ಇದು ಮಾತ್ರೆ ಕಾಗದ ಅಲ್ಲ ಮದುವೆ ಆಮಂತ್ರಣ: ತಮಿಳುನಾಡಿನ ಔಷಧಿಕಾರ ಜೋಡಿಯ ವಿನೂತನ ಮದುವೆ ಪತ್ರಿಕೆ

ಚೆನ್ನೈ: ತಮಿಳುನಾಡಿನ ಔಷಧಿಕಾರ ಜೋಡಿಯೊಂದು ವಿಶಿಷ್ಟವಾದ ಮದುವೆಯ ಆಮಂತ್ರಣ ಪತ್ರವನ್ನು ಮುದ್ರಣ ಮಾಡಿದ್ದಾರೆ. ತಮ್ಮ ಸೃಜನಾತ್ಮಕ ಚಿಂತನೆಯನ್ನು ಓರೆಗೆ ಹಚ್ಚಿರುವ ತಿರುವಣ್ಣಾಮಲೈ ದಂಪತಿಗಳು ಥೇಟ್ ಮಾತ್ರೆ ಕಾಗದದ ಹಿಂಭಾಗದಂತೆಯೇ ಕಾಣುವ ತಮ್ಮ ಮದುವೆ ಆಹ್ವಾನ ಪತ್ರವನ್ನು ವಿನ್ಯಾಸಗೊಳಿಸಿ ಎಲ್ಲರನ್ನೂ ಚಕಿತಗೊಳಿಸಿದ್ದಾರೆ. ಟ್ವಿಟರ್ ಬಳಕೆದಾರರಾದ ಹರ್ಷ್ ಗೋಯೆಂಕಾ ಅವರು ಹಂಚಿಕೊಂಡಿರುವ ಆಹ್ವಾನ ಪತ್ರಿಕೆಯು ‘ಎಜಿಲರಸನ್ ಮತ್ತು ವಸಂತಕುಮಾರಿ ವಿವಾಹ’ ಎಂಬ ದಪ್ಪ ಅಕ್ಷರಗಳನ್ನು ತೋರಿಸುತ್ತದೆ. ಫಕ್ಕನೆ ನೋಡಿದರೆ ಇದೊಂದು ಮಾತ್ರೆ ಕಾಗದವೋ ಎನ್ನುವ ಭಾವನೆ ಬರುತ್ತದೆ. ‘ಎಲ್ಲಾ ಸ್ನೇಹಿತರು […]

ಕಾಂಗ್ರೆಸ್ ಪಕ್ಷಕ್ಕೆ ಮತ್ತೊಂದು ಆಘಾತ: ಪಕ್ಷ ತೊರೆದ ಹಿರಿಯ ನಾಯಕ ಗುಲಾಂ ನಬಿ ಆಜಾದ್

ನವದೆಹಲಿ: ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಶುಕ್ರವಾರ ಕಾಂಗ್ರೆಸ್ ಪಕ್ಷವನ್ನು ತೊರೆದು ತಮ್ಮ ಎಲ್ಲಾ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ. ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಉದ್ದೇಶಿಸಿ ಬರೆದ ಐದು ಪುಟಗಳ ಪತ್ರದಲ್ಲಿ ಆಜಾದ್, ಕಾಂಗ್ರೆಸ್‌ ಪರಿಸ್ಥಿತಿ “ಹಿಂತಿರುಗಲಾಗುವುದಿಲ್ಲ” ಎಂಬ ಹಂತವನ್ನು ತಲುಪಿದೆ ಎಂದು ಹೇಳಿದ್ದಾರೆ. ಇಡೀ ಸಂಸ್ಥೆಯ ಆಯ್ಕೆ ಪ್ರಕ್ರಿಯೆಯು ಒಂದು ಪ್ರಹಸನ ಮತ್ತು ನೆಪವಾಗಿದೆ. ದೇಶದ ಯಾವುದೇ ಸ್ಥಳದಲ್ಲಿ ಯಾವುದೇ ಸಂಘಟನೆಯ ಮಟ್ಟದಲ್ಲಿ ಚುನಾವಣೆ ನಡೆದಿಲ್ಲ. 24 ಅಕ್ಬರ್ ರಸ್ತೆಯಲ್ಲಿ ಕುಳಿತು […]

