ನವೆಂಬರ್ ಎರಡನೇ ವಾರದಿಂದ ಚಿತ್ರೀಕರಣ ಆರಂಭಿಸಲಿರುವ ಪುಷ್ಪಾ: ದಿ ರೂಲ್ ತಂಡ: ಸಿನಿರಸಿಕರಲ್ಲಿ ಕುತೂಹಲ ಕೆರಳಸಿರುವ ಪುಷ್ಪಾ ಭಾಗ-2

ಹೈದರಾಬಾದ್: ದಕ್ಷಿಣ ಭಾರತದ ನಟ ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ: ದಿ ರೂಲ್’ ಚಿತ್ರದ ಚಿತ್ರೀಕರಣ ಭಾನುವಾರ ಆರಂಭವಾಗಿದೆ. ಚಿತ್ರದ ಛಾಯಾಗ್ರಾಹಕ ಕುಬಾ ಬ್ರೋಜೆಕ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಚಿತವ್ವೊಂದನ್ನು ಹಂಚಿಕೊಂಡಿದ್ದಾರೆ. ನಟನಿಗೆ ಧನ್ಯವಾದ ಹೇಳುತ್ತಾ “ಸಾಹಸ ಪ್ರಾರಂಭವಾಗಿದೆ” ಎಂಬ ಶೀರ್ಷಿಕೆಯೊಂದಿಗೆ ಛಾಯಾಗ್ರಾಹಕ ಚಿತ್ರವನ್ನು ಹಾಕಿದ್ದಾರೆ. ಚಿತ್ರದಲ್ಲಿ ಅಲ್ಲು ಅರ್ಜುನ್ ದಪ್ಪನಾದ ಗಡ್ಡ ಹೊಂದಿದ್ದು, ಸಾದಾ ಬಿಳಿ ಟೀ ಶರ್ಟ್ ಧರಿಸಿದ್ದಾರೆ. ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಿನಿರಸಿಕರು ಚಿತ್ರದ ಬಗ್ಗೆ ಉತ್ಸುಕರಾಗಿದ್ದಾರೆ. ನಿಜವಾದ ಕಥೆ ಇರುವುದೇ […]

ಪೋಕ್ಸೊ ವಿಶೇಷ ಕಾಯ್ದೆ ಮುಸ್ಲಿಂ ವೈಯಕ್ತಿಕ ಕಾನೂನನ್ನು ರದ್ದುಗೊಳಿಸುತ್ತದೆ: ಕರ್ನಾಟಕ ಹೈಕೋರ್ಟ್

ಬೆಂಗಳೂರು: ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯು ಲೈಂಗಿಕತೆಗೆ ಒಪ್ಪಿಗೆ ನೀಡುವ ವಯಸ್ಸಿಗೆ ಸಂಬಂಧಿಸಿದಂತೆ ಮುಸ್ಲಿಂ ವೈಯಕ್ತಿಕ ಕಾನೂನನ್ನು ಅತಿಕ್ರಮಿಸುತ್ತದೆ ಮತ್ತು ಆದ್ದರಿಂದ, ಮದುವೆಯ ನಂತರ ಅಪ್ರಾಪ್ತ ಮುಸ್ಲಿಂ ಹುಡುಗಿಯೊಂದಿಗಿನ ಲೈಂಗಿಕತೆಗೆ ಪೋಕ್ಸೊ ಕಾನೂನಿಂದ ವಿನಾಯಿತಿ ನೀಡಲಾಗುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ಹೇಳಿದೆ[ಅಲೀಂ ಪಾಷಾ ವಿರುದ್ಧ ಕರ್ನಾಟಕ ರಾಜ್ಯ]. ಹೈಕೋರ್ಟಿನ ಏಕಸದಸ್ಯ ನ್ಯಾಯಮೂರ್ತಿ ರಾಜೇಂದ್ರ ಬಾದಾಮಿಕರ್ ಅವರು ಮುಸ್ಲಿಂ ಕಾನೂನಿನ ಪ್ರಕಾರ ಅಪ್ರಾಪ್ತ ಬಾಲಕಿಗೆ 15 ವರ್ಷ ತುಂಬಿದ ನಂತರ ಮದುವೆಯಾಗಬಹುದು ಮತ್ತು ಅಂತಹ […]

