ಒಂದೊಳ್ಳೆ ಟ್ರೈನಿಂಗ್ ಪಡೆದು ಟೀಚರ್ ಆಗಲು ಇಲ್ಲಿದೆ ಬೆಸ್ಟ್ ಚಾನ್ಸ್: ಮಾಂಟೆಸ್ಸರಿ / ನರ್ಸರಿ ಟೀಚರ್ಸ್ ಕೋರ್ಸ್ ಗೆ ಪ್ರವೇಶಾರಂಭ:

ಉಡುಪಿ/ಮಣಿಪಾಲ: ಕಳೆದ 9 ವರ್ಷಗಳಿಂದ ಶ್ರೀ ಶಾರದ ಟೀಚರ್ ಟ್ರೈನಿಂಗ್ ಇನ್ ಸ್ಟಿಟ್ಯೂಟ್ ಮಹಿಳೆಯರಿಗೆ ಒಂದು ವರ್ಷದ ಮಾಂಟೆಸ್ಸರಿ / ನರ್ಸರಿ ಟೀಚರ್ಸ್ ಟ್ರೈನಿಂಗ್ ನಡೆಸುತ್ತಿದೆ. ಭಾರತ ಸರಕಾರದ ನಿರುದ್ಯೋಗ ನಿರ್ಮೂಲನ ಏಜೆನ್ಸಿಯಾದ ಭಾರತ್ ಸೇವಕ್ ಸಮಾಜ್‌ದ ಆಶ್ರಯದಲ್ಲಿ ನಡೆಸಲ್ಪಡುವ ಈ ಕೋರ್ಸಿಗೆ ಪ್ರವೇಶಾತಿ ಆರಂಭವಾಗಿದ್ದು, ಪಿಯುಸಿ ಮೇಲ್ಪಟ್ಟ ವಿದ್ಯಾರ್ಹತೆ ಹೊಂದಿದ ಮಹಿಳಾ ಆಭ್ಯರ್ಥಿಗಳು ಈ ತರಬೇತಿಯ ಪ್ರಯೋಜನೆ ಪಡೆದುಕೊಳ್ಳಬಹುದು. ಆಸಕ್ತರು ಅರ್ಜಿ ನಮೂನೆಯನ್ನು ಶ್ರೀ ಶಾರದಾ ಟೀಚರ್ ಟ್ರೈನಿಂಗ್, ಡಿ.ಸಿ. ಆಫೀಸ್ ಬಳಿ, ಕ್ರಿಸ್ಟಲ್ ಬಿಜ್ಹ್ […]

ಕರ್ನಾಟಕಕ್ಕೆ ಹಿಂಗಾರು ಪ್ರವೇಶ: ಕರಾವಳಿ ಸಹಿತ ರಾಜ್ಯದ ವಿವಿಧೆಡೆ ಮೂರು ದಿನ ಭಾರಿ ಮಳೆ.!

ಬೆಂಗಳೂರು: ನಾಳೆಯಿಂದ ಕರ್ನಾಟಕಕ್ಕೆ ಹಿಂಗಾರು ಪ್ರವೇಶವಾಗಲಿದ್ದು, ಈ ಹಿನ್ನೆಲೆಯಲ್ಲಿ ಅ. 21ರಿಂದ 23ರವರೆಗೆ ರಾಜ್ಯದಲ್ಲಿ ವಿಪರೀತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರ್ನಾಟಕದಲ್ಲಿ ನೈಋತ್ಯ ಮುಂಗಾರು ಕಡಿಮೆಯಾಗಿದ್ದು, ಅ. 21ರಿಂದ ಹಿಂಗಾರು ಮಳೆಯ ಅಬ್ಬರ ಶುರುವಾಗಲಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಹಾಸನ, ಕೊಡಗು, ರಾಮನಗರ, ಕೋಲಾರ, ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿ 3 ದಿನ ಹಳದಿ ಅಲರ್ಟ್​ ಘೋಷಿಸಲಾಗಿದೆ. ಹಾಗೇ, ಬಾಗಲಕೋಟೆ, […]

ಬ್ರಹ್ಮಾವರ: ‘ವಿಷನ್ ಪ್ಯಾಲೇಸ್ ಒಪ್ಟಿಕಲ್’ ಗೆ ಭೇಟಿ ಕೊಡಿ, ಬ್ರಾಂಡೆಡ್ ಸನ್ ಗ್ಲಾಸಸ್ಸ್ ರಿಯಾಯಿತಿ ದರದಲ್ಲಿ ಪಡೆಯಿರಿ

