ಕಾರ್ಕಳ: ರೋಟರಿ ಆನ್ಸ್ ಕ್ಲಬ್ ನ ಪದಗ್ರಹಣ ಸಮಾರಂಭ

ಕಾರ್ಕಳ: ರೋಟರಿ ಆನ್ಸ್ ಕ್ಲಬ್ ನ ಪದಗ್ರಹಣ ಇದರ 2020-21 ಸಾಲಿನ ರಮಿತ ಶೈಲೆಂದ್ರ ರಾವ್ ಅವರ ಅಧ್ಯಕ್ಷತೆಯ ನೂತನ ಪದಗ್ರಹಣ ಸಮಾರಂಭವು ಜುಲೈ 15 ರಂದು ರೋಟರಿ ಬಾಲ ಭವನದಲ್ಲಿ ನೆರವೇರಿತು. ರೋಟರಿ ಮಾತ್ರ ಸಂಸ್ಥೆಯ ಅಧ್ಯಕ್ಷರು ಈ ಪದಗ್ರಹಣ ಕಾರ್ಯಕ್ರಮವನ್ನು ನೆರವೇರಿಸಿದರು. ಮುಖ್ಯ ಅತಿಥಿಯಾಗಿ ನಿವೃತ್ತ ಪ್ರಾಂಶುಪಾಲೆ ಮಿತ್ರ ಪ್ರಭ ಹೆಗಡೆ ಭಾಗವಹಿಸಿ ಮಾತನಾಡಿ, ಹೆಣ್ಣು ಸ್ವಾಭಿಮಾನಿ ಆಗಿ ನಿಲ್ಲಬೇಕು, ಎಲ್ಲಾ ಕ್ಷೇತ್ರದಲ್ಲೂ ತನ್ನನ್ನು ತಾನು ತೊಡಗಿಸಿಕೊಳ್ಳಬೇಕು, ಮಹಿಳೆಯರು ಮುಂದೆ ಬಂದು ಸಮಾಜಮುಖಿಯಾಗಿ ಕಾರ್ಯನಿರ್ವಹಿಸಬೇಕು […]

ಉಡುಪಿ ಜಿಲ್ಲಾ ಬಿಜೆಪಿ ರೈತ ಮೋರ್ಚಾಪದಾಧಿಕಾರಿಗಳ ಪಟ್ಟಿ ಬಿಡುಗಡೆ

ಉಡುಪಿ :ಬಿಜೆಪಿ ಜಿಲ್ಲಾಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್‌ ಶಿಫಾರಸ್ಸಿನ ಮೇರೆಗೆ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಪ್ರವೀಣ್‌ಕುಮಾರ್‌ ಗುರ್ಮೆ, ಜಿಲ್ಲಾ ರೈತ ಮೋರ್ಚಾ ಪದಾಧಿಕಾರಿಗಳ ಪಟ್ಟಿಯನ್ನುಅಂತಿಮಗೊಳಿಸಿ ಬಿಡುಗಡೆಗೊಳಿಸಿದ್ದಾರೆ. ಉಪಾಧ್ಯಕ್ಷರು :ಪ್ರವೀಣ್‌ಕುಮಾರ್ ಶೆಟ್ಟಿ ಬೇಳೂರು ಕುಂದಾಪುರ, ಸುರೇಂದ್ರ ಪೂಜಾರಿ ಮುನಿಯಾಲು ಕಾರ್ಕಳ, ರವಿ ಗಾಣಿಗ ಕೆಂಚನೂರು ಬೈಂದೂರು, ಪ್ರಧಾನ ಕಾರ್ಯದರ್ಶಿಗಳು :ಗೋಪಾಲ ಕಾಂಚನ್‌ ಸಿದ್ದಾಪುರ, ಧೀರಜ್ ಕೆ. ಎಸ್. ಉಪ್ಪೂರು ಉಡುಪಿ, ಕಾರ್ಯದರ್ಶಿಗಳು :ಸುರೇಶ್ ಬಿಜೂರು, ವಾಸುದೇವ ನಾಯಕ್ ಬಡಗಬೆಟ್ಟು, ಐ.ಬಿ. ಅಶೋಕ್ ಶೆಟ್ಟಿ ಕಾಪು, ಕೋಶಾಧಿಕಾರಿ […]

