ಉಡುಪಿ: ಪುತ್ತಿಗೆ ಪರ್ಯಾಯ ಸ್ವಾಗತ ಸಮಿತಿ ಕಾರ್ಯಾಲಯ ಉದ್ಘಾಟನೆ

ಉಡುಪಿ: ವಿಶ್ವ ಶಾಂತಿಗೆ ಕೃಷ್ಣನ ಸಂದೇಶ ಅತೀ ಅಗತ್ಯ. ಇಂದು ವಿವಿಧ ದೇಶಗಳಲ್ಲಿ ಯುದ್ಧ, ಸಂಘರ್ಷ, ಹಾನಿ, ಪ್ರಾಕೃತಿಕ ವಿಕೋಪ ನಡೆಯುತ್ತಿದೆ. ಇದೆಲ್ಲವನ್ನು ನಿಲ್ಲಿಸಬೇಕಾದರೆ ಕೃಷ್ಣನ ಸಂದೇಶವನ್ನು ಜಗತ್ತಿನಾದ್ಯಂತ ವಿಸ್ತರಿಸಬೇಕು ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಹೇಳಿದರು. ಉಡುಪಿ ಪುತ್ತಿಗೆ ಮಠದಲ್ಲಿ ಇಂದು ಪುತ್ತಿಗೆ ಪರ್ಯಾಯದ ಲಾಂಛನ ಅನಾವರಣಗೊಳಿಸಿ ಮಾತನಾಡಿದ ಅವರು, ಕೃಷ್ಣನ ಭಗವದ್ಗೀತೆಯಲ್ಲಿ ಅನೇಕ ವಿಚಾರಗಳಿವೆ. ಇದು ವಿಶ್ವಕ್ಕೆ ಮ್ಯಾನೇಜ್ ಮೆಂಟ್ ಕೋರ್ಸ್ ಆಗಬೇಕು. ಸಣ್ಣ ಸಣ್ಣ ವಿಚಾರಗಳಿಗೆ ಘರ್ಷಣೆ, ಗಲಾಟೆ […]

ಉದ್ಯಮಿಗೆ 5 ಕೋಟಿ ವಂಚನೆ ಪ್ರಕರಣ: ಕಣಜಾರಿನಲ್ಲಿ ಗೆಳೆಯನಿಗೆ 2 ಅಂತಸ್ತಿನ ಮನೆ ಕಟ್ಟಿಸುತ್ತಿದ್ದ ಚೈತ್ರ ಕುಂದಾಪುರ

ಉಡುಪಿ: ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ಐದು ಕೋಟಿ ವಂಚನೆ ಮಾಡಿದ ಪ್ರಕರಣದಲ್ಲಿ ಪೊಲೀಸ್‌ ವಶದಲ್ಲಿರುವ ಚೈತ್ರ ಕುಂದಾಪುರ ಹೊಸ ಮನೆಯೊಂದು ಕಟ್ಟಿಸುತ್ತಿದ್ದರು ಎನ್ನಲಾಗಿದೆ. ಚೈತ್ರ 5 ಕೋಟಿ ರೂ. ಲೂಟಿ ಹೊಡೆದು ಗೆಳೆಯನ ಹೆಸರಲ್ಲಿ ಮನೆ ಕಟ್ಟಿಸುತ್ತಿರುವುದು ಪತ್ತೆಯಾಗಿದೆ. ಕಾರ್ಕಳದ ಕಣಜಾರು ಪ್ರದೇಶದಲ್ಲಿ ಜಾಗ ಖರೀದಿ ಮಾಡಿದ ಚೈತ್ರ, ಶ್ರೀಕಾಂತ್‌ ಹೆಸರಿನಲ್ಲಿ ಮನೆ ಕಟ್ಟಿಸುತ್ತಿದ್ದಳು ಎಂದು ತಿಳಿದು ಬಂದಿದೆ. ಆದರೆ ಶ್ರೀಕಾಂತ್‌ನ್ನು ವಶಕ್ಕೆ ಪಡೆದ ಬಳಿಕ ಮನೆಯ ಕಾಮಗಾರಿ ಅರ್ಧದಲ್ಲೇ ನಿಂತಿದೆ ಎನ್ನಲಾಗುತ್ತಿದೆ. ಕಣಜಾರಿನಲ್ಲಿ ಎರಡು […]

ಸೆ.16 ರಿಂದ 29 ರ ವರೆಗೆ ಜನನಿ EMI ಉತ್ಸವ… ಸಂಪೂರ್ಣ ಬಡ್ಡಿ ರಹಿತ ಮತ್ತು ಶುಲ್ಕ ರಹಿತ ಖರೀದಿಯೊಂದಿಗೆ ಗಣೇಶ ಹಬ್ಬವನ್ನು ಸಂಭ್ರಮಿಸಿರಿ!!

