ಕುಂದಾಪುರ: ಮಹಿಳೆ ನೇಣು ಬಿಗಿದು ಆತ್ಮಹತ್ಯೆ.

ಕುಂದಾಪುರ: ಗುಲ್ವಾಡಿ ಗ್ರಾಮದ ಕುಸುಮಾವತಿ (45) ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಮನೆ ಮತ್ತು ತೋಟದ ಕೆಲಸ ಮಾಡಿಕೊಂಡು ಮಕ್ಕಳಾದ ಪ್ರೀಶಾ ಮತ್ತು ವರುಣೇಶ ಅವರೊಂದಿಗೆ ವಾಸವಿದ್ದು ಪತಿ ಉದ್ಯೋಗ ನಿಮಿತ್ತ ಬೆಂಗಳೂರಿನಲ್ಲಿದ್ದಾರೆ. ಖಾಯಿಲೆಯಿಂದ ಗುಣಮುಖರಾಗದ ಬೇಸರದಿಂದ ಮನನೊಂದು ನೇಣು ಹಾಕಿಕೊಂಡಿದ್ದು ಈ ಬಗ್ಗೆ ಪ್ರಕರಣ ದಾಖಲಾಗಿದೆ.

ಮಂಗಳೂರು: ವಿಷರಹಿತ ಹಾವಿನ ಮರಿ ಎಂದು ಹಿಡಿಯಲು ಹೋಗಿ ಕೈಗೆ ಕಚ್ಚಿದ ಹಾವು; ವ್ಯಕ್ತಿ ಮೃತ್ಯು.

ಮಂಗಳೂರು: ವಿಷರಹಿತ ಹಾವೆಂದು ತಪ್ಪಾಗಿ ತಿಳಿದು ಕನ್ನಡಿ ಹಾವನ್ನು ಕೈಯಲ್ಲಿ ಹಿಡಿದ ವೇಳೆ ಕೈಗೆ ಕಚ್ಚಿ ವ್ಯಕ್ತಿ ಮೃತಪಟ್ಟ ಘಟನೆ ಬಜ್ಪೆಯಲ್ಲಿ ನಡೆದಿದೆ.ಬಜ್ಪೆಯ ರಾಮಚಂದ್ರ ಪೂಜಾರಿ(55) ಮೃತ ದುರ್ದೈವಿಯಾಗಿದ್ದಾರೆ. ಗುರುವಾರ ಇಲ್ಲಿನ ಪರಿಸರದಲ್ಲಿ ಕನ್ನಡಿ ಹಾವೊಂದು ಕಾಣಿಸಿಕೊಂಡಿತ್ತು ಇದನ್ನು ರಾಮಚಂದ್ರ ಪೂಜಾರಿ ಅವರು ವಿಷರಹಿತ ಹಾವೆಂದು ತಪ್ಪಾಗಿ ತಿಳಿದು ಕೈಯಲ್ಲಿ ಹಿಡಿದಿದ್ದಾರೆ ಆದರೆ ಈ ವೇಳೆ ಹಾವು ರಾಮಚಂದ್ರ ಅವರ ಕೈಗೆ ಕಚ್ಚಿದೆ, ಇದನ್ನು ಗಂಭೀರವಾಗಿ ಪರಿಗಣಿಸದ ರಾಮಚಂದ್ರ ಅವರು ಮನೆಗೆ ತೆರಳಿದ್ದರು ಆದರೆ ಸಂಜೆಯಾಗುತ್ತಲೇ ಅವರ […]

ಉಡುಪಿ: ಸೆ.15ರಂದು ಎಸಿಸಿಇಎ ವತಿಯಿಂದ ‘ಇಂಜಿನಿಯರ್ ಗಳ ದಿನಾಚರಣೆ’

ಉಡುಪಿ: ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಆ್ಯಂಡ್ ಆರ್ಕಿಟೆಕ್ಟ್ (ಎಸಿಸಿಇಎ) ಉಡುಪಿ ಇದರ ಆಶ್ರಯದಲ್ಲಿ ‘ಇಂಜಿನಿಯರ್ ಗಳ ದಿನಾಚರಣೆ’ ಕಾರ್ಯಕ್ರಮ ಇದೇ ಸೆ.15ರಂದು ಸಂಜೆ 6.30ಕ್ಕೆ ಉಡುಪಿ ಕಿದಿಯೂರು ಹೋಟೆಲ್ ನ ಮಾಧವಕೃಷ್ಣ ಹಾಲ್ ನಲ್ಲಿ ನಡೆಯಲಿದೆ. ಪರಿಸರ ತಜ್ಞ ಡಾ. ಕಲ್ಮಾಡಿ ಸತೀಶ್ ಕಾಮತ್, ನೋಂದಾಯಿತಿ ಮೌಲ್ಯಮಾಪಕರಾದ ರವಿ ಪ್ರಸಾದ್ ಉಪಾಧ್ಯಾಯ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಉಡುಪಿ ನಗರಸಭೆಯ ನಿವೃತ್ತ ಎಇಇ ಗಣೇಶ್ ಕೆ., ಉಡುಪಿ ಮೆಸ್ಕಾಂ ಎಇಇ ಎಸ್. ಗಣರಾಜ್ ಭಟ್, ಆರ್ಕಿಟೆಕ್ಟ್ […]