ಉಡುಪಿಯ ಪ್ರಸಿದ್ಧ ಖಾಸಗಿ ಕಂಪೆನಿಯಲ್ಲಿ ಉದ್ಯೋಗವಕಾಶ.

ಉಡುಪಿ: ಉಡುಪಿಯ ಪ್ರತಿಷ್ಠಿತ ಕಂಪೆನಿಯಲ್ಲಿ ವಿವಿಧ ಹುದ್ದೆಗಳಿಗೆ ಜನ ಬೇಕಾಗಿದ್ದಾರೆ. ಹುದ್ದೆಗಳು: ,◾ ಟೆಲಿ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್-5 posts (Male/Female). ◾ ಫೀಲ್ಡ್ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್-2 posts (Male/Female). ಕೆಲಸದಲ್ಲಿ ಕನಿಷ್ಠ ಒಂದು ವರ್ಷ ಅನುಭವ ಇದ್ದು, ಉತ್ತಮ ಕಮ್ಯುನಿಕೇಶನ್ ಹೊಂದಿರುವ ಅಭ್ಯರ್ಥಿಗಳು ಸಂಪರ್ಕಿಸಿ: 📞9036750900
ಕಾಶ್ಮೀರದಲ್ಲಿ ಉಗ್ರರ ದಾಳಿ ಹಿನ್ನೆಲೆ – ಕರಾವಳಿ ತೀರದಲ್ಲಿ ಕಟ್ಟೆಚ್ಚರ

ಉಡುಪಿ: ಕಾಶ್ಮೀರದಲ್ಲಿ ಭಯೋತ್ಪಾದಕರ ಅಟ್ಟಹಾಸ ಹಿನ್ನೆಲೆಯಲ್ಲಿ ಕರ್ನಾಟಕ ಕರಾವಳಿಯಲ್ಲೂ ಕಟ್ಟೆಚ್ಚರ ವಹಿಸಲಾಗಿದೆ. ಕರ್ನಾಟಕದಲ್ಲಿ ಸುಮಾರು 326 ಕಿಲೋಮೀಟರ್ ಗೂ ಅಧಿಕ ಕರಾವಳಿ ತೀರ ಇದ್ದು ಕರಾವಳಿ ಮೂಲಕ ಭಯೋತ್ಪಾದಕ ಚಟುವಟಿಕೆ ಸಾಧ್ಯತೆ ಹಿನ್ನಲೆಯಲ್ಲಿ ಕಣ್ಗಾವಲು ಇರಿಸಲಾಗಿದೆ. ಕರಾವಳಿ ಕಾವಲು ಪಡೆಯ 13 ಬೊಟ್ ಗಳು ಸದ್ಯ ಪೆಟ್ರೋಲಿಂಗ್ ನಡೆಸುತ್ತಿವೆ. ಕಡಲತೀರ ಪ್ರದೇಶದಲ್ಲಿ ಒಟ್ಟು 9 ಕರಾವಳಿ ಕಾವಲು ಪಡೆ ಠಾಣೆಗಳಿವೆ.ಕೋಸ್ಟ್ ಗಾರ್ಡ್ ಹಾಗೂ ಕರಾವಳಿ ಕಾವಲು ಪಡೆ, ಗುಪ್ತಚರ ಮಾಹಿತಿ ವಿನಿಮಯ ಮಾಡಿಕೊಳ್ಳುತ್ತಿದ್ದು ಜಂಟಿ ಕಾರ್ಯಾಚರಣೆ ನಡೆಸಿದೆ. […]
ಮೇ. 15ರಿಂದ 17ರವರೆಗೆ ಸುಕ್ಷೇತ್ರ ಗುರುಪುರ ಶ್ರೀಗುರುಮಹಾಕಾಲೇಶ್ವರ ದೇವರ ಏಕಶಿಲಾ ಮೂರ್ತಿಯ ಪ್ರತಿಷ್ಠಾ ಬ್ರಹ್ಮಕಲಶ ಮಹೋತ್ಸವ