ಬ್ರಹ್ಮಾವರ: ಕಳೆದ ಹಲವು ವರ್ಷಗಳಿಂದ ತನ್ನ ಗುಣಮಟ್ಟದಿಂದ ಜಿಲ್ಲೆಯಾದ್ಯಂತ ಮನೆಮಾತಾಗಿರುವ ಜನನಿ ಎಂಟರ್ಪ್ರೈಸಸ್ ಹೋಂ ಅಪ್ಲಾಯನ್ಸಸ್ ಮತ್ತು ಫರ್ನಿಚರ್ ಶೋ ರೂಂ ನಲ್ಲಿ ಊಹಿಸಲಾಗದ ಅತ್ಯಾಕರ್ಷಕ EMI ಉತ್ಸವ…. ಜನನಿಯಲ್ಲಿ ಖರೀದಿಸುವ ಮೊಬೈಲ್, ಫರ್ನಿಚರ್ಸ್, ಕಿಚನ್ ಅಪ್ಲಾಯನ್ಸಸ್ ಮತ್ತು ಎಲೆಕ್ಟ್ರಾನಿಕ್ಸ್ ವಸ್ತುಗಳ ಮೇಲೆ ಸಂಪೂರ್ಣ ಬಡ್ಡಿ ರಹಿತ ಮತ್ತು ಶುಲ್ಕ ರಹಿತ EMI… ಈ ಗಣೇಶ ಚತುರ್ಥಿಯ ಸಂಭ್ರಮವನ್ನು ಜನನಿಯ ಜೊತೆ ಸಂಭ್ರಮಿಸಲು ಸುವವರ್ಣಾವಕಾಶ…. ಪ್ರತಿ ಖರೀದಿಯ ಮೇಲೆ ಕ್ಯಾಶ್ ಬ್ಯಾಕ್, ಆಕರ್ಷಕ ದರ, ವಿಶೇಷ ಉಡುಗೊರೆ […]

ಸೌಜನ್ಯ ಪ್ರಕರಣದ ತಾರ್ಕಿಕ ಅಂತ್ಯಕ್ಕೆ ಆಗ್ರಹಿಸಿ ಎಬಿವಿಪಿ ವತಿಯಿಂದ ಸಭೆ

ಉಡುಪಿ: ಸೌಜನ್ಯ ಪ್ರಕರಣಕ್ಕೆ ತಾರ್ಕಿಕ ಅಂತ್ಯ ನೀಡುವಂತೆ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಉಡುಪಿ ವತಿಯಿಂದ ಸಭೆ ನಡೆಸಲಾಯಿತು. ನಗರದ ಹೃದಯ ಭಾಗವಾದ ಬೋರ್ಡ್ ಶಾಲಾ ಮೈದಾನದಲ್ಲಿ 11 ಗಂಟೆಗೆ ಸಭೆ ಸೇರಿ ಮೊದಲಿಗೆ ಮೌನಾಚರಣೆಯನ್ನು ನಡೆಸಿ ನಂತರ ಎಬಿವಿಪಿ ತಾಲೂಕು ಸಂಚಾಲಕ ಅಜಿತ್ ಜೋಗಿ ಪ್ರಾಸ್ತಾವಿಕವಾಗಿ ಮಾತನಾಡಿ, 11 ವರ್ಷಗಳ ಹಿಂದೆ ಸೌಜನ್ಯ ಪ್ರಕರಣ ನಡೆದಾಗ ಪ್ರಥಮ ಬಾರಿಗೆ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ಸೇರಿಸಿ ಪ್ರಕರಣದ ಗಂಭೀರತೆಯನ್ನು ಸರಕಾರಕ್ಕೆ ಮತ್ತು ಸಮಾಜದಲ್ಲಿ ತಿಳಿಸಿ ಸಿಬಿಐ […]