜನರು ಬಳಲುತ್ತಿರುವ ಖಾಯಿಲೆಗಳಲ್ಲಿ ಬಾರೀ ಬದಲಾವಣೆಯನ್ನು ಎಲ್ಲರೂ ಗಮನಿಸಿರಬಹುದು. ಈ ಬದಲಾವಣೆಗಳೇನು? ಹೊಸ ಖಾಯಿಲೆಗಳು ಯಾವುವು? ಕಾರಣವೇನು? ಹಾಗೂ ಪರಿಹಾರೋಪಾಯಗಳ ಬಗ್ಗೆ ಲೇಖನ ಅನಾದಿ ಕಾಲದಿಂದಲ್ಲೂ ಅನಾರೋಗ್ಯಕ್ಕೆ ಬ್ಯಾಕ್ಟೀರಿಯಾ ವೈರಸ್ ಗಳಂತಹ ಮೈಕ್ರೋಜೀವಿಗಳಿಂದ ಬರುತ್ತಿದ್ದ ಕಾಯಿಲೆಗಳು, ಸಮತೂಕದ ಆಹಾರದ ಮತ್ತು ನೈರ್ಮಲ್ಯದ ಕೊರತೆ, ಅನಾರೋಗ್ಯಕರ ವಾಸಸ್ಥಳ, ಚಿಕಿತ್ಸೆ ಪಡೆಯಲು ತಡ ಮಾಡುವುದು ಇತ್ಯಾದಿ ಕಾರಣಗಳೇ ಪ್ರಪಂಚದೆಲ್ಲೆಡೆಯಲ್ಲಿ ಮುಂಚೂಣಿಯಲ್ಲಿದ್ದವು. ಮೂಢನಂಬಿಕೆ, ಅಜ್ಞಾನ, ಬಡತನ ಹಾಗೂ ಹೆಚ್ಚಿನ ಜನಸಂಖ್ಯೆಯು ಮೂಲಕಾರಣವೆಂದು ಗುರುತಿಸಲಾಗಿತ್ತು. ಈಗ ಈ ಮೂಲ ಕಾರಣಗಳಿಂದ […]
ಹಳೆಯ ರೋಗಿ ಹೊಸ ಖಾಯಿಲೆ

ಲೇಖಕರು: ಡಾ | ವೈ ಸುದರ್ಶನ್ ರಾವ್, ಇಂಚರ ಸರ್ಜಿಕಲ್ ಕ್ಲಿನಿಕ್ ,ಉಡುಪಿ ಇತ್ತೀಚಿಗೆ ನಮ್ಮೂರಿನ ಜನರು ಬಳಲುತ್ತಿರುವ ಖಾಯಿಲೆಗಳಲ್ಲಿ ಬಾರೀ ಬದಲಾವಣೆಯನ್ನು ಎಲ್ಲರೂ ಗಮನಿಸಿರಬಹುದು. ಈ ಬದಲಾವಣೆಗಳೇನು ? ಹೊಸ ಖಾಯಿಲೆಗಳು ಯಾವುವು? ಕಾರಣವೇನು ? ಹಾಗೂ ಪರಿಹಾರೋಪಾಯಗಳ ಬಗ್ಗೆ ಲೇಖನ ಅನಾದಿ ಕಾಲದಿಂದಲ್ಲೂ ಅನಾರೋಗ್ಯಕ್ಕೆ ಬ್ಯಾಕ್ಟೀರಿಯಾ ವೈರಸ್ ಗಳಂತಹ ಮೈಕ್ರೋಜೀವಿಗಳಿಂದ ಬರುತ್ತಿದ್ದ ಕಾಯಿಲೆಗಳು, ಸಮತೂಕದ ಆಹಾರದ ಮತ್ತು ನೈರ್ಮಲ್ಯದ ಕೊರತೆ, ಅನಾರೋಗ್ಯಕರ ವಾಸಸ್ಥಳ, ಚಿಕಿತ್ಸೆ ಪಡೆಯಲು ತಡ ಮಾಡುವುದು ಇತ್ಯಾದಿ ಕಾರಣಗಳೇ ಪ್ರಪಂಚದೆಲ್ಲೆಡೆಯಲ್ಲಿ […]