ಕೋವಿಡ್ ಭಯದಿಂದ ಪಡುಬಿದ್ರಿಯ ದಂಪತಿ ನೇಣಿಗೆ ಶರಣು

ಸುರತ್ಕಲ್: ಕೊರೊನಾ ಸೋಂಕು ತಗುಲಿದೆ ಎಂಬ ಆತಂಕದಲ್ಲಿ ದಂಪತಿಗಳಿಬ್ಬರು ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ಅವರಿಗೆ ವಾಟ್ಸಪ್ ಧ್ವನಿ ಮುದ್ರಣ ಕಳುಹಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಸುರತ್ಕಲ್ ಕುಳಾಯಿ ಚಿತ್ರಾಪುರ ಎಂಬಲ್ಲಿ ನಡೆದಿದೆ. ಪಡುಬಿದ್ರಿ ನಿವಾಸಿ ಉದ್ಯಮಿ ರಮೇಶ್ ಸುವರ್ಣ ಮತ್ತು ಗುಣವತಿ ಸುವರ್ಣ ಆತ್ಮಹತ್ಯೆ ಮಾಡಿಕೊಂಡ ದಂಪತಿ. ಆತ್ಮಹತ್ಯೆಗೂ ಮೊದಲು ಪತಿ ರಮೇಶ್ ಸುವರ್ಣ ಅವರು ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ಅವರಿಗೆ ವಾಟ್ಸಾಪ್ ಧ್ವನಿ ಮುದ್ರಣ ಕಳುಹಿಸಿದ್ದರು. ಶಶಿಕುಮಾರ್ ಅವರು ಕೂಡಲೇ ಕಾರ್ಯ ಪೃವೃತ್ತರಾಗಿ […]