ಉಡುಪಿ: ಆತ್ರಾಡಿಯಲ್ಲಿ “ವೆಲೋರಾ ಪ್ರೊಫೆಷನಲ್ ಬ್ಯೂಟಿ ಸ್ಟುಡಿಯೋ” ಉದ್ಘಾಟನೆ: ಇಲ್ಲಿದೆ ನಿಮ್ಮ ಸೌಂದರ್ಯವನ್ನು ಹೆಚ್ಚಿಸುವ ಆಕರ್ಷಕ ಸೇವೆಗಳು.!

ಉಡುಪಿ: ನಾವು ಸುಂದರವಾಗಿದ್ದರೆ ಲೋಕವೇ ಸುಂದರವಾಗಿ ಕಾಣುತ್ತದೆ. ನಮ್ಮ ಸೌಂದರ್ಯವನ್ನು ವೃದ್ಧಿಸಿಕೊಳ್ಳಲು ಬ್ಯೂಟಿ ಸ್ಟುಡಿಯೋಗಳಿದ್ದರೆ ಅದರ ಗತ್ತೇ ಬೇರೆ. ಈ ನಿಟ್ಟಿನಲ್ಲಿ ಇಲ್ಲಿನ ಆತ್ರಾಡಿ ನಯಾರಾ ಪೆಟ್ರೋಲ್ ಬಂಕ್ ಹತ್ತಿರ ಇರುವ ಶಾಂಭವಿ ಹೋಟೆಲ್ ಕಾಂಪ್ಲೆಕ್ಸ್’ನಲ್ಲಿ ನೂತನವಾಗಿ ಆರಂಭಗೊಂಡಿದೆ “ವೆಲೋರಾ ಪ್ರೊಫೆಷನಲ್ ಬ್ಯೂಟಿ ಸ್ಟುಡಿಯೋ”. ಇದರ ಉದ್ಘಾಟನೆಯು ಜೂ.8 ರಂದು ಅದ್ದೂರಿಯಾಗಿ ನಡೆಯಿತು. “ವೆಲೋರಾ ಪ್ರೊಫೆಷನಲ್ ಬ್ಯೂಟಿ ಸ್ಟುಡಿಯೋದಲ್ಲಿ ನಿಮ್ಮ ಸೌಂದರ್ಯ ವೃದ್ಧಿಸಲು ಆಕರ್ಷಕ ಸೇವೆಗಳು ಲಭ್ಯವಿದೆ. ಯಾವೆಲ್ಲಾ ಸೇವೆಗಳಿವೆ?◼ಎಲ್ಲಾ ರೀತಿಯ ಫೇಶಿಯಲ್ಗಳು◼ಹೈಡ್ರಾ ಫೇಶಿಯಲ್◼ಕೂದಲು ಕತ್ತರಿಸುವುದು◼ಪೆಡಿಕ್ಯೂರ್, ಮ್ಯಾನಿಕ್ಯೂರ್◼ವ್ಯಾಕ್ಸಿಂಗ್◼ಹುಬ್ಬುಗಳು◼ಚರ್ಮದ […]

ಮಂಗಳೂರಿನ ತ್ರಿಶಾ ಕಾಲೇಜಿನಲ್ಲಿ ವಾರ್ಷಿಕೋತ್ಸವ ಸಮಾರಂಭ

ಮಂಗಳೂರು: ತ್ರಿಶಾ ಕಾಲೇಜ್‌ ಆಫ್‌ ಕಾಮರ್ಸ್‌ ಆಂಡ್‌ ಮ್ಯಾನೆಜ್‌ಮೆಂಟ್‌ ಹಾಗೂ ತ್ರಿಶಾ ಸಂಧ್ಯಾ ಕಾಲೇಜ್‌ ವಾರ್ಷಿಕೋತ್ಸವವು ಡಾನ್‌ ಬೊಸ್ಕೊ ಹಾಲ್‌ ಬಲ್ಮಠದಲ್ಲಿ ಮೇ 30ರಂದು ನಡೆಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಮಂಗಳೂರಿನ ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾನಂದಾಜಿಯವರು ವಿದ್ಯಾಥಿಗಳ ಬುದ್ಧಿಮತೆಯನ್ನು ಪ್ರಶಂಸಿಸಿದರು. ವಿದ್ಯಾರ್ಥಿಗಳ ಜ್ಞಾನವನ್ನು ಶುದ್ಧಿಕರಿಸಬೇಕು ಹಾಗೂ ಸರಿಯಾದ ದಿಕ್ಕಿನಲ್ಲಿ ಬಳಸಬೇಕು ಎಂದು ಸಲಹೆ ನೀಡಿದರು. ಗೌರವ ಅತಿಥಿಯಾಗಿ ಆಗಮಿಸಿದ ತ್ರಿಶಾ ಸಂಸ್ಥೆಯ ಶೈಕ್ಷಣಿಕ ಸಲಹೆಗಾರರಾದ ನಾರಾಯಣ ಕಾಯರ್‌ಕಟ್ಟೆ ವಿದ್ಯಾರ್ಥಿಗಳ ಸಾಧನೆಗಳನ್ನು ಹೇಳಿ, ಅವರನ್ನು ಪ್ರೋತ್ಸಾಹಿಸಿದರು. […]

