ಉಡುಪಿ:ಹಳೆಯ ಸ್ಪ್ಲೆಂಡರ್ ನಲ್ಲಿ ಹೋಗಿ ಖರ್ದುಂಗ್ಲಾ ಶಿಖರವೇರಿದ್ದ ಅಪ್ಪ ಮಗನಿಗೆ 10 ಲಕ್ಷದ ಬೈಕ್ ಉಡುಗೊರೆ ನೀಡಿದ ಹೀರೋ ಮೋಟೋ ಕಾರ್ಪ್ ಸಂಸ್ಥೆ

ಶಿರ್ವ: ತಮ್ಮ 25 ವರ್ಷ ಹಳೆಯ ಹೀರೋ ಹೋಂಡಾ ಸ್ಪ್ಲೆಂಡರ್ ಬೈಕ್ ನಲ್ಲಿ 17 ರಾಜ್ಯ ಸುತ್ತಿದಲ್ಲದೇ, 17,982 ಅಡಿ ಎತ್ತರವಿರುವ ವಿಶ್ವದ ಎರಡನೇ ಅತಿ ಎತ್ತರದ ಪ್ರದೇಶವಾದ ಜಮ್ಮು ಕಾಶ್ಮೀರದ ಖರ್ದುಂಗ್ಲಾದಲ್ಲಿ ಕನ್ನಡ ಬಾವುಟ ಹಾರಿಸಿದ್ದ ಶಿರ್ವದ ತಂದೆ ಮಗನ ಜೋಡಿಗೆ ಈಗ 10 ಲಕ್ಷ ರೂ ಮೌಲ್ಯದ ಹೀರೋ ಸೆಂಟಿನಿಯಲ್ ಬೈಕ್ ಬಹುಮಾನವಾಗಿ ಸಿಕ್ಕಿದೆ. ಶಿರ್ವದ ರಾಜೇಂದ್ರ ಶೆಣೈ ಮತ್ತು ಮಗ ಪ್ರಜ್ವಲ್ ಶೆಣೈ ಅವರ ಸಾಹಸವನ್ನು ಗುರುತಿಸಿದ ಹೀರೋ ಮೋಟೋ ಕಾರ್ಪ್ ಸಂಸ್ಥೆ […]
ಮಂಗಳೂರು:ಐಐಎಸ್ಇಆರ್: ಎಕ್ಸ್ಪರ್ಟ್ನ ಸಿದ್ದೇಶ್ಗೆ ,11ನೇ ರ್ಯಾಂಕ್

ಮಂಗಳೂರು:ಕೇಂದ್ರ ಸರಕಾರದ ಶಿಕ್ಷಣ ಸಚಿವಾಲಯದಅಧೀನದಲ್ಲಿರುವ ಪ್ರತಿಷ್ಠಿತ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಎಜ್ಯುಕೇಷನ್ ಆ್ಯಂಡ್ ರಿಸರ್ಚ್ (ಐಐಎಸ್ಇಆರ್) ನಡೆಸಿದ ಪ್ರವೇಶ ಪರೀಕ್ಷೆಯಲ್ಲಿ ಮಂಗಳೂರಿನ ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಮೊದಲ 50 ರ್ಯಾಂಕ್ಗಳಲ್ಲಿ ಮೂರುರ್ಯಾಂಕ್ಗಳನ್ನು ಪಡೆದುಕೊಳ್ಳುವ ಮೂಲಕ ಅಭೂತಪೂರ್ವ ಸಾಧನೆ ಮಾಡಿದ್ದಾರೆ. ಅಖಿಲ ಭಾರತ ಮಟ್ಟದಲ್ಲಿ ಜನರಲ್ ಕೆಟಗರಿ ವಿಭಾಗದಲ್ಲಿ 11ನೇರ್ಯಾಂಕ್ ಅನ್ನು ಸಿದ್ದೇಶ್ ಬಿ. ಡಮ್ಮಳ್ಳಿ ಪಡೆದುಕೊಂಡಿದ್ದಾರೆ. ಅದೇ ರೀತಿ ಜನರಲ್ ಕ್ಯಾಟಗರಿಯಲ್ಲಿ 13ನೇ ಹಾಗೂ ಕ್ಯಾಟಗರಿ ವಿಭಾಗದಲ್ಲಿ ಪ್ರಥಮ ರ್ಯಾಂಕ್ ಅನ್ನು ಧನುಷ್ […]
ಜು.3 ರಿಂದ ಮಣಿಪಾಲದ MSDC ಯಲ್ಲಿ ವಿಶೇಷ ತರಬೇತಿ, HVAC ವೃತ್ತಿಪರರಾಗಲು ಇದು ಅದ್ಬುತ ಅವಕಾಶ.

