ಮಾಜಿ ಕ್ರಿಕೆಟಿಗ ಸುರೇಶ್​ ರೈನಾ ಆಮ್​ಸ್ಟರ್​ಡ್ಯಾಮ್​ನಲ್ಲಿ ಇಂಡಿಯನ್ ರೆಸ್ಟೋರೆಂಟ್

ಭಾರತದ ಮಾಜಿ ಕ್ರಿಕೆಟಿಗ ಸುರೇಶ್​ ರೈನಾ ನೆದರ್​ಲ್ಯಾಂಡ್​ನ ರಾಜಧಾನಿ ಆಮ್​ಸ್ಟರ್​ಡ್ಯಾಮ್​ನಲ್ಲಿ ರೆಸ್ಟೋರೆಂಟ್​ ಆರಂಭಿಸಿದ್ದಾರೆ. ಮಾಜಿ, ಹಾಲಿ ಆಟಗಾರರು ಕ್ರಿಕೆಟ್​ ಆಟವಲ್ಲದೇ, ಉದ್ಯಮದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.ಅದಕ್ಕೆ ರೈನಾ ಇಂಡಿಯನ್ ರೆಸ್ಟೋರೆಂಟ್ ಎಂದು ಹೆಸರಿಟ್ಟಿದ್ದಾರೆ. ಸ್ವತಃ ಆಹಾರ ಪ್ರೇಮಿಯೂ ಆಗಿರುವ ಮಾಜಿ ಕ್ರಿಕೆಟಿಗ ಸುರೇಶ್​ ರೈನಾ ಹೊಸ ಇನಿಂಗ್ಸ್​ ಆರಂಭಿಸಿದ್ದು, ನೆದರ್​ಲ್ಯಾಂಡ್​​ನ ಆಮ್​ಸ್ಟರ್​ಡ್ಯಾಮ್​ನಲ್ಲಿ ತಮ್ಮದೇ ಹೆಸರಿನಲ್ಲಿ ರೆಸ್ಟೋರೆಂಟ್​ ಶುರು ಮಾಡಿದ್ದಾರೆ. ರೆಸ್ಟೋರೆಂಟ್​ನ ಕೆಲ ಚಿತ್ರಗಳನ್ನು ಟ್ವೀಟ್​ ಮಾಡಿ ಹಂಚಿಕೊಂಡಿದ್ದಾರೆ. ಇದಕ್ಕೆ ಬ್ಯಾಟಿಂಗ್​ ಕಿಂಗ್ ವಿರಾಟ್ ಕೊಹ್ಲಿ ಸೇರಿದಂತೆ ಹಲವು ಕ್ರಿಕೆಟಿಗರು […]

ಭಾರತದ ಪುರುಷರ ತಂಡ ಮೊದಲ ಬಾರಿಗೆ ಏಷ್ಯನ್​ ಗೇಮ್​​ನಲ್ಲಿ.. ಜೊತೆಗೆ ಮಹಿಳಾ ಕ್ರಿಕೆಟ್​ ತಂಡವೂ ಭಾಗಿ

ಏಷ್ಯನ್ ಗೇಮ್ಸ್ 2023 ಈ ವರ್ಷದ ಕೊನೆಯಲ್ಲಿ ಚೀನಾದ ಹ್ಯಾಂಗ್‌ಝೌ ನಗರದಲ್ಲಿ ಆಯೋಜಿಸಲಾಗಿದೆ.: ಈ ವರ್ಷ ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯಲಿರುವ ಏಷ್ಯನ್​ ಗೇಮ್ಸ್​ನಲ್ಲಿ ಭಾರತದ ಪುರುಷರ ಮತ್ತು ಮಹಿಳಾ ಕ್ರಿಕೆಟ್​ ತಂಡಗಳು ಭಾಗವಹಿಸಲಿವೆ. ಇದಕ್ಕೂ ಮುನ್ನ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಬಾರಿಯ ಏಷ್ಯನ್ ಗೇಮ್ಸ್‌ಗೆ ಭಾರತೀಯ ಪುರುಷ ಮತ್ತು ಮಹಿಳಾ ಕ್ರಿಕೆಟ್ ತಂಡವನ್ನು ಕಳುಹಿಸಲು ಬಿಸಿಸಿಐ ನಿರ್ಧರಿಸಿದೆ. ಈ ಟೂರ್ನಿಯಲ್ಲಿ ಟಿ-20 ಮಾದರಿಯಲ್ಲಿ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗುವುದು. ಆದರೆ, ಇಲ್ಲಿ […]

