ಬಂಟ್ವಾಳದಲ್ಲಿ ಕಂಡು ಬಂದ ಬರಹ ಪಿ ಎಫ್ ಐ ಸಕ್ರಿಯವಾಗಿರುವ ಸಂಕೇತ: ಮುತಾಲಿಕ್

ಬಂಟ್ವಾಳ: ತಾಲೂಕಿನಲ್ಲಿ ಕಂಡು ಬಂದ ಪಿಎಫ್ ಐ ರಸ್ತೆ ಬರಹ ಒಂದು ಎಚ್ಚರಿಕೆಯಾಗಿದ್ದು ಪಿಎಫ್‌ಐ ಇನ್ನೂ  ಸಕ್ರಿಯವಾಗಿದೆ ಎಂಬುದರ ಸಂಕೇತ ಎಂದು ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. ಉಡುಪಿಯಲ್ಲಿ ಬುಧವಾರ ಮಾತನಾಡಿದ ಪ್ರಮೋದ್ ಮುತಾಲಿಕ್, ಪಿಎಫ್‌ಐ ಬ್ಯಾನ್ ಅಥವಾ ಬಂಧನದಿಂದ ಅವರ ಆಟ ಮುಗಿಯುವುದಿಲ್ಲ, ಪುಂಡರನ್ನು ಹದ್ದುಬಸ್ತಿನಲ್ಲಿಡಲು ಹಿಂದೂ ಸಮಾಜ ಪೊಲೀಸ್ ಇಲಾಖೆ ಜೊತೆ ಸಹಕರಿಸಬೇಕು ಎಂದು ಹೇಳಿದ್ದಾರೆ. ಪಿಎಫ್‌ಐನ ಸಾವಿರಾರು ಕಾರ್ಯಕರ್ತರು ಇನ್ನೂ ಸಕ್ರಿಯವಾಗಿ ಇದ್ದಾರೆ ಎಂದು ಹೇಳಿರುವ ಮುತಾಲಿಕ್, ಕುತಂತ್ರ, ಷಡ್ಯಂತ್ರ, […]

ಬ್ರಹ್ಮಾವರ: ಬೋನಿಗೆ ಬಿದ್ದ ಚಿರತೆ, ನಿರಾಳರಾದ ಜನತೆ

ಬ್ರಹ್ಮಾವರ: ಎರಡು ದಿನಗಳ ಹಿಂದೆ ಕುಂದಾಪುರ ತಾಲೂಕಿನಲ್ಲಿ ಚಿರತೆಯೊಂದು ಬೋನಿಗೆ ಬಿದ್ದ ಬೆನ್ನಲ್ಲೆ ಇವತ್ತು ಬ್ರಹ್ಮಾವರ ತಾಲೂಕು ವ್ಯಾಪ್ತಿಯಲ್ಲಿ ಮತ್ತೊಂದು ಚಿರತೆಯೊಂದು ಬೋನಿನಲ್ಲಿ ಸೆರೆಯಾಗಿದೆ. ಬ್ರಹ್ಮಾವರ ತಾಲೂಕಿನ ಮಟಪಾಡಿ ಗ್ರಾಮದಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಹೆಣ್ಣು ಚಿರತೆ ಬಿದ್ದಿದೆ. ಕೆಲವು ದಿನಗಳಿಂದ ಚಿರತೆ ಕಾಟದಿಂದ ಬೇಸತ್ತ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮನವಿ ಮಾಡಿದ್ದರು. ಮನವಿ ಹಿನ್ನಲೆಯಲ್ಲಿ ಅರಣ್ಯ ಇಲಾಖೆ ಬೋನು ಇರಿಸಿತ್ತು. ಈ ಚಿರತೆಯು ಗ್ರಾಮದ ಸಾಕು ಪ್ರಾಣಿ, ದನಗಳನ್ನ ಭಕ್ಷಿಸುವ ಮೂಲಕ ಭಯದ ವಾತಾವರಣ […]

ಕಡಿಯಾಳಿ: ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಶಮೀ ವೃಕ್ಷ ಪೂಜೆ

ಶರನ್ನವರಾತ್ರಿ ಕಳೆದು ಮರುದಿನ ವಿಜಯದಶಮೀ ಪರ್ವದಿನದ ಮುಸ್ಸಂಜೆಯಲ್ಲಿ ಊರಿನ ಈಶಾನ್ಯ ಭಾಗದಲ್ಲಿರುವ ( ಅಥವಾ ನದೀ ತೀರ) ಶಮೀ ವೃಕ್ಷಕ್ಕೆ ಪೂಜೆ ಸಲ್ಲಿಸಿ ಅದರ ಎಲೆಯನ್ನು ಪ್ರಸಾದವಾಗಿ ಸ್ವೀಕರಿಸಿದರೆ ಅಕ್ಷಯ ಸಂಪತ್ತು ಮತ್ತು ವಿಜಯ, ಯಶಸ್ಸು ಪ್ರಾಪ್ತಿ ಎನ್ನುತ್ತವೆ ಶಾಸ್ತ್ರ ಪುರಾಣಗಳು. ಮಹಾಭಾರತದಲ್ಲಿ ಪಾಂಡವರ ವಿಜಯಕ್ಕೂ, ರಾಮಾಯಣದಲ್ಲಿ ಶ್ರೀರಾಮನ‌ ವಿಜಯಕ್ಕೂ ಇದೇ ಕಾರಣ ಎನ್ನುತ್ತಾರೆ. ಈ ಹಿಂದೆ ಊರಿನಲ್ಲಿ ನೆಲ್ಲಿ , ಅರಳಿ , ಅಶ್ವತ್ಥ , ಶಮೀ, ಔದುಂಬರ ಮೊದಲಾದ ವೃಕ್ಷಗಳನ್ನು ಬೆಳೆಸಿ ರಕ್ಷಿಸುವ ಪದ್ಧತಿ […]

