ಉಡುಪಿಯಲ್ಲಿ ಉಚಿತ ತೆಂಕುತಿಟ್ಟು ಯಕ್ಷಗಾನ ನಾಟ್ಯ ತರಬೇತಿ

ಉಡುಪಿ: ಪಣಂಬೂರು ವೆಂಕಟ್ರಾಯ ಐತಾಳ ಸಾಂಸ್ಕೃತಿಕ ಪ್ರತಿಷ್ಠಾನವು ಉಡುಪಿಯಲ್ಲಿ  ತೆಂಕುತಿಟ್ಟು ಯಕ್ಷಗಾನ ನಾಟ್ಯ (ಹೆಜ್ಜೆಗಾರಿಕೆ) ತರಬೇತಿ ಕಾರ್ಯಕ್ರಮವನ್ನು ಹೊಸ ತರಗತಿಯೊಂದಿಗೆ ಆರಂಭಿಸುತ್ತಿದೆ. ಇದೇ ಬರುವ ಜುಲೈ 20ರ ಮಂಗಳವಾರದಿಂದ  ಹೊಸ ತರಗತಿಯು ಆರಂಭಗೊಳ್ಳಲಿದೆ. ಕಳೆದ 4 ವರ್ಷಗಳಿಂದ ಉಡುಪಿಯ ಸೋದೆ ಮಠದಲ್ಲಿ ಯಕ್ಷಗುರು ರಾಕೇಶ್ ರೈ ಅಡ್ಕ ಅವರು ಸುಮಾರು 80ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದಾರೆ. ತರಬೇತಿ ಉಚಿತವಾಗಿದ್ದು, ಹೊಸ ತರಗತಿ ಪ್ರತೀ ಮಂಗಳವಾರ ಸಂಜೆ 5ರಿಂದ 6ರ ವರೆಗೆ ಉಡುಪಿಯ ಸೋದೆ ಮಠದಲ್ಲಿ ನಡೆಯಲಿದೆ. […]