ಬಾರ್ಕೂರಿನಲ್ಲಿ ಮತ್ಸ್ಯ ಗಂಧ ರೈಲಿನ ನಿಲುಗಡೆ ರದ್ದು: ಜನರ ಆಕ್ರೋಶ

ಬ್ರಹ್ಮಾವರ: ಕರಾವಳಿ ಭಾಗದ ಜನ ಬಹುಕಾಲದಿಂದ ಕಾಯುತ್ತಿದ್ದ ಮಂಗಳೂರು-ಮುಂಬೈ ನಡುವಿನ ಮತ್ಸ್ಯ ಗಂಧ ರೈಲಿನ ಸಂಚಾರ ಇದೇ ಡಿಸೆಂಬರ್ 17 ರಿಂದ ಆರಂಭವಾಗಲಿದೆ. ಆದರೆ ಆಶ್ಚರ್ಯಕಾರಿ ಬೆಳವಣಿಗೆ ಎಂದರೆ ಬಾರ್ಕೂರು ರೈಲು ನಿಲ್ದಾಣದಲ್ಲಿದ್ದ ನಿಲುಗಡೆಯನ್ನು ರದ್ದುಗೊಳಿಸಲಾಗಿದೆ. ಆ ಮೂಲಕ ಇತಿಹಾಸ ಪ್ರಸಿದ್ಧ ಬಾರಕೂರನ್ನು ನಿರ್ಲಕ್ಷಿಸಲಾಗಿದೆ ಎಂದು ಈ ಭಾಗದ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರ್.ಎಲ್. ಡಯಾಸ್, ಬಿ.ಡಿ. ಶೆಟ್ಟಿ ಅವರಂತಹ ಮುಖಂಡರ ಹೋರಾಟದ ಫಲವಾಗಿ ಮತ್ಸ್ಯಗಂಧ ರೈಲಿನ ನಿಲುಗಡೆ ಬಾರ್ಕೂರಿನಲ್ಲಿ ನಮಗೆ ದೊರೆತಿತ್ತು. ಹಾಗಾಗಿ ಈಗ ನಾವು […]