ಶಾಲಾ ಶುಲ್ಕ‌ ಇಳಿಸುವಂತೆ ಮನವಿ‌ ಮಾಡಿದ ಪೋಷಕರಿಗೆ ಹೋಗಿ ಸಾಯಿರಿ ಎಂದ ಸಚಿವ

ಭೋಪಾ​ಲ್‌: ಕೊರೊನಾ ಸೃಷ್ಟಿಸಿದ ಆರ್ಥಿಕ ಬಿಕ್ಕಟ್ಟಿನ ಮಧ್ಯೆಯೇ ಖಾಸಗಿ ಶಾಲೆ​ಗಳು ಹೆಚ್ಚುವರಿ ಶುಲ್ಕ ವಸೂಲು ಮಾಡುತ್ತಿದೆ ಎಂಬ ಅಳಲು ತೋಡಿ​ಕೊಂಡ ಪೋಷ​ಕ​ರಿಗೆ ಮಧ್ಯ​ಪ್ರದೇಶ ಶಿಕ್ಷಣ ಸಚಿವ ಇಂದರ್‌ ಸಿಂಗ್‌ ಪರ್ಮಾರ್‌ ಅವರು ‘ನೀವು ಹೋಗಿ ಸಾಯಿ​ರಿ’ ಎಂದು ಹೇಳಿ​ ವಿವಾದ ಸೃಷ್ಟಿಸಿದ್ದಾರೆ. ಇತ್ತೀ​ಚೆ​ಗಷ್ಟೇ ಸುಮಾರು 90-100 ವಿದ್ಯಾ​ರ್ಥಿ​ಗಳ ಪೋಷ​ಕರು ಸಚಿ​ವರ ನಿವಾ​ಸಕ್ಕೆ ಭೇಟಿ ನೀಡಿದ್ದರು. ಹೆಚ್ಚು​ವರಿ ಶುಲ್ಕ ವಿಧಿ​ಸ​ಬಾ​ರ​ದೆಂಬ ಹೈಕೋ​ರ್ಟ್‌ ಆದೇ​ಶ​ಗ​ಳನ್ನು ಗಾಳಿಗೆ ತೂರಿ ಖಾಸಗಿ ಶಾಲೆ​ಗಳು ಹೆಚ್ಚು​ವರಿ ಶುಲ್ಕ ವಸೂಲಿ ಮಾಡು​ತ್ತಿವೆ. ಈ ಸಂಬಂಧ ಶಿಕ್ಷಣ […]

ನಟ ಜಗ್ಗೇಶ್ ಪುತ್ರ ಪ್ರಯಾಣಿಸುತ್ತಿದ್ದ ಕಾರು ಅಪಘಾತ

ಚಿಕ್ಕಬಳ್ಳಾಪುರ: ನಟ ಜಗ್ಗೇಶ್ ಪುತ್ರ ನಟ ಯತಿರಾಜ್ ಪ್ರಯಾಣಿಸುತ್ತಿದ್ದ ಕಾರು ಚಿಕ್ಕಬಳ್ಳಾಪುರದ ನಗರದ ಹೊರವಲಯದ ಅಗಲಗುರ್ಕಿಯ ಬಳಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 44 (ಹೈದರಾಬಾದ್ ಬೆಂಗಳೂರು)ರಲ್ಲಿ ಅಪಘಾತಕ್ಕೀಡಾಗಿದ್ದು, ಯತಿರಾಜ್ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಅವರು ಕಾರಿನಲ್ಲಿ ಬೆಂಗಳೂರಿನತ್ತ ಬರುತ್ತಿದ್ದ ವೇಳೆ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ನಂತರ ಮರಕ್ಕೆ ಡಿಕ್ಕಿಯಾಗಿದೆ ಎನ್ನಲಾಗಿದೆ. ಯತಿರಾಜ್ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಕಾರಿನ‌ ಮುಂಭಾಗಕ್ಕೆ ಹಾನಿಯಾಗಿದ್ದು, ಈ ಬಗ್ಗೆ ಚಿಕ್ಕಬಳ್ಳಾಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಡೆಲ್ಟಾ ರೂಪಾಂತರ ತಳಿಯ ಸೋಂಕು ಹೆಚ್ಚುವ ಸಾಧ್ಯತೆ: ವಿಶ್ವಸಂಸ್ಥೆ ಆರೋಗ್ಯ ಸಂಸ್ಥೆ ಎಚ್ಚರಿಕೆ