ಮಣಿಪಾಲ: ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರದಲ್ಲಿ 1-ತಿಂಗಳ ತರಬೇತಿ ಕಾರ್ಯಕ್ರಮಕ್ಕೆ ಸೇರಿ ಮತ್ತು ಪ್ರಮಾಣೀಕೃತ HVAC ವೃತ್ತಿಪರರಾಗಿ. ಈ ತರಬೇತಿ ಕಾರ್ಯಕ್ರಮವು ಜುಲೈ 3 ರಿಂದ ಜುಲೈ 26 ರವರೆಗೆ (ಒಟ್ಟು 45 ಗಂಟೆಗಳು) ನಡೆಯಲಿದೆ. ಇಲ್ಲಿ ನೀವು ಏನು ಕಲಿಯುವಿರಿ: ಕಾರ್ಯಕ್ರಮದ ಮುಖ್ಯಾಂಶಗಳು: ಯಾರು ಹಾಜರಾಗಬೇಕು?:ವೃತ್ತಿ ಅನ್ವೇಷಕರು ಮತ್ತು ಎಂಜಿನಿಯರಿಂಗ್ ಡಿಪ್ಲೊಮಾ ಪದವೀಧರರು. ಸೀಮಿತ ಸೀಟುಗಳು ಮಾರ್ತ ಲಭ್ಯವಿದೆ. ಕೋರ್ಸ್’ನ ಶುಲ್ಕ ರೂ.8,000. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:MSDC, ಡೈಕಿನ್ ಸೆಂಟರ್ ಆಫ್ ಎಕ್ಸಲೆನ್ಸ್, +91 94489 […]
ಭಾರತದ ಜೊತೆ ಶೀಘ್ರವೇ ಅತಿ ದೊಡ್ಡ ವ್ಯಾಪಾರ ಒಪ್ಪಂದ: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ಭಾರತದ ಜೊತೆ ಶೀಘ್ರವೇ ಬಹಳ ದೊಡ್ಡ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಲಿದ್ದೇವೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಭಾರತ ಮತ್ತು ಅಮೆರಿಕ ನಡುವೆ ಕಳೆದ 4 ದಿನಗಳಿಂದ ವ್ಯಾಪಾರ ಒಪ್ಪಂದ ಸಂಬಂಧ ಸುದೀರ್ಘ ಮಾತುಕತೆ ನಡೆಯುತ್ತಿದೆ. ಈ ಮಾತುಕತೆಯ ಸಮಯದಲ್ಲೇ ಟ್ರಂಪ್ ಅವರು ಶ್ವೇತ ಭವನದಲ್ಲಿ ನಡೆದ ಬಿಗ್ ಬ್ಯೂಟಿಫುಲ್ ಕಾರ್ಯಕ್ರಮದಲ್ಲಿ ಭಾರತದ ಜೊತೆಗಿನ ಒಪ್ಪಂದ ಬಗ್ಗೆ ಮಾತನಾಡಿದರು. ಪ್ರತಿಯೊಬ್ಬರೂ ಒಪ್ಪಂದ ಮಾಡಿಕೊಳ್ಳಲು ಮತ್ತು ಅದರಲ್ಲಿ ಭಾಗವಹಿಸಲು ಬಯಸುತ್ತಾರೆ. ನಾವು ನಿನ್ನೆ ಚೀನಾದೊಂದಿಗೆ […]
ಹೃದಯಾಘಾತಕ್ಕೆ 22 ವರ್ಷದ ಯುವತಿ ಮೃತ್ಯು.

ಹಾಸನ: ಹೃದಯಾಘಾತಕ್ಕೆ ಯುವತಿಯೊಬ್ಬಳು ಮೃತಪಟ್ಟಿರುವ ಘಟನೆ ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಕಟ್ಟಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತಪಟ್ಟ ಯುವತಿ ಕಟ್ಟಳ್ಳಿ ಗ್ರಾಮದ ಕೃಷ್ಣಮೂರ್ತಿ-ರೂಪ ದಂಪತಿಯ ಪುತ್ರಿ ಸುಪ್ರಿಯಾ (22). ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ವಾಸವಿದ್ದು ಮುಕ್ತ ವಿವಿಯಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದಳು. ಸುಪ್ರಿಯಾ ವಿದ್ಯಾಭ್ಯಾಸದ ಜೊತೆಗೆ ಕೆಲಸ ಮಾಡುತ್ತಿದ್ದಳು. ಜೂ.25 ರಂದು ಸುಪ್ರಿಯಾಗೆ ಎದೆನೋವು ಕಾಣಿಸಿಕೊಂಡಿದ್ದು ಪೋಷಕರಿಗೆ ತಿಳಿಸಿದ್ದಾಳೆ. ಪೋಷಕರು ಕೂಡಲೇ ಸುಪ್ರಿಯಾಳನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ ಅಷ್ಟರಲ್ಲಾಗಲೇ ಸುಪ್ರಿಯಾ ಸಾವನ್ನಪ್ಪಿದ್ದಾಳೆ. ಕಳೆದ ಒಂದು ತಿಂಗಳಲ್ಲಿ ಹಾಸನದಲ್ಲೇ 15 […]