ಸುಜ್ಞಾನ ಎಜುಕೇಷನ್ ಅಕಾಡೆಮಿ: ದ್ವಿತೀಯ ಪಿಯುಸಿ ನೇರ ಪ್ರವೇಶಾತಿ ಪ್ರಾರಂಭ

ಉಡುಪಿ: ಪ್ರಸ್ತುತ ಸಾಲಿನಲ್ಲಿ ಪ್ರಥಮ ಪಿಯುಸಿಯಲ್ಲಿ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳು, ನೇರವಾಗಿ ದ್ವಿತೀಯ ಪಿಯುಸಿ ವಿಜ್ಞಾನ, ಕಾಮರ್ಸ್ ಅಥವಾ ಕಲಾ ವಿಭಾಗದಲ್ಲಿ ಅಧ್ಯಯನ ಮಾಡಿ ಪರೀಕ್ಷೆ ಬರೆಯಬಹುದು. ನೇರವಾಗಿ ದ್ವಿತೀಯ ಪಿಯುಸಿ ಬರೆಯುವ ವಿದ್ಯಾರ್ಥಿಗಳಿಗೆ ಸುಜ್ಞಾನ ಎಜುಕೇಷನ್ ಅಕಾಡೆಮಿಯಲ್ಲಿ ಪ್ರವೇಶಾತಿ ಆರಂಭವಾಗಿದೆ. ನಿಯಮಿತ ತರಗತಿಗಳು, ಫಲಿತಾಂಶಾಧಾರಿತ ಬೋಧನಾ ವ್ಯವಸ್ಥೆ, ಉತ್ತಮ ಪರಿಸರ ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗಿದೆ. 8 ರಿಂದ 10 ನೇ ತರಗತಿ, ಪ್ರಥಮ/ದ್ವಿತೀಯ ಪಿಯುಸಿ ತರಗತಿ ವಿದ್ಯಾರ್ಥಿಗಳಿಗೆ ಟೂಷನ್ ತರಬೇತಿಗಳು ನಿಯಮಿತವಾಗಿ ನಡೆಯುತ್ತಿದೆ. ಆಸಕ್ತ ವಿದ್ಯಾರ್ಥಿಗಳು ಪ್ರವೇಶಾತಿ […]

ವೈದ್ಯರ ದಿನಾಚರಣೆ: ಆದರ್ಶ ಆಸ್ಪತ್ರೆ ಮತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಹಾಗೂ ವೈದ್ಯರಿಗೆ ಸನ್ಮಾನ ಸಮಾರಂಭ

ಉಡುಪಿ: ಉಡುಪಿಯ ಆದರ್ಶ ಆಸ್ಪತ್ರೆ ಮತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ವೈದ್ಯರ ದಿನಾಚರಣೆಯ ಪ್ರಯುಕ್ತ ಬೃಹತ್ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಮತ್ತು ವೈದರಿಗೆ ಸನ್ಮಾನ ಕಾರ್ಯಕ್ರಮವು ಆದಿತ್ಯವಾರ ಜೂನ್ 3 ರಂದು ಬೆಳಿಗ್ಗೆ 9.30 ಗಂಟೆಗೆ ಆಸ್ಪತ್ರೆಯ ಹೊರರೋಗಿ ವಿಭಾಗದಲ್ಲಿ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ ನೆರವೇರಿಸಲಿದ್ದಾರೆ. ಆದರ್ಶ ಆಸ್ಪತ್ರೆಯ ನರರೋಗ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಪ್ರೋ. ಎ ರಾಜ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾ ಪೋಲೀಸ್ ಅಧೀಕ್ಷಕ […]

ಸಂಚಲನ-ಉನ್ನತಿ ಕೆರಿಯರ್ ಅಕಾಡೆಮಿ-ಅಲ್ ಕಾರ್ಗೋ ಲಾಜಿಸ್ಟಿಕ್ಸ್ ನಡುವೆ ಉಚಿತ ತರಬೇತಿಯೊಂದಿಗೆ ಉದ್ಯೋಗಾವಕಾಶ ಸೃಷ್ಟಿಸಲು ಒಪ್ಪಂದ