ಉಡುಪಿ: ಸುಕ್ಷೇತ್ರ ಗುರುಪುರ ಪಲ್ಗುಣಿ ನದಿ ತಟದ ಗೋಳಿದಡಿಗುತ್ತುನಲ್ಲಿ ನಿರ್ಮಾಣಗೊಂಡಿರುವ ದಕ್ಷಿಣ ಭಾರತದಲ್ಲಿಯೇ ಪ್ರಪ್ರಥಮವಾಗಿ ಮೇ. 15ರಿಂದ 17 ರವರೆಗೆ ನಡೆಯಲಿರುವ ಶ್ರೀಗುರುಮಹಾಕಾಲೇಶ್ವರ ದೇವರ ಬ್ರಹತ್ ಎಕಶಿಲಾ ಮೂರ್ತಿಯ ಪ್ರತಿಷ್ಠಾ ಬ್ರಹ್ಮಕಲಶ ಮಹೋತ್ಸವದ ಆಮಂತ್ರಣ ಪತ್ರಿಕೆ ಮತ್ತು ಪಂಚಕಲ್ಯಾಣಯುಕ್ತ ಕಲಶ ರಶೀದಿ ಬಿಡುಗಡೆ ಸಮಾರಂಭವು ಗುರುಪುರ ಗೋಳಿದಡಿಗುತ್ತು ಸುಕ್ಷೇತ್ರ ಗುರುಪುರದಲ್ಲಿ ನಡೆಯಿತು. ಬ್ರಹ್ಮಕಲಶ ಸಂಭ್ರಮ ಸಮಿತಿ ಅಧ್ಯಕ್ಷ, ಮಾಜಿ ಸಂಸದ ಕುಂಜಾಡಿ ಬೀಡು ನಳಿನ್ ಕುಮಾರ್ ಕಟೀಲು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು. ಗೋಳಿದಡಿ ಗುತ್ತು ಗುರುಪುರ ಸುಕ್ಷೇತ್ರಾಧ್ಯಕ್ಷ […]
ಕುಂದಾಪುರ:ಮರು ಮೌಲ್ಯ ಮಾಪನದ ನಂತರ ರಾಜ್ಯ ಮಟ್ಟದ ಟಾಪ್ 10 ರ್ಯಾಂಕ್ ಗಳಲ್ಲಿ ಒಟ್ಟು 13 ರ್ಯಾಂಕ್ ಗಳ ಸಂಭ್ರಮದಲ್ಲಿ ಕುಂದಾಪುರದ ವೆಂಕಟರಮಣ ಪದವಿ ಪೂರ್ವ ಕಾಲೇಜು.

ಕುಂದಾಪುರ : ದ್ವಿತೀಯ ಪಿಯುಸಿ ಪರೀಕ್ಷೆ ಯಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜು ರಾಜ್ಯ ಮಟ್ಟದ ಟಾಪ್ 10 ರ್ಯಾಂಕ್ ಗಳಲ್ಲಿ 13 ರ್ಯಾಂಕ್ ಗಳನ್ನು ಪಡೆದುಕೊಂಡಿದೆ. ವಿಜ್ಞಾನ ವಿಭಾಗದಲ್ಲಿ ವೈಷ್ಣವಿ ಅರಸ್ ( 595) ರಾಜ್ಯಕ್ಕೆ 5 ನೇ ರ್ಯಾಂಕ್ ,ಸುಮಿತ್ರಾ ಭಟ್ (593 ) 7ನೇ ರ್ಯಾಂಕ್, ಸನ್ನಿದಿ ಎಮ್ (592) 8 ನೇ ರ್ಯಾಂಕ್, ಅಮೂಲ್ಯ ಸಿ. ಶೆಟ್ಟಿ, ಕೀರ್ತನಾ, ರಂಜಿತಾ (591) 9 ನೇ ರ್ಯಾಂಕ್, ಅನನ್ಯ, ಚೈತ್ರಾ, ನಿಶಾ, […]
ಬಂಟಕಲ್:“ಒರಕಲ್ ಅಪೆಕ್ಸ್ ಮತ್ತು ಎಲ್ಎಲ್ಎಂಎಸ್ ಬಳಸಿಕೊಂಡು ಸ್ಮಾರ್ಟ್ ಸಂವದಾತ್ಮಕ ಚಾಟ್ಬಾಟ್” ಎಂಬ ವಿಷಯದ ಕುರಿತು ಪ್ರಾಯೋಗಿಕ ಕಾರ್ಯಾಗಾರ

ಬಂಟಕಲ್:ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಐಇಇಇ ವಿದ್ಯಾರ್ಥಿ ಘಟಕಮತ್ತು ಮಹಿಳಾ ಸಬಲೀಕರಣ ಕೋಶವು ಅನನ್ಯ ಪೌಂಡೇಶನ್ನ ಸಹಯೋಗದೊಂದಿಗೆ ಅಂತರಾಷ್ಟ್ರೀಯ ಮಹಿಳಾ ಮಾಹಿತಿ ಸಂವಹನ ತಂತ್ರಜ್ಞಾನ ದಿನದ ಅಂಗವಾಗಿ ದಿನಾಂಕ 24 ಎಪ್ರಿಲ್ 2025 ರಂದು “ಒರಕಲ್ಅಪೆಕ್ಸ್ ಮತ್ತು ಎಲ್ಎಲ್ಎಂಎಸ್ ಬಳಸಿಕೊಂಡು ಸ್ಮಾರ್ಟ್ ಸಂವದಾತ್ಮಕ ಚಾಟ್ಬಾಟ್” ಎಂಬ ವಿಷದ ಕುರಿತು ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಜಪಾನ್ ಮತ್ತು ಏಷ್ಯಾ ಪೆಸಿಪಿಕ್ನ ಒರಾಕಲ್ ಸೊಲ್ಯೂಷನ್ ಎಂಜಿನಿಯರಿಂಗ್ ಹಬ್ – ಟೆಕ್ನಾಲಜಿಯ ಅನಾಲಿಟಿಕ್ಸ್ ಎಂಜಿನಿಯರ್ ನಿವೇದಿತ ಬಿ ಭಟ್ ಮತ್ತು ಕ್ಲೌಡ್ಸೊಲ್ಯೂಷನ್ […]