ಅಮರನಾಥ ಯಾತ್ರೆಯಲ್ಲಿ ಹವಾಮಾನ ವೈಪರೀತ್ಯದ ಪರಿಣಾಮ ಸಂಕಷ್ಟಕ್ಕೆ ಸಿಲುಕಿದ ಕನ್ನಡಿಗರ ಅಗತ್ಯ ಕ್ರಮಕ್ಕೆ ಸೂಚನೆ ನೀಡಿದ ಸಿಎಂ

ಬೆಂಗಳೂರು: ಗದಗನಿಂದ ತೆರಳಿರುವ 23 ಮಂದಿ ಸೇರಿ ಒಟ್ಟು 80 ಮಂದಿ ಕನ್ನಡಿಗರು ಅಮರನಾಥ ಮಂದಿರದಿಂದ 6 ಕಿ.ಮೀ ದೂರದಲ್ಲಿರುವ ಪಂಚತಾರ್ನಿ ಟೆಂಟ್​​ನಲ್ಲಿ ಸಿಲುಕಿದ್ದಾರೆ ಎನ್ನುವ ಮಾಹಿತಿ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಅಗತ್ಯ ರಕ್ಷಣಾ ಕಾರ್ಯ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.ಜೈನಮುನಿ ಹತ್ಯೆ ಪ್ರಕರಣದ ಸಮಗ್ರ ತನಿಖೆ: ಹಿರೇಕೋಡಿಯ ಜೈನಮುನಿ ಹತ್ಯೆ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಿ ಆರೋಪಿಗಳಿಗೆ ನ್ಯಾಯಾಲಯದಲ್ಲಿ ಶಿಕ್ಷೆ ಆಗುವಂತೆ ಕಾನೂನು ಕ್ರಮ ಕೈಗೊಳ್ಳಲು ಹಿರಿಯ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಅವರು ಸೂಚಿಸಿದ್ದಾರೆ. ಪವಿತ್ರ ಅಮರನಾಥ […]

ಮಾಜಿ ಸಿಎಂ ಹೆಚ್​ಡಿಕೆ-ಅಶ್ವಿನಿ ಪುನೀತ್ ರಾಜ್​ಕುಮಾರ್​​ ಸಾಥ್​ : ಹೊಸ ಪ್ರತಿಭೆಗಳ ‘ಪರಂವಃ’ ಚಿತ್ರ

ಇದೀಗ ಮತ್ತೆ ವೀರಗಾಸೆಯನ್ನು ಪ್ರಮುಖವಾಗಿಟ್ಟುಕೊಂಡು ಸಿನಿಮಾವೊಂದು ಸಿದ್ಧವಾಗಿದೆ. ತಂದೆ ಮತ್ತು ಮಗನ ನಡುವಿನ ಬಾಂಧವ್ಯವನ್ನು ಹೇಳುವ ಚಿತ್ರ ಇದಾಗಿದೆ. ಹೊಸ ಪ್ರತಿಭೆಗಳ ‘ಪರಂವಃ’ ಚಿತ್ರ ಈಗಾಗಲೇ ಹಾಡು ಮತ್ತು ಟೀಸರ್​​ ಮೂಲಕ ಸಿನಿ ಪ್ರೇಮಿಗಳ ಮನ ಗೆದ್ದಿದ್ದು, ಬಿಡುಗಡೆಗೆ ಸಜ್ಜಾಗಿದೆ. ಶಿವನ ಡಮರುಗದಿಂದ ಬರುವ ಮೊದಲ ಶಬ್ದಕ್ಕೆ ‘ಪರಂವಃ’ ಎಂದು ಕರೆಯಲಾಗುತ್ತದೆ.ಕನ್ನಡ ಚಿತ್ರರಂಗದಲ್ಲಿ ವೀರಗಾಸೆ ಹಾಗೂ ದೇಸಿಕಲೆಯ ಬಗೆಗಿನ ಕಥೆಯನ್ನು ಒಳಗೊಂಡ ಸಿನಿಮಾಗಳು ಬಂದಿವೆ.ಹೊಸ ಪ್ರತಿಭೆಗಳ ‘ಪರಂವಃ’ ಚಿತ್ರಕ್ಕೆ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಹಾಗೂ ನಿರ್ಮಾಪಕಿ […]