ಪ್ರಧಾನಿ ಮೋದಿ ಮಹತ್ವದ ಘೋಷಣೆ ಝೆಡ್ : ಅಮೆರಿಕದಲ್ಲೇ ಹೆಚ್​1ಬಿ ವೀಸಾ ನವೀಕರಣ

ವಾಷಿಂಗ್ಟನ್: ಅಮೆರಿಕದಲ್ಲಿ ಉದ್ಯೋಗಿಯಾಗಿರುವ ಭಾರತೀಯರು ಹೆಚ್​1ಬಿ ವೀಸಾ ನವೀಕರಣಕ್ಕಾಗಿ ಇನ್ನು ಭಾರತಕ್ಕೆ ಬರುವ ಅಗತ್ಯವಿಲ್ಲ. ಉದ್ಯೋಗ ವೀಸಾವಾದ ಹೆಚ್​1ಬಿ ನವೀನಕರಣಕ್ಕೆ ಇನ್ನು ಭಾರತಕ್ಕೆ ಬರುವ ತಾಪತ್ರಯ ಇರಲ್ಲ. ಅಮೆರಿಕದಲ್ಲೇ ವೀಸಾವನ್ನು ರಿನ್ಯುವಲ್​ ಮಾಡಿಕೊಳ್ಳಬಹುದಾಗಿದೆ. ಮೋದಿ ಮತ್ತು ಬೈಡನ್​​ ಮಧ್ಯೆ ಇಂತಹ ಮಹತ್ವದ ಮಾತುಕತೆ ನಡೆದಿದೆ. ಅಲ್ಲೇ ವೀಸಾವನ್ನು ನವೀಕರಣ ಮಾಡಿಕೊಳ್ಳಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಹತ್ವದ ಘೋಷಣೆ ಮಾಡಿದ್ದಾರೆ. 4 ದಿನಗಳ ಅಮೆರಿಕ ಪ್ರವಾಸದಲ್ಲಿದ್ದ ಪ್ರಧಾನಿ ಮೋದಿ ಅವರು, ಆ ದೇಶದೊಂದಿಗೆ ಹಲವು ಮಹತ್ವದ […]

ಹುಡುಗಿಯರಿಗೆ ಒಲಿಯಲಿದೆ ಸೇನೆ ಸೇರುವ ಅವಕಾಶ ಅಗ್ನಿವೀರ್ ನೇಮಕಾತಿ ಪ್ರಕ್ರಿಯೆ ಶುರು..

ಅಲ್ಮೋರಾ, ಉತ್ತರಾಖಂಡ: ಜಿಲ್ಲೆಯ ರಾಣಿಖೇತ್ ತಾಲೂಕಿನ ವ್ಯಾಪ್ತಿಯಲ್ಲಿರುವ ಐತಿಹಾಸಿಕ ಸೋಮನಾಥ ಮೈದಾನದಲ್ಲಿ ಅಗ್ನಿವೀರ್ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಉತ್ತರಾಖಂಡ್​ನಲ್ಲಿ ಅಗ್ನಿವೀರ್ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಹೆಣ್ಣು ಮಕ್ಕಳಿಗೂ ಸೇನೆ ಸೇರುವ ಅವಕಾಶ ಸಿಗಲಿದೆ ಎಂದು ಹೆಡ್‌ಕ್ವಾರ್ಟರ್ಸ್ ನೇಮಕಾತಿ ವಲಯ (ಲಖನೌ) ಮೇಜರ್ ಜನರಲ್ ಮನೋಜ್ ತಿವಾರಿ ಹೇಳಿದರು. ಹೆಡ್‌ಕ್ವಾರ್ಟರ್ಸ್ ನೇಮಕಾತಿ ವಲಯ (ಲಖನೌ) ಮೇಜರ್ ಜನರಲ್ ಮನೋಜ್ ತಿವಾರಿ ಈ ವೇಳೆ ಯುವಕರಿಗೆ ಪ್ರೋತ್ಸಾಹಿಸಿದರು. ನೇಮಕಾತಿ ಪ್ರಕ್ರಿಯೆಯಲ್ಲಿ 1.6 ಕಿಲೋಮೀಟರ್ ಓಟ ಆಯೋಜಿಸಲಾಗಿತ್ತು. ಇದರಲ್ಲಿ ಪಾಸ್​ ಆದ […]

ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಜಾರಿಗೆ ಮೀನಾಮೇಷ ಮಾಡುತ್ತಿರುವುದು ಸರಿಯಲ್ಲ : ಬಿಜೆಪಿ ರಾಜ್ಯ ಉಪಾಧ್ಯಕ್ಷೆ ನಯನಾ

ಉಡುಪಿ: ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಜಾರಿಗೊಳಿಸುವಲ್ಲಿ ಮೀನಾಮೇಷ ಮಾಡುತ್ತಿರುವುದು ಸರಿಯಲ್ಲ ಎಂದು ಬಿಜೆಪಿ ರಾಜ್ಯಉಪಾಧ್ಯಕ್ಷೆ ನಯನಾ ಗಣೇಶ್ ಖಂಡಿಸಿದ್ದಾರೆ. ರಾಜ್ಯದ ಜನರಿಗೆ ಗ್ಯಾರಂಟಿ ಕಾರ್ಡ್ ತೋರಿಸಿ ಪ್ರಚಾರ ಮಾಡಿದ ಕಾಂಗ್ರೆಸ್ ನಾಯಕರು ಇದೀಗ ಅಕ್ಕಿ ವಿತರಣೆ ವಿಚಾರದಲ್ಲಿ ಕೇಂದ್ರ ಸರ್ಕಾರವನ್ನು ಆರೋಪಿಸುವ ಮೂಲಕ ತಮ್ಮ ಗ್ಯಾರಂಟಿಯಿಂದ ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ಗೃಹ ಲಕ್ಷ್ಮಿ ಯೋಜನೆಯನ್ನು ಸರ್ಕಾರ ಮುಂದೂಡಿದ್ದು, ಪೂರ್ವ ತಯಾರಿಯಿಲ್ಲದೇ ಜನರ ಕಣ್ಣಿಗೆ ಮಣ್ಣೆರೆಚುವ ಕೆಲಸ ಮಾಡುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. 200 ಯೂನಿಟ್ ವಿದ್ಯುತ್ ಉಚಿತ ಘೋಷಿಸಿ […]