ಬಂಟಕಲ್: ಪರಿಸರ ಮೇಲ್ವಿಚಾರಣೆ ಮತ್ತು ಭಧ್ರತೆಯೊಂದಿಗೆ ಐಒಟಿ ಆಧಾರಿತ ಸ್ಮಾರ್ಟ್ ಇನ್ವೆಂಟರಿ ನಿರ್ವಹಣಾ ವ್ಯವಸ್ಥೆ-ವಿದ್ಯಾರ್ಥಿಗಳ ಸಾಧನೆ

ಬಂಟಕಲ್:ಐಒಟಿ- ಆಧಾರಿತ ಸ್ಮಾರ್ಟ್ ಇನ್ವೆಂಟರಿ ಮ್ಯಾನೇಜ್‌ಮೆಂಟ್ ಸಿಸ್ಟಮ್ ಆಹಾರ ಸಂಗ್ರಹಣಾಸೌಲಭ್ಯಗಳ ದಕ್ಷತೆ ಮತ್ತು ಸುರಕ್ಷತೆಯನ್ನು ಹೆಚ್ಚಿಸಲುವಿನ್ಯಾಸಗೊಳಿಸಲಾದ ಒಂದು ನವೀನ ವ್ಯವಸ್ಥೆಯಾಗಿದೆ. ಬಂಟಕಲ್ಲಿನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಎಲೆಕ್ಟ್ರಾನಿಕ್ ಆ್ಯಂಡ್ ಕಮ್ಯುನಿಕೇಶನ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳು ಅಭಿವೃದ್ದಿಪಡಿಸಿದ ಈ ವ್ಯವಸ್ಥೆಯು ಆರ್‌ಎಫ್‌ಐಡಿ ತಂತ್ರಜ್ಞಾನ,ಮೈಕ್ರೋಕಂಟ್ರೋಲರ್ ಮತ್ತು ಪರಿಸರ ಸಂವೇದಕಗಳನ್ನುಬಳಸಿಕೊಂಡು ದಾಸ್ತಾನು ಟ್ರ್ಯಾಕಿಂಗ್ ಅನ್ನು ಸ್ವಯಂಚಾಲಿತ ಗೊಳಿಸಲು ಮತ್ತು ಸರಿಯಾದ ಸಮಯದಲ್ಲಿ ಶೇಖರಣಾ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುವ ಯೋಜನೆಯಾಗಿದೆ. ಹಿರಿಯ ಪ್ರಾಧ್ಯಾಪಕರಾದ ಶ್ರೀ ಅರುಣ್ ಉಪಾಧ್ಯಾಯ ಅವರ […]

ಮಣಿಪಾಲ: ಸಿಇಐಆರ್ ಪೋರ್ಟಲ್‌ ಮೂಲಕ ಪತ್ತೆಯಾದ 27 ಮೊಬೈಲ್‌ಗಳು ವಾರೀಸುದಾರರಿಗೆ ಹಸ್ತಾಂತರ

ಉಡುಪಿ: ಉಡುಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎರಡು ಮೂರು ತಿಂಗಳ ಅಂತರದಲ್ಲಿ ಸಿಇಐಆರ್ ಪೋರ್ಟಲ್ ಮೂಲಕ ಪತ್ತೆ ಹಚ್ಚಲಾದ ಒಟ್ಟು 27 ಮೊಬೈಲ್‌ಗಳನ್ನು ಬುಧವಾರ ವಾರೀಸುದಾರರಿಗೆ ಹಸ್ತಾಂತರಿಸಲಾಯಿತು. ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕೆಎಸ್‌ಪಿ ಆ್ಯಪ್ ಮೂಲಕ ಮೊಬೈಲ್ ಕಾಣೆಯಾದ ದೂರುಗಳನ್ನು ಸ್ವೀಕರಿಸಿದ್ದು, ನಂತರ ಆ ಮೊಬೈಲ್ ಗಳನ್ನು ಸಿಇಐಆರ್ ಪೋರ್ಟಲ್ ಅಪ್ಲಿಕೇಷನ್ ಅಡಿಯಲ್ಲಿ ಬ್ಲಾಕ್ ಮಾಡಲಾಗಿತ್ತು. 2025ನೇ ಸಾಲಿನಲ್ಲಿ ಸಿಇಐಆರ್ ಪೋರ್ಟಲ್ ಮೂಲಕ ಒಟ್ಟು 32 ಮೊಬೈಲ್‌ಗಳನ್ನು ಪತ್ತೆಹಚ್ಚಲಾಗಿದೆ. ಈ ಮೊಬೈಲ್‌ಗಳ ಒಟ್ಟು ಮೌಲ್ಯ […]

ಹೆಬ್ರಿ: ದಲಿತ ವ್ಯಕ್ತಿಗೆ ಜಾತಿ ನಿಂದಿಸಿ ಹಲ್ಲೆ ಪ್ರಕರಣ: ಆರೋಪಿಗೆ ಜೈಲು ಶಿಕ್ಷೆ – ನ್ಯಾಯಾಲಯ ತೀರ್ಪು