ಯುವ ಜನತೆ ಕನ್ನಡ ಭಾಷೆ ಹಾಗೂ ಜಾನಪದ ಪ್ರಕಾರಗಳನ್ನು ಉಳಿಸಿ ಬೆಳೆಸಬೇಕು: ವಿದುಷಿ ಮಾನಸಿ ಸುಧೀರ್

ನಿಟ್ಟೆ: ಯುವಕ, ಯುವತಿಯರಲ್ಲಿ ಕನ್ನಡದ ಬಗೆಗಿನ ಒಲವು ಹಾಗೂ ಅಭಿಮಾನ ಹೆಚ್ಚುತ್ತಿರುವುದು ಸ್ವಾಗತಾರ್ಹ. ಜಾನಪದ ಪ್ರಕಾರಗಳನ್ನು ಇಂದಿನ ಜನತೆ ಅಭ್ಯಸಿಸಿ ಮುಂದಿನ ಪೀಳಿಗೆಗೆ ಕಲಾಪ್ರಕಾರವನ್ನು ದಾಟಿಸುವುದು ಅಗತ್ಯ ಎಂದು ಚಲನಚಿತ್ರ, ಕಾವ್ಯಾಭಿನಯ ಹಾಗೂ ನೃತ್ಯ ಕಲಾವಿದೆ ವಿದುಷಿ ಮಾನಸಿ ಸುಧೀರ್ ಅಭಿಪ್ರಾಯಪಟ್ಟರು. ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸೋಮವಾರ ಹಮ್ಮಿಕೊಳ್ಳಲಾದ ‘ದಿವ್ಯಾಂಕುರ’ ಕನ್ನಡ ರಾಜ್ಯೋತ್ಸವ ಸಮಾರಂಭ ಹಾಗೂ ಸಾಂಸ್ಕೃತಿಕ ದಿನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕನ್ನಡ ಸಾಹಿತ್ಯ, ಸಂಸ್ಕೃತಿ, ಕಲಾವಿದರು, ಪ್ರಾಂತ್ಯಾವಾರು ವಿವಿಧ ಬಗೆಯ ಕಲಾಪ್ರಕಾರಗಳು, ತಿಂಡಿ ತಿನಿಸುಗಳು […]

ರೋಟರಿ ಕ್ಲಬ್ ವತಿಯಿಂದ ಯು.ಎಸ್.ನಾಯಕ್ ಕನ್ನಡ ಮಾಧ್ಯಮ ಶಾಲೆಗೆ ಬಸ್ ಕೊಡುಗೆ

ಪಟ್ಲ: ಇಲ್ಲಿನ ರೂರಲ್ ಎಜುಕೇಶನ್ ಸೊಸೈಟಿಯೊಂದಿಗೆ ಯು.ಎಸ್.ನಾಯಕ್ ಪ್ರೌಢಶಾಲೆಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ, ರೋಟರಿ ವತಿಯಿಂದ ಬಸ್ಸು ಕೊಡುಗೆ ಮತ್ತು ದಿ. ಪಿ.ಆರ್. ನಾಯಕ್ ಸಂಸ್ಮರಣೆ ಕಾರ್ಯಕ್ರಮವು ಆದಿತ್ಯವಾರದಂದು ನಡೆಯಿತು. ರೋ. ಗಣೇಶ ನಾಯಕ್ ಬೆಲ್ಪತ್ರೆ ಇವರು ಸೊಸೈಟಿ ವತಿಯಿಂದ ಶಾಲಾ ಮಕ್ಕಳ ಪ್ರಯಾಣಕ್ಕೆ ನೀಡಲಾದ ಬಸ್ಸನ್ನು ಹಸ್ತಾಂತರಿಸಿದರು. ರೋ. ದಯಾನಂದ ಶೆಟ್ಟಿ ತಮ್ಮ ಸಂಸ್ಮರಣಾ ಭಾಷಣದಲ್ಲಿ ದಿ. ಪಿ.ರವೀಂದ್ರ ನಾಯಕ್ ರವರ ಮುಗ್ಧತೆ, ಅಜಾತಶತ್ರುತ್ವ, ದಾನಗುಣ, ಸತ್ಕಾರ್ಯಗಳಿಗೆ ಪ್ರೋತ್ಸಾಹ ನೀಡುವ ಸದ್ಗುಣಗಳನ್ನು ಪ್ರಶಂಸಿಸಿ ಸ್ಮರಿಸಿದರು. ಪತ್ರಕರ್ತ […]

ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

ಮಂಗಳೂರು: ಕನ್ನಡ ಎಂಬುದು ಕೇವಲ ಆಡು ಭಾಷೆ ಮಾತ್ರವಲ್ಲ, ಭಾರತದಂತಹ ದೇಶದಲ್ಲಿ ಕನ್ನಡವು ಸಂಸ್ಕೃತಿಯ ಪ್ರತಿರೂಪ. ಇಂಗ್ಲೀಷ್ ನಮಗೆ ಅವಕಾಶದ ಭಾಷೆ. ಆದರೆ ಕನ್ನಡ ಹಾಗಲ್ಲ. ಕನ್ನಡ ನಾಡು -ನುಡಿ-ಸಂಸ್ಕೃತಿಯು ವೈವಿಧ್ಯತೆಯಿಂದ ಕೂಡಿದ್ದು, ವೈವಿಧ್ಯತೆ ಈ ಸಂಸ್ಕೃತಿಯ ಉಸಿರು. ಇಂತಹ ನಾಡಿನಲ್ಲಿ ಜನಿಸಿದ ನಾವೇ ಧನ್ಯರು ಎಂದು ಎಕ್ಸ್ಪರ್ಟ್ ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲ ಪ್ರೊ.ರಾಮಚಂದ್ರಭಟ್‌ ಹೇಳಿದರು. ಅವರು ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾದ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕನ್ನಡ ಭಾಷೆ, ಸಂಸ್ಕೃತಿಯ ಬೇರು […]