ನಿಟ್ಟೆಯ ತಾಂತ್ರಿಕ ಕಾಲೇಜಿನ ಎಲೆಕ್ಟ್ರಿಕಲ್ ವಿಭಾಗವು ತಯಾರಿಸಿದ ಕೈಗಾರಿಕಾ ದರ್ಜೆಯ “ತಾಪಮಾನ ನಿಯಂತ್ರಕ” ಸಾಧನ ಅನಾವರಣ

ನಿಟ್ಟೆ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ವಿಭಾಗ (ಇಇಇ) ಹೆಮ್ಮೆಯಿಂದ “ಟೆಂಪರೇಚರ್ ಕಂಟ್ರೋಲರ್” ಎಂಬ ನವೀನ ಕೈಗಾರಿಕಾ ಉತ್ಪನ್ನವನ್ನು ಜೂನ್ 21 ರಂದು ಬಿಡುಗಡೆಗೊಳಿಸಿತು. ಎನರ್ಜಿ ಕಂಬಷನ್ ಸಿಸ್ಟಮ್ ನಲ್ಲಿ ಶುದ್ಧ ಮತ್ತು ಪರಿಣಾಮಕಾರಿ ಶಕ್ತಿಯ ಬಳಕೆಗಾಗಿ ಎಂಡ್-ಟು-ಎಂಡ್ ಪರಿಹಾರಗಳನ್ನು ನೀಡುವ ಪ್ರವರ್ತಕ ಕಂಪನಿಯಾದ ಗ್ಯಾಸೋಲ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ತಯಾರಿಸಿದ ನೀರಿನ ಸ್ನಾನದ ಅನಿಲ ಆವಿಕಾರಕ ಯುನಿಟ್ ಗಳನ್ನು ಸ್ವಯಂಚಾಲಿತಗೊಳಿಸಲು ಈ ಉತ್ಪನ್ನವನ್ನು ವಿನ್ಯಾಸಗೊಳಿಸಲಾಗಿದೆ. ಕಾರ್ಯಕ್ರಮದಲ್ಲಿ ನಿಟ್ಟೆ […]

ಉಡುಪಿ: ಜೂನ್ 29-30ರಂದು ಔರಾ ಚಿತ್ರಕಲಾ ಪ್ರದರ್ಶನ

ಉಡುಪಿ: ಔರಾ ಆರ್ಟ್ ಕ್ಲಾಸ್ ಆ್ಯಂಡ್ ಗ್ಯಾಲರಿ ವತಿಯಿಂದ ‘ಔರಾ ಚಿತ್ರಕಲಾ ಪ್ರದರ್ಶನ’ವು ಇದೇ ಜೂನ್ 29 ಮತ್ತು 30ರಂದು ಉಡುಪಿಯ ಕುಂಜಿಬೆಟ್ಟುವಿನ ಎ.ವಿ.ಎ. ಕಾಂಪ್ಲೆಕ್ಸ್ ನ ಮೊದಲ ಮಹಡಿಯಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಮುಖ್ಯ ಶಿಕ್ಷಕ ಶೈಲೇಶ್ ಕೋಟ್ಯಾನ್ ತಿಳಿಸಿದರು. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಜೂನ್ 29ರಂದು ಬೆಳಿಗ್ಗೆ 10ಗಂಟೆಗೆ ಕುಂಜಿಬೆಟ್ಟು ಇಎಂಎಚ್ ಎಸ್ ಸ್ಕೂಲ್ ನ ಮುಖ್ಯೋಪಾಧ್ಯಾಯ ವಿನೋದ ಶೆಟ್ಟಿ ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ‌. ಸಾಮಾಜಿಕ ಕಲ್ಯಾಣ ಇಲಾಖೆಯ ಉಪನಿರ್ದೇಶಕ […]

ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕೆಇಎ-ಸಿಇಟಿ ಪ್ರವೇಶ ಮಾಹಿತಿ ಕಾರ್ಯಕ್ರಮ

