76 ಬಡಗಬೆಟ್ಟು ಮೂಡುಮನೆ ಕುಟುಂಬದ 300 ವರ್ಷಗಳಿಗೂ ಪುರಾತನ ವಸ್ತುಗಳ ಹಸ್ತಾಂತರ

ಉಡುಪಿ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಮುಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜು,ರಾಷ್ಟ್ರೀಯ ಸೇವಾ ಯೋಜನಾ ಘಟಕ ಇವರ ಸಹಯೋಗದಲ್ಲಿ, ಶನಿವಾರದಂದು ಅಂತಾರಾಷ್ಟ್ರೀಯ ವಸ್ತು ಸಂಗ್ರಹಾಲಯಗಳ ದಿನ ಮತ್ತು ವಿಶ್ವ ಪರಿಸರ ದಿನಾಚರಣೆಯನ್ನು ಶಿರ್ವದ ಮುಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜಿನಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಪ್ರಾಚೀನ ವಸ್ತುಗಳನ್ನು ಹಸ್ತಾಂತರ ಮಾಡುವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ 76 ಬಡಗಬೆಟ್ಟು ಮೂಡುಮನೆ ಕುಟುಂಬದ ಸುಮಾರು 300 ವರ್ಷಗಳಿಗೂ ಪುರಾತನವಾದ ಹಲವು ಪ್ರಾಚೀನ ವಸ್ತುಗಳನ್ನು ಕಾಲೇಜಿನ ವಸ್ತು ಸಂಗ್ರಹಾಲಯಕ್ಕೆ […]
ಕಾರ್ಕಳ: ಸಮಾಜ ಸೇವಕ, ಧಾರ್ಮಿಕ ಮುಖಂಡ ಜಯರಾಮ್ ನಾಯಕ್ ನಿಧನ

ಕಾರ್ಕಳ: ಬೈಲಗಂಡಿಯ ಸಮಾಜ ಸೇವಕ ಮತ್ತು ಧಾರ್ಮಿಕ ಮುಖಂಡ ಜಯರಾಮ್ ನಾಯಕ್ (63 ವರ್ಷ) ಇಂದು ಮುಂಜಾನೆ ಕಾರ್ಕಳದ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಇವರು ಪತ್ನಿ, ಮಗಳು ಹಾಗೂ ಅಪಾರ ಬಂಧು ವರ್ಗವನ್ನು ಅಗಲಿದ್ದಾರೆ. ಕಾರ್ಪೊರೇಷನ್ ಬ್ಯಾಂಕಿನಲ್ಲಿ ಸೀನಿಯರ್ ಮ್ಯಾನೇಜರ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಇವರು, ದೊಂಡೇರಂಗಡಿ ಶ್ರೀ ರಾಮ ಮಂದಿರದ ಅಧ್ಯಕ್ಷರಾಗಿದ್ದರು. 3 ವರ್ಷಗಳ ಹಿಂದೆ ನಡೆದ ಮಂದಿರದ ಜೀರ್ಣೋದ್ಧಾರ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಮುನಿಯಾಲು ಶ್ರೀ ವೆಂಕಟರಮಣ ದೇವಸ್ಥಾನ ಹಾಗೂ ಕಾರ್ಕಳ ಶ್ರೀ […]
ಎಸ್.ಎಸ್.ಎಲ್.ಸಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಕೈಗಾರಿಕಾ ತರಬೇತಿ