ಉಡುಪಿ: ಕಳೆದ 7 ವರ್ಷಗಳಿಂದ ಅನೇಕ ಸಾಮಾಜಿಕ ಕಾರ್ಯಗಳನ್ನು ಹಾಗೂ ಪ್ರಕಲ್ಪಗಳನ್ನು ನಡೆಸುತ್ತಿರುವ ಸ್ವಯಂ ಸೇವಾ ಸಂಘಟನೆ ಸಂಚಲನ ಸಂಸ್ಥೆಯು ಇದೀಗ ದೇಶದ ಅಗ್ರಮಾನ್ಯ ಲಾಜಿಸ್ಟಿಕ್ಸ್ ಸಂಸ್ಥೆಯಾದ ಅಲ್ ಕಾರ್ಗೋ ಲಾಜಿಸ್ಟಿಕ್ಸ್ ಪ್ರೈ ಲಿ ಸಂಸ್ಥೆಯ ಸಾಮಾಜಿಕ ಜವಾಬ್ದಾರಿ ಯೋಜನೆಯಡಿ ಉಡುಪಿ-ದ.ಕ ಜಿಲ್ಲೆಗಳ ಯುವಕ ಯುವತಿಯರಿಗೆ ಉದ್ಯೋಗಾವಕಾಶ ಸೃಷ್ಟಿಸಲು ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದದಂತೆ ಸಂಚಲನ ಸಂಸ್ಥೆಯು ತನ್ನ ತರಬೇತು ಪಾಲುದಾರ ಸಂಸ್ಥೆ ಹಾಗೂ ಕೌಶಲ್ಯ ಶಿಕ್ಷಣಕ್ಕೆ ಪ್ರಸಿದ್ದಿ ಪಡೆದಿರುವ ಉಡುಪಿಯ ಉನ್ನತಿ ಕೆರಿಯರ್ ಅಕಾಡೆಮಿ ಮೂಲಕ […]

ಗಿರಿಜಾ ಹೆಲ್ತ್ ಕೇರ್ ಮತ್ತು ಸರ್ಜಿಕಲ್ಸ್ ವತಿಯಿಂದ ವೈದರಿಗೆ ಸನ್ಮಾನ ಕಾರ್ಯಕ್ರಮ

ಗಿರಿಜಾ ಹೆಲ್ತ್ ಕೇರ್ ಮತ್ತು ಸರ್ಜಿಕಲ್ಸ್ ನ ಉಡುಪಿ, ಕುಂದಾಪುರ ಮತ್ತು ಮಂಗಳೂರು ಶಾಖೆಯ ವತಿಯಿಂದ, ಉಡುಪಿ ಟೆಂಪಲ್ ಸಿಟಿ ಲೀಜನ್ ನ ಸಹಯೋಗದೊಂದಿಗೆ ವೈದ್ಯರ ದಿನಾಚರಣೆಯನ್ನು ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಡಾ.ತಲ್ಲೂರು ಶಿವರಾಮ್ ಶೆಟ್ಟಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಡಾ. ರವೀಂದ್ರನಾಥ್, ಡಾ.ಭಾಸ್ಕರ್ ಪಾಲಾರ್, ಡಾ. ಅಶೋಕ್ ಕುಮಾರ್, ಡಾ. ರಂಜಿತಾ ನಾಯಕ್, ಡಾ. ಮರಿಯೆಟ್ಟಾ ಡಿ’ಸೋಜಾ, ಡಾ. ದೀಪಾ ನಾಯಕ್, ಡಾ .ಶ್ರೀಪತಿ ಎಂ ಭಟ್ ಮುಂತಾದವರನ್ನು ಸನ್ಮಾನಿಸಿ ಗೌರವಿಸಲಾಯಿತು. ಉಡುಪಿ ಟೆಂಪಲ್ ಸಿಟಿ […]

ಇರಾನ್ ನಲ್ಲಿ 6.0 ತೀವ್ರತೆಯ ಭೂಕಂಪ: ಕನಿಷ್ಟ ಮೂರು ಜನ ಸಾವು; ಎಂಟು ಮಂದಿ ಗಾಯಾಳು

ಇರಾನ್‌ನ ಹಾರ್ಮೋಜ್‌ಗನ್ ಪ್ರಾಂತ್ಯದ ಬಂದರ್ ಇ ಖಮೀರ್‌ನಿಂದ 33 ಕಿಮೀ ನಲ್ಲಿ ಬೆಳಗ್ಗೆ 3:02 ಘಂಟೆಗೆ 6.0 ತೀವ್ರತೆಯ ಭೂಕಂಪ ದಾಖಲಾಗಿದೆ. ಕಂಪನದ ಅನುಭವ ಬಹ್ರೇನ್, ಸೌದಿ ಅರೇಬಿಯಾ, ಇರಾನ್, ಓಮನ್, ಪಾಕಿಸ್ತಾನ, ಕತಾರ್, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಅಫ್ಘಾನಿಸ್ತಾನದವರೆಗೂ ಅನುಭವವಾಗಿದೆ. ರಾತ್ರಿ ಸಂಭವಿಸಿದ 6.1 ಮತ್ತು 6.3 ತೀವ್ರತೆಯ ಸತತ ಎರಡು ಭೂಕಂಪಗಳ ನಂತರ ಗ್ರಾಮಗಳು ಸಂಪೂರ್ಣವಾಗಿ ನಾಶವಾಗಿವೆ. 🔴 Villages completely destroyed after the two consecutive earthquakes in Iran […]