ಉಡುಪಿ, ಬಂಟಕಲ್: ಶ್ರೀ ಮಧ್ವ ವಾದಿರಾಜ ತಾಂತ್ರಿಕಮಹಾವಿದ್ಯಾಲಯದ ವತಿಯಿಂದ ಜೂನ್ 22, 2025 ರಂದು ಸಿಇಟಿ ಮೂಲಕ ಪ್ರವೇಶ ಬಯಸುವ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರಿಗೆ ಕೆಇಎ – ಸಿಇಟಿ ಪ್ರವೇಶ ಮಾಹಿತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸಂಸ್ಥೆಯ ಪ್ರಾಂಶುಪಾಲರಾದ ಪ್ರೊ. ಡಾ. ತಿರುಮಲೇಶ್ವರ ಭಟ್ಅವರು ಸಿಇಟಿ ಪ್ರವೇಶ ಪ್ರಕ್ರಿಯೆಯ ವಿವಿಧ ಹಂತಗಳು, ಆಯ್ಕೆನಮೂದಿಸುವ ಕ್ರಮ, ಅಣಕು ಸೀಟು ಹಂಚಿಕೆ, ವಿವಿಧ ಸುತ್ತುಗಳಲ್ಲಿ ನೀಡಬಹುದಾದ ಆಯ್ಕೆಗಳ ಬಗ್ಗೆ ಸ್ಪಷ್ಟ ಮಾಹಿತಿ ನೀಡಿದರು. ಜೊತೆಗೆ ಈ ವರ್ಷ ಕರ್ನಾಟಕ ಪರೀಕ್ಷಾ […]

ಬಿಜೆಪಿಯ ಪ್ರತಿಭಟನೆ, ಧರಣಿ ಅರ್ಥಹೀನ- ಬೀದಿ ನಾಟಕ ನಡೆಸುವುದನ್ನು ಬಿಟ್ಟು ಜನರ ಸಮಸ್ಯೆ ಬಗೆಹರಿಸಿ

ಉಡುಪಿ: ರಾಜ್ಯ ಸರಕಾರದ ವಿರುದ್ಧ ಬಿಜೆಪಿ ನಡೆಸಿರುವ ಪ್ರತಿಭಟನೆ, ಧರಣಿ ಸತ್ಯಾಗ್ರಹ ಅರ್ಥಹೀನವಾಗಿದೆ. ಸ್ಥಳೀಯಾಡಳಿತ ಸಂಸ್ಥೆಗಳ ಮುಂಭಾಗದಲ್ಲಿ ನಡೆಸಿದ ಪ್ರತಿಭಟನೆಯ ಉದ್ದೇಶವೇ ಏನೆಂದು ಜನರಿಗೆ ಅರ್ಥವಾಗಿಲ್ಲ. ಸ್ಥಳೀಯಾಡಳಿತ ಸಂಸ್ಥೆಗಳ ಜನಪ್ರತಿನಿಧಿಗಳು ತಮ್ಮದೇ ಆಡಳಿತದ ವಿರುದ್ಧ ತಾವೇ ಪ್ರತಿಭಟನೆ ನಡೆಸುವ ಮೂಲಕ ಬಿಜೆಪಿಗರು ಸ್ವತಃ ನಗೆಪಾಟಲಿಗೀಡಾಗಿದ್ದಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಮತ್ತು ಮಾಜಿ ಸಚಿವ ವಿನಯ್ ಕುಮಾ‌ರ್ ಸೊರಕೆ ಟೀಕಿಸಿದರು. ಕಾಪುವಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಿರುವ ಬಹುತೇಕ […]

ಕಾರ್ಕಳ: ಭಯಾನಕ ಆಕ್ಸಿಡೆಂಟ್ -ಬಿಎಂಡಬ್ಲ್ಯೂ ಕಾರು ನಜ್ಜುಗುಜ್ಜು

ಉಡುಪಿ: ಕಾರ್ಕಳ ತಾಲೂಕಿನ ಧೂಪದಕಟ್ಟೆಯಲ್ಲಿ ಭಯಾನಕ ಅಪಘಾತ ಸಂಭವಿಸಿದ್ದು, ಅಪಘಾತದ ಭಯಾನಕ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವೇಗವಾಗಿ ಬಂದ ಖಾಸಗಿ ಬಸ್ಸೊಂದು ಬಿಎಂಡಬ್ಲ್ಯೂ ಕಾರಿಗೆ ಗುದ್ದಿದೆ. ಗುದ್ದಿದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ .ಅದೃಷ್ಟವಶಾತ್ ಅಪಘಾತದಲ್ಲಿ ಕಾರಿನಲ್ಲಿದ್ದವರು ಪಾರಾಗಿದ್ದಾರೆ ಎನ್ನಲಾಗಿದೆ. ಪಕ್ಕದ ಕಾರಿನಲ್ಲಿದ್ದ ಕ್ಯಾಮೆರಾದಲ್ಲಿ ಈ ದೃಶ್ಯ ಸರೆಯಾಗಿದ್ದು ವೈರಲ್ ಆಗುತ್ತಿದೆ.