ವಾಟ್ಸ್ ಆ್ಯಪ್ ಚಾಟ್ ಟೆಲಿಗ್ರಾಂಗೆ ವರ್ಗಾಯಿಸಬಹುದು: ಅದಕ್ಕೆ ಈ ವಿಧಾನ ಅನುಸರಿಸಿ

ಬೆಂಗಳೂರು: ನೀವು ವಾಟ್ಸ್ ಆ್ಯಪ್ ತೊರೆಯಲು ಇಚ್ಛಿಸಿದ್ದರೆ ಮತ್ತು ಟೆಲಿಗ್ರಾಂ ಬಳಸಲು ಮುಂದಾಗಿದ್ದರೆ, ನಿಮ್ಮ ವಾಟ್ಸ್ ಆ್ಯಪ್ ವೈಯಕ್ತಿಕ ಚಾಟ್, ಗ್ರೂಪ್ ಚಾಟ್‌ಗಳನ್ನು ಟೆಲಿಗ್ರಾಂಗೆ ವರ್ಗಾಯಿಸಬಹುದು. ಆ್ಯಪಲ್ ಐಫೋನ್ ಮತ್ತು ಆಂಡ್ರಾಯ್ಡ್ ಫೋನ್ ಎರಡರಲ್ಲೂ ಈ ಆಯ್ಕೆಯಿದ್ದು, ಬಳಕೆದಾರರು ವಾಟ್ಸ್ ಆ್ಯಪ್ ಚಾಟ್ ಅನ್ನು ಟೆಲಿಗ್ರಾಂಗೆ ವರ್ಗಾಯಿಸಲು ಈ ಸರಳ ವಿಧಾನ ಅನುಸರಿಸಬೇಕು. ಐಫೋನ್ ವಾಟ್ಸ್ ಆ್ಯಪ್ ತೆರೆಯಿರಿ, ಬಳಿಕ ಅದರಲ್ಲಿ ನೀವು ಟೆಲಿಗ್ರಾಂಗೆ ವರ್ಗಾಯಿಸಬೇಕು ಎಂದುಕೊಂಡಿರುವ ಚಾಟ್ ಅಥವಾ ಗ್ರೂಪ್ ಚಾಟ್ ಆಯ್ಕೆ ಮಾಡಿ. ನಂತರ, […]

ವಿಧಾನ ಪರಿಷತ್ ಕಲಾಪದ ವೇಳೆ ಬ್ಲೂಫಿಲ್ಮ್ ವೀಕ್ಷಿಸಿದ ಎಂಎಲ್ ಸಿ

ಬೆಂಗಳೂರು: ವಿಧಾನ ಪರಿಷತ್ ಕಲಾಪ ನಡೆಯುವ ವೇಳೆ ಕಾಂಗ್ರೆಸ್ ಎಂಎಲ್ ಸಿ ಪ್ರಕಾಶ್ ರಾಥೋಡ್ ತಮ್ಮ ಮೊಬೈಲ್‌ ನಲ್ಲಿ ನೀಲಿಚಿತ್ರ ವೀಕ್ಷಣೆ ಮಾಡುತ್ತಿದ್ದರು ಎಂದು ಕನ್ನಡದ ಖಾಸಗಿ ಸುದ್ದಿವಾಹಿನಿ ವರದಿ ಬಿತ್ತರಿಸಿದೆ. ಇಂದು ವಿಧಾನಪರಿಷತ್​ ಕಲಾಪ ನಡೆಯುತ್ತಿತ್ತು.ಎಂಎಲ್​ಸಿ ಪ್ರಕಾಶ್ ರಾಥೋಡ್ ಅವರು ಮೊಬೈಲ್​ನಲ್ಲಿ ಅಶ್ಲೀಲ ವಿಡಿಯೋ ನೋಡುತ್ತಿದ್ದ ದೃಶ್ಯ ಮಾಧ್ಯಮಗಳ ಕ್ಯಾಮರಾದಲ್ಲಿ ಸೆರೆಯಾಗಿದೆ. ಇಡೀ ರಾಜ್ಯವನ್ನು ಪ್ರತಿನಿಧಿಸುವ ಶಾಸಕರುಗಳು ಕೂರುವ ಪ್ರಜಾ ದೇಗುಲದಲ್ಲಿ ಇಂತಹ ಅಸಹ್ಯ ವರ್ತನೆ ತೋರಿದ ಎಂಎಲ್ ಸಿ ವಿರುದ್ಧ ಜನಾಕ್ರೋಶ ವ್ಯಕ್ತವಾಗಿದೆ. ಪ್ರಕಾಶ್ […]

ತೆಲುಗು ಚಿತ್ರರಂಗದ ವಿರುದ್ಧ ಸಿಡಿದೆದ್ದ ನಟ ದರ್ಶನ್

ಬೆಂಗಳೂರು: ತೆಲುಗಿನಲ್ಲಿ ಕನ್ನಡ ಚಿತ್ರಗಳ ಬಿಡುಗಡೆಯನ್ನು ತಡೆ ಹಿಡಿದಿರುವ ತೆಲುಗು ಚಿತ್ರರಂಗದ ನಿರ್ಧಾರದ ವಿರುದ್ಧ ನಟ ದರ್ಶನ್ ಸಿಡಿದೆದ್ದಿದ್ದಾರೆ. ತೆಲುಗು ಚಿತ್ರರಂಗದ ಹೊಸ ನೀತಿ ವಿರುದ್ಧ ಇಂದು ಫಿಲಂ ಚೇಂಬರ್‌ಗೆ ದರ್ಶನ್‌ ದೂರು ನೀಡಲಿದ್ದಾರೆ. ತೆಲುಗಿನಲ್ಲಿ ಯಾವುದೇ ಸಿನಿಮಾ ರಿಲೀಸ್ ಇಲ್ಲ, ಆದ್ರೂ ಅಲ್ಲಿ ಕನ್ನಡ ಚಿತ್ರಗಳ ಬಿಡುಗಡೆಗೆ ಅವಕಾಶ ನೀಡ್ತಾ ಇಲ್ಲ ಎಂದು ತೆಲುಗು ಚಿತ್ರರಂಗದ ಹೊಸ ನೀತಿಯನ್ನು ದರ್ಶನ್ ಖಂಡಿಸಿದ್ದಾರೆ. ಸಣ್ಣ ಪುಟ್ಟ ಸಿನಿಮಾ ರಿಲೀಸ್ ಇದ್ದರೂ ಸಹ ಕನ್ನಡ ಚಿತ್ರಗಳ ಬಿಡುಗಡೆಯನ್ನು ತಡೆ […]