ಉಡುಪಿ: ರಸ್ತೆ ಬದಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ

ಉಡುಪಿ: ಕುಕ್ಕಿಕಟ್ಟೆಯಿಂದ ಮಂಚಿ ಹೋಗುವ ರಸ್ತೆಯ ಸಮೀಪ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ. ಪೋಲಿಸರು ಮೃತದೇಹವನ್ನು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರ ಸಹಕಾರದಿಂದ ಅಜ್ಜರಕಾಡು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ರಕ್ಷಿಸಿಟ್ಟಿದ್ದಾರೆ. ಮೃತ ವ್ಯಕ್ತಿಯ ಹೆಸರು ವಿಳಾಸ ಹಾಗೂ ಸಾವಿಗೆ ಸ್ವಷ್ಟ ಕಾರಣ ತಿಳಿದುಬಂದಿಲ್ಲ. ತನಿಖೆ ಪ್ರಗತಿಯಲ್ಲಿದೆ. ಮೃತನ ವಾರಸುದಾರರು ಜಿಲ್ಲಾಸ್ಪತ್ರೆಯ ನಾಗರಿಕ ಸಹಾಯ ಕೇಂದ್ರವನ್ನು ಸಂಪರ್ಕಿಸಲು ಸೂಚಿಸಲಾಗಿದೆ. ಘಟನಾ ಸ್ಥಳದಲ್ಲಿದ್ದು, ಉಡುಪಿ ನಗರ ಪೋಲಿಸ್ ಠಾಣೆಯ ಇನ್ಸ್ಪೆಕ್ಟರ್ ಮಂಜುನಾಥ್ ಬಡಿಗೇರಿ, ಪಿ.ಎಸ್.ಐ ಭರತೇಶ್, ಹೆಡ್ ಕಾನ್ಸಟೇಬಲ್ […]
ಎರಡು ವರ್ಷದಲ್ಲಿ ರಾಜ್ಯ ಸರಕಾರದಿಂದ ಉಡುಪಿಗೆ ಶೂನ್ಯ ಕೊಡುಗೆ

ಉಡುಪಿ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆಗೆ ಶಾಸಕ ಸುನಿಲ್ ಕುಮಾರ್ ತಿರುಗೇಟು ನೀಡಿದ್ದಾರೆ. ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರಕಾರ ಉಡುಪಿ ಜಿಲ್ಲೆಗೆ ಶೂನ್ಯ ಕೊಡುಗೆ ನೀಡಿದೆ. ಎರಡು ವರ್ಷದಲ್ಲಿ ಈ ಸರ್ಕಾರದಿಂದ ಉಡುಪಿಯಲ್ಲಿ ಏನು ಅಭಿವೃದ್ಧಿಯಾಗಿದೆ?. ಹೊಸ ರಸ್ತೆ, ಹೊಸ ಅಂಗನವಾಡಿ ನಿರ್ಮಾಣ ಆಗಿದೆಯಾ?. ಖಾಲಿ ಹುದ್ದೆಗಳು ಭರ್ತಿಯಾಗಿದೆಯಾ? ಎರಡು ವರ್ಷದಲ್ಲಿ ಏನು ಮಾಡಿದ್ದಾರೆಂದು ಸಚಿವೆ ಹೆಬ್ಬಾಳ್ಕರ್ ಹೇಳಲಿ ಎಂದು ಸವಾಲು ಹಾಕಿದರು. ಇಂಧನ ಇಲಾಖೆ ಬಗ್ಗೆ ಚರ್ಚೆ ಮಾಡುವುದಾದರೆ ಎರಡು ವರ್ಷ […]
ರಾಜ್ಯದಲ್ಲಿರೋದು ಮುಸಲ್ಮಾನ್ ಪ್ಲಸ್ ಮನಿ ಕಾಂಗ್ರೆಸ್ ಸರ್ಕಾರ, ಇದು ರಜಾಕರಿಗಿಂತ ಕ್ರೂರ ಸರಕಾರ- ಶಾಸಕ ಸುನಿಲ್ ಕುಮಾರ್ ಆಕ್ರೋಶ

