ಮೋದಿ ಪ್ರವಾಸದ ಪ್ರಭಾವದಿಂದ ಭಾರತದ ನುರಿತ ಉದ್ಯೋಗಿಗಳಿಗಾಗಿ ಸರಳ ವೀಸಾ ಯೋಜನೆ ರೂಪಿಸಲು ಮುಂದಾದ ಅಮೆರಿಕ

ವಾಷಿಂಗ್ಟನ್ ಡಿಸಿ (ಅಮೆರಿಕ): ಭಾರತದ ತಜ್ಞ ಉದ್ಯೋಗಿಗಳಿಗಾಗಿ ಅಮೆರಿಕವು ಸರಳ ವೀಸಾ ಯೋಜನೆ ರೂಪಿಸುತ್ತಿದೆ. ಭಾರತೀಯರು ಅಮೆರಿಕ ಪ್ರವೇಶಿಸಲು ಅಥವಾ ಉಳಿಯಲು ಸಹಾಯ ಮಾಡುವ ಸಲುವಾಗಿ ಅಧ್ಯಕ್ಷ ಜೋ ಬೈಡನ್​ ಆಡಳಿತವು ಭಾರತೀಯರಿಗಾಗಿ ಸುಲಭ ಪ್ರಕ್ರಿಯೆಗಳನ್ನು ಜಾರಿ ಮಾಡಲು ಮುಂದಾಗಿದೆ ಎಂದು ವರದಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕೃತ ಅಮೆರಿಕ ಪ್ರವಾಸದ ನಡುವೆ ಈ ಬೆಳವಣಿಗೆ ನಡೆದಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕ ಪ್ರವಾಸದ ನಡುವೆ ಭಾರತದ ನುರಿತ ಉದ್ಯೋಗಿಗಳಿಗಾಗಿ ಅಮೆರಿಕ ಸರಳ ವೀಸಾ […]

ಕಟಪಾಡಿ : ಎಸ್.ವಿ.ಎಸ್ ಶಾಲೆ ಮತ್ತು ತ್ರಿಶಾ ವಿದ್ಯಾ ಕಾಲೇಜು ವಿದ್ಯಾರ್ಥಿಗಳಿಂದ ಯೋಗ ದಿನಾಚರಣೆ

ಕಟಪಾಡಿ : ದಿನಾಂಕ 21 ಜೂನ್ ಬುಧವಾರದಂದು ‘ವಿಶ್ವ ಯೋಗ ದಿನಾಚರಣೆ’ ಯ ಪ್ರಯುಕ್ತ ಕಟಪಾಡಿಯ ಎಸ್.ವಿ.ಎಸ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತ್ರಿಶಾ ವಿದ್ಯಾ ಕಾಲೇಜಿನ ವಿದ್ಯಾರ್ಥಿಗಳಿಂದ ಯೋಗಾಭ್ಯಾಸದ ಪ್ರಾತ್ಯಕ್ಷಿಕೆ ನಡೆಯಿತು. ಎಸ್.ವಿ.ಎಸ್ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಜೀವನದಲ್ಲಿ ಆರೋಗ್ಯವಂತರಾಗಿರಲು ಯೋಗಾಭ್ಯಾಸದ ಮಹತ್ವ ಏನು ಎಂಬುದನ್ನು ತಿಳಿದುಕೊಂಡರು. ಕಾರ್ಯಕ್ರಮದಲ್ಲಿ ಎಸ್.ವಿ.ಎಸ್. ವಿದ್ಯಾವರ್ಧಕ ಸಂಘದ ಸಂಚಾಲಕರಾದ ಸತ್ಯೇಂದ್ರ ಪೈ, ಎಸ್.ವಿ.ಎಸ್ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಸಹಶಿಕ್ಷಕರು ಜೊತೆಗೆ ತ್ರಿಶಾ ವಿದ್ಯಾ ಕಾಲೇಜಿನ ಪ್ರಾಧ್ಯಾಪಕರು ಉಪಸ್ಥಿತರಿದ್ದರು.

