ಉಡುಪಿ: ಕಳವು ಪ್ರಕರಣ; ಕತರ್ನಾಕ್ ದಂಪತಿಯ ಬಂಧನ

ಕುಂದಾಪುರ: ಮನೆ, ದೇವಸ್ಥಾನಗಳಲ್ಲಿ ಕಳ್ಳತನ ಮಾಡುತ್ತಿದ್ದ ಕತರ್ನಾಕ್ ಅಂತರ್ ಜಿಲ್ಲಾ ಕಳ್ಳ ದಂಪತಿಯನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ದಂಪತಿಗಳಿಂದ ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಮೂಲತ: ಇಂದ್ರಾಳಿ ದುರ್ಗಾ ನಗರದ ಪ್ರಸ್ತುತ ಧಾರವಾಡ ಜಿಲ್ಲೆಯ ಜನತ್ ನಗರದ ರಾಜೇಶ ನಾಯ್ಕ ಯಾನೆ ರಾಜ ಯಾನೆ ರಾಜು ಪಾಮಡಿ (42) ಹಾಗೂ ಆತನ ಪತ್ನಿ ಪದ್ಮ ಪಾಮಡಿ (37) ಬಂಧಿತ ಆರೋಪಿಗಳು. ಈ ದಂಪತಿಗಳು ಕುಂದಾಪುರ, ಉಡುಪಿ ನಗರ, ಮಣಿಪಾಲ, ಗಂಗೊಳ್ಳಿ, ಧಾರ ವಾಡ ನಗರ […]

ಉಡುಪಿ: ಅಪ್ರಾಪ್ತ ಬಾಲಕಿಯ ಅತ್ಯಾಚಾರ; ಆರೋಪಿಯ ಬಂಧನ

ಉಡುಪಿ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿ ಬ್ಯಾಂಕ್ ಸಿಬ್ಬಂದಿಯನ್ನು ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದೆ. ಬಂಧಿತನನ್ನು ಕಾಪುವಿನ ಬ್ಯಾಂಕ್ ಆಫ್ ಬರೋಡ ( ಹಿಂದಿನ ವಿಜಯ ಬ್ಯಾಂಕ್) ಶಾಖೆಯ ಆಟೆಂಡರ್ ಕುಕ್ಕಿಕಟ್ಟೆ ಮಂಚಿ ನಿವಾಸಿ ಸುಕೇಶ್ ಶೆಟ್ಟಿ(23) ಎಂದು ಗುರುತಿಸಲಾಗಿದೆ. ಈತ ಹತ್ತನೆ ತರಗತಿಯ ಬಾಲಕಿಯೊಬ್ಬಳನ್ನು ಮದುವೆಯಾಗುವುದಾಗಿ ನಂಬಿಸಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದನು. ಈ ಬಗ್ಗೆ ಉಡುಪಿ ಮಹಿಳಾ ಠಾಣೆಯಲ್ಲಿ ಬಾಲಕಿ ಮನೆಯವರು ದೂರು ನೀಡಿದ್ದಾರೆ.