ಶಿರಿಯಾರ ಗ್ರಾಮ ಪಂಚಾಯತ್‌ನ ವಠಾರದಲ್ಲಿ ಬಿದ್ದ ಮರ ತೆರವುಗೊಳಿಸಿ, ವಿದ್ಯುತ್ ಸಂಪರ್ಕ: ಮೆಸ್ಕಾಂ ಗೆ ನ್ಯಾಯವಾದಿ ಶಿರಿಯಾರ ಪ್ರಭಾಕರ ನಾಯಕ್  ಅಭಿನಂದನೆ

ಉಡುಪಿ : ಕೋಟ ಹೋಬಳಿ ವ್ಯಾಪ್ತಿಯ ಶಿರಿಯಾರ ಗ್ರಾಮ ಪಂಚಾಯತ್‌ನ ಕಲಮರ್ಗಿ – ತಾಂಗಂಡಿ, ಶ್ರೀ ರಾಮ ಮಂದಿರ ಹತ್ತಿರ ಪಿಡ್ಲೂಡಿ ರಾಜ್ಯ ಹೆದ್ದಾರಿಯ ಮೇಲೆ ಬುಡ ಸಹಿತ ಮರ ಉರುಳಿ ಕೆಇಬಿ ಹೈ ಟೆಸ್ಷನ್ ವಾಯರ್, ವಿದ್ಯುತ್ ಕಂಬ ಮುರಿದು ಬಿದ್ದ ಪರಿಣಾಮ ಶುಕ್ರವಾರ ರಾತ್ರಿ ಶಿರಿಯಾರ- ಕಲಮರ್ಗಿ ಸುತ್ತಮುತ್ತ ವಿದ್ಯುತ್ ಸಂಪರ್ಕ ಸ್ಥಗಿತಾ ಕೊಂಡು ಕತ್ತಲಲ್ಲಿ ಮುಳುಗಿತ್ತು. ಬಳಿಕ ಕೆಲವು  ತಾಸು ಸ್ಥಳೀಯ ಸ್ವಯಂಸೇವಕರ ಸಹಕಾರದೊಂದಿಗೆ ಕಾರ್ಯಚರಣೆ ನಡೆಸಿ ರಸ್ತೆಗುರುಳಿದ ಮರವನ್ನು ತೆರೆವುಗೊಳಿಸಿ ವಾಹನ […]

ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗೆ ಅಗತ್ಯವಿರುವ ಆ್ಯಂಬುಲೆನ್ಸ್, ಐಸಿ ಘಟಕ ನೀಡಲು ಸರ್ಕಾರ ಸಿದ್ಧ: ಸಚಿವ ಕೋಟ

ಉಡುಪಿ: ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗೆ ಅಗತ್ಯವಿರುವ ಆ್ಯಂಬುಲೆನ್ಸ್, ಐಸಿ ಘಟಕಗಳನ್ನು ನೀಡಲು ಸರ್ಕಾರ ಸಿದ್ಧವಿದೆ. ಉಭಯ ಜಿಲ್ಲೆಯ ಜಿಲ್ಲಾಧಿಕಾರಿಗಳ ಬೇಡಿಕೆ ಅನುಗುಣವಾಗಿ ಆ್ಯಂಬುಲೆನ್ಸ್, ಐಸಿ ಘಟಕ ನೀಡಲಾಗುವುದು ಎಂದು ಮೀನುಗಾರಿಕೆ ಹಾಗೂ ಮುಜರಾಯಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಸಚಿವ ಕೋಟ ಶ್ರೀನಿವಾಸ ಪೂಜಾರಿಯವರಿಂದ ಪಿಯುಸಿ ಟಾಪರ್ ಅಭಿಜ್ಞಾ ರಾವ್ ಮನೆಗೆ ಭೇಟಿ, ಸನ್ಮಾನ

ಉಡುಪಿ: ಈ ಬಾರಿಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಟಾಪರ್ ಬಂದಿರುವ ಉಡುಪಿಯ ಅಭಿಜ್ಞಾ ರಾವ್ ಅವರ ಮನೆಗೆ ಮೀನುಗಾರಿಕೆ ಹಾಗೂ ಮುಜರಾಯಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಇಂದು ಭೇಟಿ ನೀಡಿ ಅಭಿಜ್ಞಾ ರಾವ್ ಅವರನ್ನು ಅಭಿನಂದಿಸಿದ್ದಾರೆ.