ಮಂಗಳೂರು: ಮಂಗಳೂರು ಸರಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದ ವತಿಯಿಂದ ಎಸ್.ಎಸ್.ಎಲ್.ಸಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಉತ್ತೀರ್ಣರಾಗುವಂತೆ ತರಬೇತಿ ನೀಡಿ, ಅವರನ್ನು ಕೈಗಾರಿಕಾ ತರಬೇತಿಗೆ ಅನುವುಗೊಳಿಸಿ, ಉದ್ಯೋಗ ಆವಕಾಶ ದೊರಕಿಸಿಕೊಡಲಾಗುವುದು ಹಾಗೂ ಎಸ್.ಸಿ. ಮತ್ತು ಎಸ್.ಟಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಕೌಶಲ್ಯಾಭಿವೃದ್ಧಿ ತರಬೇತಿ ನೀಡಲಾಗುವುದು. ತರಬೇತಿ ಪಡೆಯಲು ಇಚ್ಛಿಸುವ ಆಸಕ್ತ ಅಭ್ಯರ್ಥಿಗಳು ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರ, ಬೈಕಂಪಾಡಿ, ಮಂಗಳೂರು ದೂ.ಸಂಖ್ಯೆ: 0824-248003, ಮೊ.ನಂ: 9880591219, 7975621917 ಅನ್ನು ಸಂಪರ್ಕಿಸಬಹುದಾಗಿದೆ.
ಇಬ್ಬರು ಕೊಲೆ ಆರೋಪಿಗಳಿಂದ ಮಂಗಳೂರು ಪೊಲೀಸರ ಮೇಲೆ ಹಲ್ಲೆ: ಪೊಲೀಸರಿಂದ ಪ್ರತ್ಯುತ್ತರ

ಪಕ್ಷಿಕೆರೆ: ಜೂನ್ 11, ಶನಿವಾರದಂದು, ನಗರದ ಹೊರವಲಯದ ಮೂಡುಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯ ಪಕ್ಷಿಕೆರೆಯಲ್ಲಿ ಇಬ್ಬರು ಕೊಲೆ ಆರೋಪಿಗಳು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದು. ಇದಕ್ಕೆ ಪ್ರತ್ಯುತ್ತರ ನೀಡಿದ ಪೊಲೀಸರು ಆರೋಪಿಗಳ ಮೇಲೆ ಗುಂಡು ಹಾರಿಸಿದ್ದಾರೆ. ಘಟನೆಯಲ್ಲಿ ಇಬ್ಬರು ಆರೋಪಿಗಳು ಮತ್ತು ಮೂವರು ಪೊಲೀಸರು ಗಾಯಗೊಂಡಿದ್ದಾರೆ. ಪೊಲೀಸರು ಮೂರು ಸುತ್ತಿನ ಗುಂಡು ಹಾರಿಸಿದ್ದು, 1 ನೇ ಸುತ್ತು ಗಾಳಿಯಲ್ಲಿ ಮತ್ತು 2 ಸುತ್ತುಗಳನ್ನು ಆರೋಪಿಗಳ ಕಾಲನ್ನು ಗುರಿಯಾಗಿಸಿಟ್ಟುಕೊಂಡು ಹಾರಿಸಲಾಗಿದೆ. 3 ಪೊಲೀಸ್ ಸಿಬ್ಬಂದಿಗೂ ಗಾಯಗಳಾಗಿವೆ ಎಂದು ಮಂಗಳೂರು […]
777 ಚಾರ್ಲಿಯಿಂದ ಸ್ಪೂರ್ತಿ ಪಡೆದು ಸ್ನಿಫರ್ ನಾಯಿಗೆ ಚಾರ್ಲಿ ಎಂದು ನಾಮಕರಣ ಮಾಡಿದ ಮಂಗಳೂರು ನಗರ ಪೊಲೀಸರು

ಬೆಂಗಳೂರು: ರಕ್ಷಿತ್ ಶೆಟ್ಟಿ ಅವರ ಹೊಸ ಚಿತ್ರ ‘777 ಚಾರ್ಲಿ’ ಯಿಂದ ಸ್ಫೂರ್ತಿ ಪಡೆದ ಮಂಗಳೂರು ನಗರ ಪೊಲೀಸ್ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿಗಳು ತಮ್ಮ ಇಲಾಖೆಯ ಹೊಸ ಸ್ನಿಫರ್ ಆಫೀಸರ್ ನಾಯಿಗೆ ಚಾರ್ಲಿ ಎನ್ನುವ ಹೆಸರನ್ನಿಟ್ಟಿದ್ದಾರೆ. ಇದು ಮೂರು ತಿಂಗಳ ಹೆಣ್ಣು ಲ್ಯಾಬ್ರಡಾರ್ ರಿಟ್ರೈವರ್ ಆಗಿದ್ದು ನೋಡುವುದಕ್ಕೆ ಚಾರ್ಲಿಯಂತೆಯೆ ಇದೆ. #Karnataka Inspired by @rakshitshetty #777charlie , @shashikumarnips names the new sniffer officer by the same name. Its a […]