ಉಡುಪಿ ಜಿಲ್ಲೆಯ ಅಭಿವೃದ್ದಿಗೆ ಸಹಾಯ ಮಾಡಲು ಸದಾ ಸಿದ್ದ: ರಾಜ್ಯಪಾಲ ಥಾವರ್ ಚಂದ್ ಗೆಹಲೋಟ್

ಉಡುಪಿ: ಉಡುಪಿ ಜಿಲ್ಲೆಯ ಸಮಗ್ರ ಅಭಿವೃದ್ದಿಗೆ ತಾನು ಕಟಿಬದ್ದನಾಗಿದ್ದು, ರಾಜ್ಯ ಅಥವಾ ಕೇಂದ್ರ ಮಟ್ಟದಲ್ಲಿ ಜಿಲ್ಲೆಯ ಅಭಿವೃದ್ದಿಗೆ ಬೇಕಾಗಿರುವ ಎಲ್ಲಾ ರೀತಿಯ ಸಹಾಯ ಮಾಡಲು ಸದಾ ಸಿದ್ದನಾಗಿದ್ದೇನೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹಲೋಟ್ ಹೇಳಿದರು. ಅವರು ಗುರುವಾರದಂದು ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಉಡುಪಿ ರಜತೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಉಡುಪಿಗೆ ಎರಡನೆ ಬಾರಿ ಬಂದಿರುತ್ತೇನೆ. ದೇವತೆಗಳ ಭೂಮಿಯಾದ ಉಡುಪಿಗೆ ಭೇಟಿ ನೀಡಿದ ಮೇಲೆ ಮನಸ್ಸು ಪ್ರಸನ್ನವಾಗುತ್ತದೆ. 13 ನೇ ಶತಮಾನಕ್ಕೂ ಹಿಂದಿನ ದೇವಸ್ಥಾನಗಳು ಇಲ್ಲಿವೆ. […]

ಅಕ್ಟೋಬರ್ ವೇಳೆಗೆ ದೇಶವು 5ಜಿ ಸೇವೆಗಳನ್ನು ಪ್ರಾರಂಭಿಸಲು ಸಿದ್ಧ: ಸಂವಹನ ಸಚಿವ ಅಶ್ವಿನಿ ವೈಷ್ಣವ್

ನವದೆಹಲಿ: ಈ ವರ್ಷದ ಅಕ್ಟೋಬರ್ ವೇಳೆಗೆ ದೇಶವು 5ಜಿ ಸೇವೆಗಳನ್ನು ಪ್ರಾರಂಭಿಸಲು ಸಿದ್ಧವಾಗಿದೆ ಎಂದು ಸಂಪರ್ಕ ಮತ್ತು ಸಂವಹನ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಭಾರತದಲ್ಲಿ ವೇಗವಾಗಿ 5ಜಿ ಬಿಡುಗಡೆಗಾಗಿ ದೂರಸಂಪರ್ಕ ಮೂಲಸೌಕರ್ಯವನ್ನು ವೇಗವಾಗಿ ಮತ್ತು ಸುಲಭವಾಗಿ ನಿಯೋಜಿಸಲು ಅನುಕೂಲವಾಗುವಂತೆ ಇಂಡಿಯನ್ ಟೆಲಿಗ್ರಾಫ್ ರೈಟ್ ಆಫ್ ವೇ ನಿಯಮಗಳು, 2016 ಕ್ಕೆ ತಿದ್ದುಪಡಿಯನ್ನು ಬಿಡುಗಡೆ ಮಾಡುವ ಸಂದರ್ಭದಲ್ಲಿ ಅವರು ಈ ಬಗ್ಗೆ ಹೇಳಿದರು. ದೇಶಾದ್ಯಂತ 5ಜಿ ಸೇವೆಗಳ ವೇಗವನ್ನು ಖಚಿತಪಡಿಸಿಕೊಳ್ಳಲು ಸುಮಾರು 4 ಮೂಲಭೂತ ಅಂಶಗಳಾದ ಮುಖ್ಯವಾಗಿ […]

25 ನೇ ರಜತ ಮಹೋತ್ಸವದ ಪ್ರಯುಕ್ತ ಜಿಲ್ಲಾ ಕ್ರೀಡಾಂಗಣದವರೆಗೆ ಮೆರವಣಿಗೆ

ಉಡುಪಿ: ಜಿಲ್ಲೆಯ 25 ನೇ ರಜತ ಮಹೋತ್ಸವದ ಪ್ರಯುಕ್ತ ಗುರುವಾರದಂದು ಬೋರ್ಡ್ ಹೈಸ್ಕೂಲ್‌ನಿಂದ ಅಜ್ಜರಕಾಡು ಮಹಾತ್ಮಾಗಾಂಧಿ ಜಿಲ್ಲಾ ಕ್ರೀಡಾಂಗಣದವರೆಗೆ ನಡೆದ ಮೆರವಣಿಗೆಗೆ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ, ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್, ಶಾಸಕರಾದ ಕೆ.ರಘುಪತಿ ಭಟ್, ಲಾಲಾಜಿ.ಆರ್.ಮೆಂಡನ್, […]