ದುಬೈನ ಹೋಟೆಲ್ ನಲ್ಲಿ ಕೆಲಸಕ್ಕೆ ಜನ ಬೇಕಾಗಿದ್ದಾರೆ

ದುಬೈ:ದುಬೈನ ಹೋಟೆಲ್ ನಲ್ಲಿ ಅಡುಗೆ ಕೆಲಸಕ್ಕೆ ಜನ ಬೇಕಾಗಿದ್ದಾರೆ. ಹುದ್ದೆಗಳು: 🔸 ಸೌತ್ ಇಂಡಿಯನ್ ಚೆಫ್ (Non Veg). 🔸 ಚೆಫ್ (Breakfast) ಆಕರ್ಷಕ ವೇತನದೊಂದಿಗೆ ಊಟ ಹಾಗೂ ವಸತಿ ಸೌಲಭ್ಯವಿದೆ. ಮಾಹಿತಿಗಾಗಿ ಸಂಪರ್ಕಿಸಿ: 8618629503, 71553342596

ಬಾರ್ಕೂರು ನೇಶನಲ್ ಐಟಿಐ ಸಂಸ್ಥೆಯಲ್ಲಿ ಸಂಚಾರಿ ಉದ್ಯೋಗ ನೋಂದಣಿ ಹಾಗೂ ವೃತ್ತಿ ಮಾರ್ಗದರ್ಶನ ತರಬೇತಿ

ಬ್ರಹ್ಮಾವರ: ಬಾರ್ಕೂರು ನೇಶನಲ್ ಐಟಿಐ ಸಂಸ್ಥೆಯಲ್ಲಿ ಜೂ.18 ರಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ರಜತಾದ್ರಿ ಮಣಿಪಾಲ ಇವರಿಂದ ಸಂಚಾರಿ ಉದ್ಯೋಗ ನೋಂದಣಿ ಹಾಗೂ ವೃತ್ತಿ ಮಾರ್ಗದರ್ಶನ ತರಬೇತಿ ಕಾರ್ಯಕ್ರಮ ಸಿಬ್ಬಂದಿ ವರ್ಗದವರ ಸಹಕಾರದಿಂದ ಅತ್ಯಂತ ಯಶಸ್ವಿಯಾಗಿ ನಡೆಯಿತು. ಉಡುಪಿ ಜಿಲ್ಲಾ ಉದ್ಯೋಗ ವಿನಿಯಮ ಕಚೇರಿಯ ಸಲಹೆಗಾರ ದೀಕ್ಷಿತ್ ಇವರು ಅತ್ಯಂತ ಯಶಸ್ವಿಯಾಗಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.ನಮ್ಮ ಸಂಸ್ಥೆಯ ವಿವಿದ ವಿಭಾಗದ ಒಟ್ಟು 87 ವಿದ್ಯಾರ್ಥಿಗಳು ತಮ್ಮ ಹೆಸರನ್ನು ನೋಂದಾಯಿಸಿಕೊಂಡರು.

ಮೂಡ್ಲಕಟ್ಟೆ: ಶೈಕ್ಷಣಿಕ ಮತ್ತು ವ್ಯಕ್ತಿತ್ವ ವಿಕಸನ ಶಿಬಿರ.

ಕುಂದಾಪುರ: ಐ ಎಂ ಜೆ ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ಮತ್ತು ಮೂಡ್ಲಕಟ್ಟೆ ಇನ್ಸ್ಟಿಟ್ಯೂಟ್ ಆಫ್ ಪ್ಯಾರಾಮೆಡಿಕಲ್ ಸೈನ್ಸಸ್ ನಲ್ಲಿ ಒಂದು ದಿನದ ಶೈಕ್ಷಣಿಕ ಮತ್ತು ವ್ಯಕ್ತಿತ್ವ ವಿಕಸನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಡೀನ್ ರಾದ ಡಾ. ಪದ್ಮಚರಣ ಸ್ವೈನ್ ರವರು ಕಾರ್ಯಾಗಾರದ ಪ್ರಾಮುಖ್ಯತೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ವೇದಿಕೆಯಲ್ಲಿ ಐ ಎಂ ಜೆ ಇನ್ಸ್ಟಿಟ್ಯೂಷನ್ಸ್ ಬ್ರಾಂಡ್ ಬಿಲ್ಡಿಂಗ್ ನಿರ್ದೇಶಕರಾದ ಡಾ. ರಾಮಕೃಷ್ಣ ಹೆಗ್ಡೆ, ಉಪ ಪ್ರಾಂಶುಪಾಲರಾದ ಪ್ರೊ. ಸೌಜನ್ಯ, ಆಡಳಿತಾಧಿಕಾರಿಯಾದ […]