ಉಡುಪಿ: ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿಗೆ ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿರುವ ಪ್ರಕರಣದ ಆರೋಪಿಗೆ ಉಡುಪಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿ ಎ.5ರಂದು ಆದೇಶ ನೀಡಿದೆ. ನಾಲ್ಕೂರು ಗ್ರಾಮದ ನಿವಾಸಿ ಮಂಜುನಾಥ ಮಡಿವಾಳ ಶಿಕ್ಷೆಗೆ ಗುರಿಯಾದ ಆರೋಪಿ. 2019ರ ಮೇ 6ರಂದು ಮುದ್ದೂರು ಎಂಬಲ್ಲಿ ನಾಲ್ಕೂರು ಗ್ರಾಮದ ಮುದ್ದೂರು ನಿವಾಸಿ ಪರಿಶಿಷ್ಟ ಜಾತಿಗೆ ಸೇರಿದ ವಿಠಲ ಪರವ ಎಂಬವರಿಗೆ ಆರೋಪಿ ಮಂಜುನಾಥ ಮಡಿವಾಳ ಎಂಬಾತ ರಿಕ್ಷಾದಲ್ಲಿ ಬಂದು ಜಾತಿ ನಿಂದನೆ […]

ಭಾರತೀಯ ಸೇನೆ ಸೇರಬಯಸುವವರಿಗೆ ಆಯ್ಕೆ ಪೂರ್ವ ಸಿದ್ಧತಾ ತರಬೇತಿ: ಅರ್ಜಿ ಆಹ್ವಾನ

ಉಡುಪಿ: ಭಾರತೀಯ ಸೇನೆ/ಇತರೆ ಯೂನಿಫಾರ್ಮ್ ಸೇವೆಗಳಿಗೆ ಸೇರ ಬಯಸುವ ರಾಜ್ಯದ ಹಿಂದುಳಿದ ವರ್ಗಗಳ ಪ್ರವರ್ಗ-1, 2 (ಎ), 3 (ಎ) ಹಾಗೂ (3ಬಿ) ಗಳ ಅರ್ಹ ಅಭ್ಯರ್ಥಿಗಳಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನ ಮೊದಲನೇ ತಂಡದ ಆಯ್ಕೆಯ ಪೂರ್ವಸಿದ್ದತೆ ಬಗ್ಗೆ ವೃತ್ತಿ ಮಾರ್ಗದರ್ಶನ ಹಾಗೂ ತರಬೇತಿಯನ್ನು ಉಚಿತವಾಗಿ ನೀಡುತ್ತಿದ್ದು, ತರಬೇತಿಗಾಗಿ ಅರ್ಹ ಅಭ್ಯರ್ಥಿಗಳಿಂದ (ಬಾಲಕರಿಗೆ ಮಾತ್ರ) ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಏಪ್ರಿಲ್ 21 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ […]

ಉಚ್ಚಿಲದಲ್ಲಿ ಧಾರ್ಮಿಕ ಮೆರವಣಿಗೆಯಲ್ಲಿ ಸಂಭ್ರಮದಿಂದ ಕುಣಿದ ಬ್ರಿಟನ್ ನಾಗರಿಕರು

ಉಡುಪಿ: ಉಚ್ಚಿಲ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಿಂದ ಹೊರಟ ಶ್ರೀ ಬಬ್ಬುಸ್ವಾಮಿ ಪರಿವಾರ ದೈವಗಳ ಬೆಳ್ಳಿಯ ಪರಿಕಗಳ ಮೆರವವಣಿಗೆಯಲ್ಲಿ ಬ್ರಿಟನ್‌ನ ಪ್ರಜೆಗಳಾದ ಫಿಲ್‌ಪಾರ್ಕ್ ಮತ್ತು ಚಾರ್ಲ್ಸ್ ಅವರು ನಮ್ಮ ತುಳುನಾಡಿನ ಐತಿಹಾಸಿಕ ಕುಣಿತ ಭಜನೆಗೆ ಹೆಜ್ಜೆ ಹಾಕಿ ಸಂಭ್ರಮದಿಂದ ಕುಣಿದರು. ಸಂಸ್ಕೃತಿಯ ಶ್ರೇಷ್ಠತೆ, ತುಳುನಾಡಿನ ಸಮೃದ್ಧ ಪರಂಪರೆ ಮತ್ತು ಭಕ್ತಿಯ ಲಯದೊಂದಿಗೆ ಜಗತ್ತಿನ ಪ್ರಜೆಗಳು ಹೀಗೆ ಕುಣಿದದ್ದು ಜಗತ್ತಿನಲ್ಲಿ ನಾವೆಲ್ಲರೂ ಒಂದೇ ಎನ್ನುವ ಸೌಹಾರ್ದ ಭಾವವನ್ನು ಮೂಡಿಸಿದ್ದು ಖುಷಿಯ ಸಂಗತಿ.