ಕುಂದಾಪುರ: ಪ್ರೀತಿ ತಿರಸ್ಕರಿಸಿದ ಯುವತಿ; ನೇಣಿಗೆ ಶರಣಾದ ಪ್ರಿಯಕರ.!

ಕುಂದಾಪುರ: ಯುವತಿ ಪ್ರೀತಿ ತಿರಸ್ಕರಿಸಿದ ಹಿನ್ನೆಲೆಯಲ್ಲಿ ಮಾನಸಿಕವಾಗಿ ಮನನೊಂದ ಯುವಕನೋರ್ವ ನೇಣಿಗೆ ಶರಣಾದ ಘಟನೆ ಕುಂದಾಪುರ ತಾಲೂಕಿನ ವಂಡ್ಸೆ ಗ್ರಾಮದಲ್ಲಿ ಗುರುವಾರ ನಡೆದಿದೆ. ವಂಡ್ಸೆ ಗ್ರಾಮದ ರಿಜ್ವಾನ್ ಆತ್ಮಹತ್ಯೆ ಮಾಡಿಕೊಂಡ ಯುವಕ. ಈತ ಸುಮಾರು 3 ವರ್ಷಗಳಿಂದ ಗಂಗೊಳ್ಳಿಯ ಉಷಾ ಎಂಬ ಯುವತಿಯನ್ನು ಪ್ರೀತಿಸುತ್ತಿದ್ದನು ಎನ್ನಲಾಗಿದೆ. ಆದರೆ, ಇತ್ತೀಚಿಗೆ ಯುವತಿ ಪ್ರೀತಿ ತಿರಸ್ಕರಿಸಿದ್ದು, ಇದರಿಂದ ರಿಜ್ವಾನ್ ಮಾನಸಿಕವಾಗಿ ಕುಗ್ಗಿ ಹೋಗಿದ್ದನು. ಎಂದು ತಿಳಿದುಬಂದಿದೆ. ಇದೇ ವಿಚಾರದಲ್ಲಿ ಮನನೊಂದು ಮನೆಯಲ್ಲಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದನು. ಆ ಬಳಿಕ ಮನೆಯವರು, ಆತ […]