ಮಲ್ಪೆ: ಕಡಲಿನ ಅಲೆಯ ಸೆಳೆತಕ್ಕೆ ಸಿಲುಕಿದ 6 ಮಂದಿಯ ರಕ್ಷಣೆ

ಮಲ್ಪೆ: ಇಲ್ಲಿನ ಸಮುದ್ರದಲ್ಲಿ ನೀರಾಟವಾಡಲು ನೀರಿಗೆ ಇಳಿದಿದ್ದ ಪ್ರವಾಸಿಗರು ಕಡಲಿನ ಅಲೆಯ ಸೆಳೆತಕ್ಕೆ ಸಿಲುಕಿದ್ದು, ಇದರಲ್ಲಿ ಓರ್ವ ಮೃತಪಟ್ಟಿದ್ದು, 6 ಮಂದಿಯನ್ನು ರಕ್ಷಿಸಲಾಗಿದೆ. ಬೆಂಗಳೂರಿನ ಅಬ್ರಾರ್ ಎನ್ನುವವರು ಮೃತಪಟ್ಟವರು. ಮೈಸೂರಿನ ತೊಸಿಬ್, ತಮಿಳುನಾಡಿನ ಸೆಂಥಿಲ್, ಬಿಜಾಪುರದ ಬಸವರಾಜು, ನಮಾಜ್, ಸೋಹಮ್ ಮತ್ತು ಬೆಂಗಳೂರಿನ ಸಲಾಂ ಚೆರ್ರಿ ಎನ್ನುವವರನ್ನು ರಕ್ಷಿಸಲಾಗಿದೆ. ಮಂಗಳವಾರ ಮಧ್ಯಾಹ್ನ ಮಲ್ಪೆ ಬೀಚ್ ನಲ್ಲಿ ಮೈಸೂರು ಮೂಲದ ತೊಸಿಬ್ ಎಂಬಾತ ಆತ್ಮಹತ್ಯೆಗೆ ಯತ್ನಿಸಿದ್ದು, ಈತನನ್ನು ಮಲ್ಪೆ ಅಭಿವೃದ್ದಿ ಸಮಿತಿಯ ಜೀವರಕ್ಷಕ ದಳದ ಸಿಬ್ಬಂದಿಗಳು ರಕ್ಷಿಸಿದ್ದಾರೆ. ಆದರೆ […]

ದುರ್ಗಾ ದೌಡ್-ಪ್ರಚೋದನಕಾರಿ ಭಾಷಣದ ವಿರುದ್ದ ಕ್ರಮ ಕೈಗೊಳ್ಳಿ: ಸಿಪಿಐ(ಎಂ) ಆಗ್ರಹ

ಉಡುಪಿ: ಅಕ್ಟೋಬರ್ 2ರಂದು ಉಡುಪಿಯಲ್ಲಿ ನಡೆದ ದುರ್ಗಾ ದೌಡ್ ಕಾರ್ಯಕ್ರಮದ ಸಂದರ್ಭದಲ್ಲಿ ಖಡ್ಗವನ್ನು ಝಳಪಿಸುತ್ತಾ ಮೆರವಣಿಗೆ ಮಾಡಿದ್ದು ಮಾತ್ರವಲ್ಲದೆ, ಸಭೆಯಲ್ಲಿ ಉದ್ರೇಕಕಾರಿ ಭಾಷಣ ಮಾಡಿದ್ದು ಪತ್ರಿಕೆಗಳಲ್ಲಿ ವರದಿಯಾಗಿದೆ. ಇದರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಿಪಿಐ(ಎಂ) ಉಡುಪಿ ಜಿಲ್ಲಾ ಸಮಿತಿ ಆಗ್ರಹಿಸುತ್ತದೆ. ಈ ಕಾರ್ಯಕ್ರಮದಲ್ಲಿ ರಾಜ್ಯದ ಸಚಿವರಾದ ಸುನೀಲ್ ಕುಮಾರ್ ಮತ್ತು ಕೆಲವು ಶಾಸಕರೂ ಭಾಗವಹಿಸಿದ್ದು ಅವರ ಎದುರಿನಲ್ಲೇ ಇಂತಹ ಕಾರ್ಯಕ್ರಮಗಳು ನಡೆಯುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಜನರು ಇಂತಹ ಪ್ರಜಾಪ್ರಭುತ್ವ ವಿರೋಧಿ ನಡವಳಿಕೆಗಳನ್ನು ತಿರಸ್ಕರಿಸಬೇಕೆಂದು ಸಿಪಿಐ(ಎಂ) ಮನವಿ […]