ಕಾರ್ಕಳ ಉತ್ಸವ: ಮಾ.22ರ ವರೆಗೆ ಮುಂದುವರಿಕೆ

ಕಾರ್ಕಳ: ಕಾರ್ಕಳ ಉತ್ಸವದ ಆಹಾರ ಮೇಳ, ವಸ್ತು ಪ್ರದರ್ಶನ ಹಾಗೂ ದೀಪಾಲಂಕಾರವನ್ನು ಮಾ. 22 ಮಂಗಳವಾರದವರೆಗೆ ಮುಂದುವರಿಸಲಾಗಿದೆ ಎಂದು ಸಚಿವ ವಿ.ಸುನಿಲ್ ಕುಮಾರ್ ತಿಳಿಸಿದ್ದಾರೆ. ಕಾರ್ಕಳ ಉತ್ಸವವು ಮಾ.10ರಿಂದ 20ರ ವರೆಗೆ ನಡೆಯಲು ನಿರ್ಧಾರ ಹೊಂದಿದ್ದು, ಆದರೆ ಬಹು ಜನರ ಬೇಡಿಕೆ ಮೇರೆಗೆ ಪುನಃ 2 ದಿನ ಹೆಚ್ಚುವರಿ ನಡೆಯಲಿದೆ.

ಉಡುಪಿ: ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ಗ್ರಾಹಕರ ಸಮಾವೇಶ ಉದ್ಘಾಟನೆ

ಉಡುಪಿ: ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುವುದರ ಜತೆಗೆ ಸಂಸ್ಥೆಯ ಉನ್ನತಿಗೆ ಸಿಬ್ಬಂದಿ ಮುತುವರ್ಜಿಯಿಂದ ಶ್ರಮವಹಿಸಿದರೆ ಸಂಸ್ಥೆ ಅಭಿವೃದ್ಧಿ ಪಥದತ್ತ ಸಾಗಲು ಸಾಧ್ಯವಿದೆ ಎಂದು ಅಂಬಲಪಾಡಿ ಡಾ. ಜಿ.‌ ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ನಾಡೋಜ ಡಾ. ಜಿ ಶಂಕರ್‌ ಹೇಳಿದರು. ಅವರು ಶನಿವಾರ ನಗರದ ಶೇಷಶಯನ ಸಭಾಂಗಣದಲ್ಲಿ ನಡೆದ ಉಡುಪಿ ಮಹಾಲಕ್ಷ್ಮೀ ಕೋ ಆಪರೇಟಿವ ಬ್ಯಾಂಕ್ ನ ಗ್ರಾಹಕರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ಯಶ್ ಪಾಲ್ ಸುವರ್ಣ ಅವರ ನೇತೃತ್ವದಲ್ಲಿ ಅವರ ಹಾಗೂ ನಿರ್ದೇಶಕರುಗಳ ಶ್ರಮದ ಫಲವಾಗಿ […]