ಮೈಸೂರಿನ ಶೀಗಂಧದ ಪೆಟ್ಟಿಗೆಯಲ್ಲಿ ದಶದಾನ; ಪ್ರಯೋಗಾಲಯದಲ್ಲಿ ಬೆಳೆದ 7.5-ಕ್ಯಾರೆಟ್ ಹಸಿರು ವಜ್ರ: ಬೈಡನ್ ದಂಪತಿಗೆ ಮೋದಿ ಉಡುಗೊರೆ

ವಾಷಿಂಗ್ಟನ್: ಬುಧವಾರ ಶ್ವೇತಭವನದಲ್ಲಿ ಬೈಡನ್ ದಂಪತಿಗಳು ನೀಡಿದ ಖಾಸಗಿ ಔತಣಕೂಟಕ್ಕೆ ತೆರಳಿದ ಪ್ರಧಾನಿ ನರೇಂದ್ರ ಮೋದಿ ಅವರು ಅಧ್ಯಕ್ಷ ಜೋ ಬಿಡೆನ್ ಮತ್ತು ಪ್ರಥಮ ಮಹಿಳೆ ಜಿಲ್ ಬಿಡೆನ್ ಅವರಿಗೆ ವಿಶೇಷ ಉಡುಗೊರೆಗಳನ್ನು ನೀಡಿದರು. ಜೈಪುರದ ಕುಶಲಕರ್ಮಿಯೊಬ್ಬರು ಕರಕುಶಲತೆಯಿಂದ ತಯಾರಿಸಿದ ‘ದಶ ದಾನ’ ಹೊಂದಿದ ವಿಶೇಷ ಶ್ರೀಗಂಧದ ಪೆಟ್ಟಿಗೆಯನ್ನು ಅಧ್ಯಕ್ಷ ಬೈಡೆನ್ ಅವರಿಗೆ ಪ್ರಧಾನಿ ಮೋದಿ ಉಡುಗೊರೆಯಾಗಿ ನೀಡಿದರು. ಕರ್ನಾಟಕದ ಮೈಸೂರಿನಿಂದ ತರಿಸಲಾದ ಶ್ರೀಗಂಧದ ಮರದ ಪೆಟ್ಟಿಗೆಯು ಸಂಕೀರ್ಣವಾಗಿ ಕೆತ್ತಲಾದ ಸಸ್ಯ ಮತ್ತು ಪ್ರಾಣಿಗಳ ಮಾದರಿಗಳನ್ನು ಹೊಂದಿದೆ. […]

ಸಹಕಾರ ಸಂಘಗಳ ಮುಖ್ಯಕಾರ್ಯನಿರ್ವಾಹಕರಿಗೆ ಚುನಾವಣಾ ಪೂರ್ವ ತಯಾರಿ ತರಬೇತಿ

ಉಡುಪಿ: ಸಹಕಾರಿ ಸಂಘಗಳ ಚುನಾವಣೆ ಪ್ರಕ್ರಿಯೆಯಲ್ಲಿ ಮುಖ್ಯ ಕಾರ್ಯನಿರ್ವಾಹಕರ ಪಾತ್ರ ಬಹಳಷ್ಟು ಮುಖ್ಯವಾಗಿರುತ್ತದೆ. ಚುನಾವಣೆಯನ್ನು ಯಾವುದೇ ರಾಜಕೀಯ ಪ್ರವೇಶ ಇಲ್ಲದೆ ಪಾರದರ್ಶಕತೆಯಿಂದ ಮಾಡುವ ಜವಾಬ್ದಾರಿ ಮುಖ್ಯಕಾರ್ಯನಿರ್ವಾಹಕರ ಮೇಲಿದೆ ಎಂದು ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಹೇಳಿದರು. ಕರ್ನಾಟಕ ರಾಜ್ಯ ಸಹಕಾರ ಮಾಹಾಮಂಡಳ ಬೆಂಗಳೂರು, ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಸಹಕಾರ ಇಲಾಖೆ ಉಡುಪಿ ಜಿಲ್ಲೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಉಡುಪಿ ಜಿಲ್ಲೆಯಲ್ಲಿ ಚುನಾವಣೆ ನಡೆಯಲಿರುವ ಸಹಕಾರ ಸಂಘಗಳ ಮುಖ್ಯಕಾರ್ಯನಿರ್ವಾಹಕರಿಗೆ ಚುನಾವಣಾ […]

ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ಮಲಯಾಳ ಚಿತ್ರ ನಟ ಸುರೇಶ್ ಗೋಪಿ

ಉಡುಪಿ: ಮಲಯಾಳ ಚಿತ್ರ ನಟ ಮತ್ತು ಮಾಜಿ ಸಂಸದ ಸುರೇಶ್ ಗೋಪಿ, ಶ್ರೀಕೃಷ್ಣ ಮಠಕ್ಕೆ ಆಗಮಿಸಿ ದೇವರ ದರ್ಶನ ಪಡೆದುಕೊಂಡರು.ಈ ಸಂದರ್ಭದಲ್ಲಿ ಪರ್ಯಾಯ ಮಠದ ದಿವಾನರಾದ ವರದರಾಜ ಭಟ್,ಅಧಿಕಾರಿಗಳಾದ ವ್ರಜನಾಥ್ ಆಚಾರ್ಯ ಉಪಸ್ಥಿತರಿದ್ದರು.