ಮಹೇಶ್​ ಬಾಬುಗೆ ಡಾಲಿ ಧನಂಜಯ್​ ಸಾಥ್ ‘ಅಪರೂಪ’ ಚಿತ್ರದ ಟ್ರೇಲರ್​ ರಿಲೀಸ್

ವಿಭಿನ್ನ ಹಾಗೂ ವಿಶಿಷ್ಟ ಪ್ರೇಮಕಥೆಗಳನ್ನು ಪ್ರೇಕ್ಷಕರಿಗೆ ಉಣಬಡಿಸುವಲ್ಲಿ ಇವರು ಎಂದಿಗೂ ಮುಂದು. ಇದೀಗ ಇವರ ನಿರ್ದೇಶನದಲ್ಲಿ ಮತ್ತೊಂದು ಸಿನಿಮಾ ಮೂಡಿಬರುತ್ತಿದೆಕನ್ನಡ ಚಿತ್ರರಂಗದಲ್ಲಿ‌ ‘ಆಕಾಶ್’, ‘ಅರಸು’ನಂತಹ ಸೂಪರ್​ ಹಿಟ್​ ಸಿನಿಮಾಗಳನ್ನು ನಿರ್ದೇಶನ ಮಾಡಿ ಸಕ್ಸಸ್​ ಫುಲ್​ ಡೈರೆಕ್ಟರ್​ ಎನಿಸಿಕೊಂಡವರು ಮಹೇಶ್​ ಬಾಬು.ಮಹೇಶ್​ ಬಾಬು ನಿರ್ದೇಶನದ ‘ಅಪರೂಪ’ ಚಿತ್ರದ ಟ್ರೇಲರ್​ ಅನ್ನು ನಟ ರಾಕ್ಷಸ ಡಾಲಿ ಧನಂಜಯ್​ ಬಿಡುಗಡೆಗೊಳಿಸಿದ್ದಾರೆ. . ಆಲ್​ ಮೋಸ್ಟ್​ ಶೂಟಿಂಗ್​ ಮುಗಿಸಿರುವ ‘ಅಪರೂಪ’ ಚಿತ್ರ ಇನ್ನೇನು ಬಿಡುಗಡೆಗೆ ಸಜ್ಜಾಗಿದೆ. ಇದೀಗ ಸಿನಿಮಾದ ಟ್ರೇಲರ್​ ಅನ್ನು ನಟ […]

ಬಾಂಗ್ಲಾ ವಿರುದ್ಧ ಭಾರತ ಟಿ20 ಸರಣಿ ನಾಳೆಯಿಂದ ಆರಂಭ

ಭಾರತದ ಮಹಿಳಾ ತಂಡ ನಾಲ್ಕು ತಿಂಗಳ ಬ್ರೇಕ್​ನ ನಂತರ ಅಂತಾರಾಷ್ಟ್ರೀಯ ಪಂದ್ಯವನ್ನು ಆಡುತ್ತಿದೆ ಹರ್ಮನ್​ಪ್ರೀತ್ ಕೌರ್​​ ನಾಯಕತ್ವದಲ್ಲಿ ಆಟಗಾರ್ತಿಯರು ಬಾಂಗ್ಲಾ ನೆಲದಲ್ಲಿ ಮೂರು ಟಿ20 ಪಂದ್ಯಕ್ಕೆ ಅಣಿಯಾಗುತ್ತಿದ್ದಾರೆ. ನಾಳೆಯಿಂದ ಮೂರು ಟಿ20 ಪಂದ್ಯದ ಸರಣಿ ಆರಂಭವಾಗಲಿದೆ. ಟಿ20 ನಂತರ ಮೂರು ಏಕದಿನ ಪಂದ್ಯವನ್ನು ಬಾಂಗ್ಲಾದೇಶದಲ್ಲಿ ಕೌರ್​ ನಾಯಕತ್ವದ ತಂಡ ಆಡಲಿದೆ.ವುಮೆನ್ಸ್​ ಪ್ರೀಮಿಯರ್​ ಲೀಗ್​ನಲ್ಲಿ ಉತ್ತಮ ಪ್ರದರ್ಶನ ನೀಡದ ಯುವ ಪ್ರತಿಭೆಗಳನ್ನ ಹೊಂದಿದ ತಂಡದ ಜೊತೆಗೆ ಕೌರ್​ ನಾಯಕತ್ವದ ತಂಡ ಬಾಂಗ್ಲಾದೇಶದ ವಿರುದ್ಧ ನಾಳೆ ಕಣಕ್ಕಿಳಿಯಲಿದೆ. .ಮಹಿಳಾ ತಂಡವು […]

ವಂದೇ ಭಾರತ್ ಸೇರಿ, ಎಲ್ಲ ಎಸಿ ರೈಲುಗಳ ಟಿಕೆಟ್‌ ದರ ಕಡಿತ

ನವದೆಹಲಿ:ವಸತಿ ಸೌಕರ್ಯದ ಬಳಕೆಯನ್ನು ಉತ್ತಮಗೊಳಿಸುವ ಉದ್ದೇಶದಿಂದ, ಎಸಿ ಆಸನಗಳನ್ನು ಹೊಂದಿರುವ ರೈಲುಗಳಲ್ಲಿ ರಿಯಾಯಿತಿ ಶುಲ್ಕ ಯೋಜನೆಗಳನ್ನು ಪರಿಚಯಿಸಲು ರೈಲ್ವೆ ವಲಯಗಳ ಪ್ರಧಾನ ಮುಖ್ಯ ವಾಣಿಜ್ಯ ವ್ಯವಸ್ಥಾಪಕರಿಗೆ ಅಧಿಕಾರವನ್ನು ನೀಡಲು ರೈಲ್ವೆ ಸಚಿವಾಲಯ ನಿರ್ಧರಿಸಿದೆ ವಂದೇ ಭಾರತ್ ಸೇರಿದಂತೆ ಎಲ್ಲ ರೈಲುಗಳ ಎಸಿ ಚೇರ್ ಕಾರ್‌ಗಳು ಮತ್ತು ಎಕ್ಸಿಕ್ಯೂಟಿವ್ ಕ್ಲಾಸ್‌ಗಳು ಹಾಗೂ ಅನುಭೂತಿ, ವಿಸ್ಟಾಡೋಮ್ ಕೋಚ್‌ಗಳ ದರವನ್ನು ಸೀಟುಗಳಿಗೆ ಅನುಗುಣವಾಗಿ ಶೇ.25 ರಷ್ಟು ಕಡಿಮೆ ಮಾಡಲಾಗುವುದು ಎಂದು ರೈಲ್ವೆ ಮಂಡಳಿ ತನ್ನ ಸುತ್ತೋಲೆಯಲ್ಲಿ ತಿಳಿಸಿದೆ. ದರಗಳು ಸಹ ಸ್ಪರ್ಧಾತ್ಮಕ […]