ಜಿನಿವಾ: ಕೊರೊನಾ ಸೋಂಕಿನ ರೂಪಾಂತರ ತಳಿ ‘ಡೆಲ್ಟಾ ವೈರಸ್’ ವಿಶ್ವದ 100 ರಾಷ್ಟ್ರಗಳಲ್ಲಿ ಕಾಣಿಸಿಕೊಂಡಿದ್ದು, ಮುಂದಿನ ದಿನಗಳಲ್ಲಿ ಈ ರೂಪಾಂತರ ತಳಿಯ ಸೋಂಕು ಎಲ್ಲೆಡೆ ಹರಡುವ ಸಾಧ್ಯತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ. ಕೋವಿಡ್‌–19 ಪಿಡುಗು ಕುರಿತಂತೆ ವಿಶ್ವ ಆರೋಗ್ಯ ಸಂಸ್ಥೆ ವಾರದ ದತ್ತಾಂಶ ಪ್ರಕಟಿಸಿದ್ದು, ಅದರಂತೆ ಜೂನ್ 29 ರವರೆಗೆ, 96 ದೇಶಗಳಲ್ಲಿ ಡೆಲ್ಟಾ ರೂಪಾಂತರ ತಳಿಯ ಸೋಂಕು ಪ್ರಸರಣಗೊಂಡಿದೆ. ರೂಪಾಂತರ ತಳಿಗಳ ಪತ್ತೆಗೆ ಅಗತ್ಯವಾದ ಪರಿಕರಗಳ ಕೊರತೆಯ ಕಾರಣವೂ ಡೆಲ್ಟಾ ರೂಪಾಂತರ ತಳಿ […]

ಗ್ರಾಹಕರಿಗೆ ಶಾಕಿಂಗ್ ಸುದ್ದಿ: ಅಡುಗೆ ಅನಿಲ‌ ಸಿಲಿಂಡರ್ ಬೆಲೆಯಲ್ಲಿ ಮತ್ತೆ ಏರಿಕೆ

ನವದೆಹಲಿ: ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದ ಜನಸಾಮಾನ್ಯರಿಗೆ ಮತ್ತೊಂದು ಶಾಕ್ ಉಂಟಾಗಿದೆ. ಅಡುಗೆ ಅನಿಲ ಸಿಲಿಂಡರ್ ಗಳ ಬೆಲೆಯಲ್ಲಿ ಮತ್ತೆ ₹25.50 ಹೆಚ್ಚಳವಾಗಿದೆ. ಪರಿಷ್ಕೃತ ದರದಂತೆ ದೆಹಲಿಯಲ್ಲಿ ಒಂದು ಅಡುಗೆ ಅನಿಲ ಸಿಲಿಂಡರ್ ಬೆಲೆ ₹809 ರಿಂದ ₹834.50 ಗೆ ಏರಿಕೆಯಾಗಿದೆ. ಪ್ರತಿ ತಿಂಗಳ ಮೊದಲ ದಿನ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಗ್ಯಾಸ್ ಸಿಲಿಂಡರ್ ಗಳ ಬೆಲೆ ಪರಿಷ್ಕರಣೆ ಮಾಡುತ್ತಿದ್ದು, ಅದರಂತೆ ಈ ತಿಂಗಳಲ್ಲಿ ದರ ಹೆಚ್ಚಳ ಮಾಡಿವೆ. ಮೇ 1ರಂದು ಗ್ಯಾಸ್ […]

ವಿಶ್ವ ವೈದ್ಯರ ದಿನಾಚರಣೆಗೆ ಗಣ್ಯರ ಶುಭಾಶಯ

ಇನ್ನೇನು ಜೀವ ಹೋಗುತ್ತೆ ಅನ್ನುವಾಗ ದೇವರಂತೆ ಬಂದು ಜೀವ ಉಳಿಸುವವರು, ಕತ್ತಲೆ ತೊಲಗಿಸಿ ಬದುಕಿಗೆ ಬೆಳಕು ಕೊಡುವವರು ಡಾಕ್ಟರ್. ಎಲ್ಲರಿಗೂ ವಿಶ್ವ ವೈದ್ಯರ ದಿನಾಚರಣೆಯ ಶುಭಾಶಯಗಳು.