ಉಡುಪಿ: ರಾಜ್ಯದಲ್ಲಿರೋದು ಮುಸಲ್ಮಾನ್ ಪ್ಲಸ್ ಮನಿ ಕಾಂಗ್ರೆಸ್ ಸರ್ಕಾರ. ಮುಸಲ್ಮಾನರಿಗೆ ಆಶ್ರಯ ಮನೆಯಲ್ಲಿ 15 ಪರ್ಸೆಂಟ್ ಮೀಸಲು. ಆದರೆ ಸಾಮಾನ್ಯರಿಗೆ ಮನೆ ಕಟ್ಟಲು ಮನಿ ಕೊಡಬೇಕು. ಇದು ರಜಾಕರಿಗಿಂತ ಕ್ರೂರ ಸರಕಾರ ಎಂದು ಶಾಸಕ ಸುನಿಲ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು. ಬಿ ಆರ್ ಪಾಟೀಲ್, ರಾಜು ಕಾಗೆ ಕಾಂಗ್ರೆಸ್ ವಿರುದ್ಧ ಅಸಮಾಧಾನ ವಿಚಾರಕ್ಕೆ ಸಂಬಂಧಿಸಿ ಉಡುಪಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಸ್ವಪಕ್ಷದ ಶಾಸಕರೇ ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದಾರೆ. ಕಾಮಗಾರಿಗೆ ಕಾಸು, ಹಣ ಕೊಟ್ರೆ ಮಾತ್ರ ಮನೆ ಬಗ್ಗೆ […]
ಮೈತ್ರಿ ಸೇವಾ ಸಂಘ ಬೈಲೂರು ಇದರ ವತಿಯಿಂದ ಸ್ಕೂಲ್ ಬ್ಯಾಗ್ ವಿತರಣೆ

ಕಾರ್ಕಳ: ಕಣಜಾರು ಮಡಿಬೆಟ್ಟು ಶಾಲಾ ಮಕ್ಕಳಿಗೆ ಮೈತ್ರಿ ಸಂಘದ ವತಿಯಿಂದ ಜೂ.23 ರಂದು ಉಚಿತವಾಗಿ ಸ್ಕೂಲ್ ಬ್ಯಾಗ್ ನ್ನು ವಿತರಿಸಲಾಯಿತು. ಈ ಸಂದರ್ಭ ಸಂಸ್ಥೆಯ ಮುಖ್ಯಸ್ಥರು, ಬ್ರಹ್ಮಲಿಂಗೇಶ್ವರ ಎಜುಕೇಶನ್ ಟ್ರಸ್ಟ್ ನ ಟ್ರಸ್ಟಿಗಳು, ಪೆಲತ್ತೂರು ಫ್ರೆಂಡ್ಸ್ ನ ಅಧ್ಯಕ್ಷರು, ಮೈತ್ರಿ ಸಂಘದ ಅಧ್ಯಕ್ಷರಾದ ಹರಿಶ್ಚಂದ್ರ ಶೆಟ್ಟಿ, ಕಾರ್ಯದರ್ಶಿ ರಮೇಶ್ ಕಲ್ಲೊಟ್ಟೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿ ಪೋಷಕರು, ವಿದ್ಯಾರ್ಥಿಗಳು, ಶಾಲಾ ಅಭಿಮಾನಿಗಳು, ಶಿಕ್ಷಕರುಗಳು ಸೇರಿದ್ದ ಈ ಕಾರ್ಯಕ್ರಮದಲ್ಲಿ ವಿಕ್ರಮ್ ಹೆಗ್ಡೆ ಯವರು ಕಾರ್ಯಕ್ರಮದ ಉದ್ದೇಶದ ಬಗ್ಗೆ ಮಾತನಾಡಿದರು, ಶಾಲಾ […]
ಉಡುಪಿ ನಗರಸಭೆಯ ನೂತನ ಪೌರಾಯುಕ್ತರಾಗಿ ಮಹಾಂತೇಶ ಹಂಗರಗಿ ನೇಮಕ

ಉಡುಪಿ: ಉಡುಪಿ ನಗರಸಭೆಯ ನೂತನ ಪೌರಾಯುಕ್ತರಾಗಿ ಮಹಾಂತೇಶ ಹಂಗರಗಿ (ಕೆಎಂಎಎಸ್) ಅವರು ಅಧಿಕಾರ ವಹಿಸಿಕೊಂಡಿದ್ದಾರೆ. ಅವರು ಈ ಹಿಂದೆ ಹಾರೂಗೇರಿ ಪುರಸಭೆ, ವಿಜಯಪುರ ಮಹಾನಗರ ಪಾಲಿಕೆ ಹಾಗೂ ಇಂಡಿ ಪುರಸಭೆಯಲ್ಲಿ ಮುಖ್ಯಾಧಿಕಾರಿ ಆಗಿ ಕೆಲಸ ನಿರ್ವಹಣೆ ಮಾಡಿದ್ದಾರೆ. ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ನಂದಿಕೇಶ್ವರ ಗ್ರಾಮದ ಮಹಾಂತೇಶ ಅವರು, ಬಿಎಸ್ಸಿ (ಕೃಷಿ) ಪದವೀಧರರಾಗಿದ್ದಾರೆ. ಅವರು 2017ನೇ ಸಾಲಿನ ಕೆ. ಎ. ಎಸ್ ಬ್ಯಾಚ್ ನ ಅಧಿಕಾರಿಯಾಗಿದ್ದಾರೆ.