ಗಣೇಶನ ಮೂರ್ತಿ ತರಲು ಹೋಗುತ್ತಿದ್ದ ವೇಳೆ ಅಪಘಾತ: ಇಬ್ಬರು ಸ್ಥಳದಲ್ಲೇ ಮೃತ್ಯು.

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಭೈರಾಪುರ ಗೇಟ್ ಹತ್ತಿರ ಗಣೇಶ ಮೂರ್ತಿ ತರಲು ಹೋಗುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಟಾಟಾ ಏಸ್ ಒಂದು ಪಲ್ಟಿಯಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ. ಶ್ರೀಧರ್ (20) ಧನುಷ್ (20) ಮೃತ ಯುವಕರು. ಗಣಪತಿ ತರಲು 9 ಜನ ಯುವಕರು ಹೋಗುತ್ತಿದ್ದರು. ಭೈರಾಪುರ ಗೇಟ್ ಬಳಿ ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಟಾಟಾ ಏಸ್ ವಾಹನ ಪಲ್ಟಿಯಾಗಿದೆ. ಈ ಘಟನೆಯಲ್ಲಿ ಇಬ್ಬರು ಯುವಕರ ತಲೆಗೆ ಗಂಭೀರ ಗಾಯವಾಗಿದ್ದು […]

ಉಡುಪಿ: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ತೈಲ ಸೋರಿಕೆ; ಸರಣಿ ಅಪಘಾತ

ಉಡುಪಿ: ಕುಂದಾಪುರದಿಂದ ಬೈಂದೂರಿನತ್ತ ಸಾಗುತ್ತಿದ್ದ ಟ್ಯಾಂಕರ್ ನಲ್ಲಿ ಆಯಿಲ್ ಸೋರಿಕೆಯಾದ ಪರಿಣಾಮ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಲವು ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಂಡ ಘಟನೆ ಇಂದು ಬೆಳಿಗ್ಗೆ ಸಂಭವಿಸಿದೆ. ಕುಂದಾಪುರದ ಕುಂಭಾಶಿಯಿಂದ ಹೆಮ್ಮಾಡಿಯವರೆಗೆ ಹೆದ್ದಾರಿಯಲ್ಲಿ ಆಯಿಲ್ ಚೆಲ್ಲಿದ್ದು, ಬೆಳಿಗ್ಗೆ ಸಣ್ಣ ಪ್ರಮಾಣದ ಮಳೆ ಬಂದ ಕಾರಣ ಮಳೆ‌ನೀರಿನೊಂದಿಗೆ ಆಯಿಲ್ ಮಿಶ್ರ ಸೇರಿಕೊಂಡು ರಸ್ತೆಯುದ್ದಕ್ಕೂ ಹರಡಿದೆ. ಇದರ ಪರಿಣಾಮ ಈ ರಸ್ತೆಯಲ್ಲಿ ಸಾಗುವ ಹಲವು ದ್ವಿಚಕ್ರ ವಾಹನ ಸವಾರರು ಸ್ಕಿಡ್ ಆಗಿ ಬಿದ್ದು ಗಾಯಗೊಂಡಿದ್ದಾರೆ. ಅಲ್ಲದೆ, ಕಾರು ಸಹಿತ […]

ಗಣೇಶ ಚುತುರ್ಥಿಯ ವಿಶೇಷ, ಸ್ವಾರಸ್ಯಗಳನ್ನು ತಿಳಿದುಕೊಳ್ಳೋಣ.

ಗಣೇಶ ಚತುರ್ಥಿಯನ್ನು ವಿನಾಯಕ ಚತುರ್ಥಿ ಎಂದರೆ ಲೋಕವೆಲ್ಲಾ ಬೆಳಗುವ ಹಬ್ಬ. ಗಣೇಶನನ್ನು ಕಣ್ತುಂಬಿಕೊಂಡು ಭಕ್ತರು ಸಂತಸ ಪಡುವ ಹಬ್ಬ. ಈ ಹಬ್ಬದ ಆಚರಣೆಗಳ ಹಿನ್ನೆಲೆ ಕುರಿತ ಸ್ವಾರಸ್ಯಕರ ಸಂಗತಿಗಳನ್ನು ತಿಳಿದುಕೊಳ್ಳೋಣ ಬನ್ನಿ. ಇದು ಪ್ರೀತಿಯ ಆನೆಯ ತಲೆಯ ದೇವತೆಯಾದ ಗಣೇಶನ ಜನ್ಮವನ್ನು ಗೌರವಿಸುತ್ತದೆ. ಇದು ಜನನ, ಜೀವನ ಮತ್ತು ಮರಣದ ಚಕ್ರವನ್ನು ಸಂಕೇತಿಸುತ್ತದೆ ಮತ್ತು ಮನೆಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಗಣೇಶನ ಸಂಕೀರ್ಣವಾಗಿ ಅಲಂಕರಿಸಿದ ವಿಗ್ರಹಗಳನ್ನು ಸ್ಥಾಪಿಸುವ ಮೂಲಕ ಗುರುತಿಸಲಾಗುತ್ತದೆ. ಗಣೇಶನು ರಕ್ಷಣೆ, ನಿಷ್ಠೆ, ಬುದ್ಧಿವಂತಿಕೆ, ಅದೃಷ್ಟ […]

ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ದೊಡ್ಡಣ ಗುಡ್ಡೆಯಲ್ಲಿ ಗಣೇಶ ಚತುರ್ಥಿ ಆಚರಣೆ

ಉಡುಪಿ: ಇದೇ ತಿಂಗಳ ತಾರೀಕು 7ರ ಶನಿವಾರದಂದು ಭಾದ್ರಪದ ಶುಕ್ಲ ಚೌತಿ ತಿಥಿಯಂದು ಶ್ರೀ ಕ್ಷೇತ್ರದ ಪ್ರಸನ್ನ ಗಣಪತಿಯ ಸನ್ನಿಧಾನದಲ್ಲಿ ಗಣೇಶ ಚತುರ್ಥಿಯ ಪ್ರಯುಕ್ತ, ಮೂಡು ಗಣಪತಿ ಸೇವೆ ಸಹಿತ ಅಷ್ಟೋತ್ತರ ಶತ ನಾಳಿಕೇರ ಗಣ ಯಾಗವು(108 ತೆಂಗಿನಕಾಯಿ ಗಣ ಯಾಗವು ) ಕ್ಷೇತ್ರದ ಧರ್ಮದರ್ಶಿ ಶ್ರೀಯುತ ಶ್ರೀ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ನೆರವೇರಲಿದೆ.. ಪ್ರಾತಃಕಾಲ ಗಂಟೆ ಒಂಬತ್ತರಿಂದ ಗಣ ಯಾಗವು ಆರಂಭಗೊಳ್ಳಲಿದೆ.ಮಧ್ಯಾಹ್ನ ಮೂಡು ಗಣಪತಿ ಸೇವೆ ಪ್ರಸನ್ನ ಪೂಜೆ ಸಂಜೆ ರಂಗ ಪೂಜೆ ನೆರವೇರಲಿದೆ..ಈ […]