ಬ್ರಹ್ಮಾವರ: ನೀವು ಬ್ರಾಂಡೆಡ್ ಕನ್ನಡಕ ಖರೀದಿಸುವ ಯೋಚನೆಯಲ್ಲಿದ್ದೀರಾ. ಹಾಗಾದ್ರೆ ಇನ್ಯಾಕೆ ತಡ, ನಿಮ್ಮ ಖರೀದಿಗೆ ಬ್ರಹ್ಮಾವರದ ‘ವಿಷನ್ ಪ್ಯಾಲೇಸ್ ಒಪ್ಟಿಕಲ್’ ಸೂಕ್ತ ವೇದಿಕೆ ಕಲ್ಪಿಸುತ್ತಿದೆ. ಹೌದು, ಬ್ರಹ್ಮಾವರ ಎಸ್ ಎಂಎಸ್ ಕಾಲೇಜು ಎದುರಿನ ಮಧುವನ್ ಕಾಂಪ್ಲೆಕ್ಸ್ ನ ಒಂದನೇ ಮಹಡಿಯಲ್ಲಿರುವ ವಿಷನ್ ಪ್ಯಾಲೇಸ್ ಒಪ್ಟಿಕಲ್ ಗೆ ಭೇಟಿ ಕೊಡಿ, ಉಚಿತ ಫ್ರೇಮ್ ಜೊತೆಗೆ ನೀವು ಬಯಸಿದ ಬ್ರಾಂಡೆಡ್ ಕನ್ನಡಕವನ್ನು ರಿಯಾಯಿತಿ ದರದಲ್ಲಿ ಪಡೆಯಿರಿ. ವಿಶೇಷ ಸೌಲಭ್ಯ ನಿಮ್ಮದಾಗಿಸಿಕೊಳ್ಳಿ: ಸಾಲು ಸಾಲು ಹಬ್ಬದ ಪ್ರಯುಕ್ತ ವಿಷನ್ ಪ್ಯಾಲೇಸ್ ಒಪ್ಟಿಕಲ್ […]

ಫೇಸ್‌ಬುಕ್‌ಗೆ ₹519.76 ಕೋಟಿ ದಂಡ.!

ಲಂಡನ್: ಫೇಸ್‌ಬುಕ್‌ಗೆ ಬ್ರಿಟನ್‌ನ ಸ್ಪರ್ಧಾ ಆಯೋಗ ₹519.76 ಕೋಟಿ (5 ಕೋಟಿ ಪೌಂಡ್) ದಂಡ ವಿಧಿಸಿದೆ. ಆ್ಯನಿಮೇಟೆಡ್ ಗ್ರಾಫಿಕ್ಸ್ ನವೋದ್ಯಮ ಜಿಫಿ (Giphy) ಖರೀದಿ ವಿಚಾರವಾಗಿ ಫೇಸ್ ಬುಕ್, ಮಾಹಿತಿ ನೀಡಲು ವಿಫಲವಾಗಿತ್ತು. ಈ ಹಿನ್ನೆಲೆಯಲ್ಲಿ ದಂಡ ವಿಧಿಸಲಾಗಿದೆ. ಜಿಫಿ ನವೋದ್ಯಮವನ್ನು ಕಳೆದ ವರ್ಷ ಫೇಸ್‌ಬುಕ್ ಖರೀದಿಸಿತ್ತು. ಮುಖ್ಯವಾದ ಮಾಹಿತಿಯನ್ನು ಒದಗಿಸಲು ನಿರಾಕರಿಸುವುದು ಆದೇಶದ ಉಲ್ಲಂಘನೆ ಎಂದು ಫೇಸ್‌ಬುಕ್‌ಗೆ ಎಚ್ಚರಿಕೆ ನೀಡಿದ್ದೆವು. ಈ ಕುರಿತು ಫೇಸ್‌ಬುಕ್ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿತ್ತು. ಫೇಸ್‌ಬುಕ್ ಸಲ್ಲಿಸಿದ್ದ ಮನವಿಗೆ ಎರಡು ನ್ಯಾಯಾಲಯಗಳಲ್ಲಿ […]

ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಹಿಂದುಳಿದ ಘಟಕದ ಅಧ್ಯಕ್ಷರಾಗಿ ಕುಮಾರ್ ಸುವರ್ಣ ನೇಮಕ

ಉಡುಪಿ: ಉಡುಪಿ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ಘಟಕಗಳ ವಿವಿಧ ಬ್ಲಾಕ್ ಗಳಿಗೆ ಪದಾಧಿಕಾರಿಗಳ ನೇಮಕವಾಗುತ್ತಿದ್ದು, ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಹಿಂದುಳಿದ ಘಟಕದ ಅಧ್ಯಕ್ಷರಾಗಿ ಬೈಕಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಮಾರ್ ಸುವರ್ಣ ಅವರನ್ನು,ಜಿಲ್ಲಾಧ್ಯಕ್ಷ ಸಂಕಪ್ಪ ಎ ನೇಮಕ ಗೊಳಿಸಿದ್ದಾರೆ. ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮತ್ತು ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಿನಕರ ಹೇರೂರು ಸೂಚನೆಯಂತೆ, ಹಿಂದುಳಿದ ಘಟಕದ ರಾಜ್ಯಾಧ್ಯಕ್ಷ ಲಕ್ಷ್ಮೀನಾರಾಯಣ್ ನೂತನ ಪದಾಧಿಕಾರಿಗಳ ಪಟ್ಟಿಗೆ ಅನುಮೋದನೆ ನೀಡಿದ್ದು, ಉಡುಪಿ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ಘಟಕಗಳ ಅಧ್ಯಕ್ಷ […]