ಉಡುಪಿ: ವಿದ್ಯುತ್ ದರ ಏರಿಕೆಗೆ ಕಿಸಾನ್ ಸಂಘ ಆಕ್ಷೇಪ

ಉಡುಪಿ: ಮಂಗಳೂರು ವಿದ್ಯುತ್‌ ಸರಬರಾಜು ಕಂಪೆನಿ ನಿಯಮಿತ ಸರಾಸರಿ ಪ್ರತಿ ಯೂನಿಟ್‌ಗೆ 62 ಪೈಸೆ ದರ ಏರಿಕೆಗೆ ಮುಂದಾಗಿದ್ದು, ಇದಕ್ಕೆ ಭಾರತೀಯ ಕಿಸಾನ್‌ ಸಂಘ ಆಕ್ಷೇಪ ಸಲ್ಲಿಸಿದೆ ಎಂದು ಭಾಕಿಸಂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ ತಿಳಿಸಿದ್ದಾರೆ. ಸಂಘದಿಂದ ಸುಮಾರು 50 ಪ್ರಮುಖ ಪದಾಧಿಕಾರಿಗಳಿಂದ ಈಗಾಗಲೇ ದರ ಏರಿಕೆಗೆ ಆಕ್ಷೇಪವನ್ನು ಸಲ್ಲಿಸಲಾಗಿದೆ. ಇದೇ ತಿಂಗಳ 13ರಂದು ಮಂಗಳೂರಿನಲ್ಲಿ ನಡೆಯುವ ಸಾರ್ವಜನಿಕ ವಿಚಾರಣೆ ಸಂದರ್ಭದಲ್ಲಿ ಸಂಘದ ಪರವಾಗಿ ಸಮರ್ಪಕವಾಗಿ ವಾದ ಮಂಡಿಸಿ ಮೆಸ್ಕಾಂನ ದರ ಏರಿಕೆ ಪ್ರಸ್ತಾಪವನ್ನು […]

ಜಿಲ್ಲಾ ಮಟ್ಟದ ದೇಹದಾರ್ಢ್ಯ: ಪ್ರಸನ್ನ ಪೂಜಾರಿಗೆ ಬೆಳ್ಳಿ, ವಿಥೇಶ್ ಗೆ ಕಂಚು

ಉಡುಪಿ: ಉಡುಪಿಯಲ್ಲಿ ನಡೆದ ಜಿಲ್ಲಾಮಟ್ಟದ ‘ಮಿಸ್ಟರ್‌ ಉಡುಪಿ’ ದೇಹದಾರ್ಢ್ಯ ಸ್ಪರ್ಧೆಯಲ್ಲಿ 70 ಕೆ.ಜಿ. ವಿಭಾಗದಲ್ಲಿ ಪ್ರಸನ್ನ ಪೂಜಾರಿ ಬೆಳ್ಳಿ ಪದಕ ಹಾಗೂ 65 ಕೆ.ಜಿ ವಿಭಾಗದಲ್ಲಿ ವಿಥೇಶ್‌ ಕಲ್ಮಾಡಿ ಕಂಚಿನ ಪದಕ ಪಡೆದುಕೊಂಡಿದ್ದಾರೆ. ಇವರು ಬ್ರಹ್ಮಾವರದ ಮಹೇಶ್‌ ಸುವರ್ಣ ಅವರಿಂದ ತರಬೇತಿ ಪಡೆಯುತ್ತಿದ್ದಾರೆ.

ಎಲ್ಐಸಿ ಷೇರು ಮಾರಾಟ ಪ್ರಸ್ತಾಪ ವಿರೋಧಿಸಿ ನೌಕರರ ಪ್ರತಿಭಟನೆ

ಉಡುಪಿ: ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ)ದ ಷೇರು ಮಾರಾಟದ ಪ್ರಸ್ತಾಪವನ್ನು ವಿರೋಧಿಸಿ ವಿಮಾ ನೌಕರರ ಸಂಘದ ಉಡುಪಿ ವಿಭಾಗದ ನೇತೃತ್ವದಲ್ಲಿ ಎಲ್‌ಐಸಿ ನೌಕರರು‌ ಅಜ್ಜರಕಾಡಿನ ಎಲ್‌ಐಸಿ ಕಚೇರಿ ಎದುರು ಮಂಗಳವಾರ ಧರಣಿ ನಡೆಸಿದರು. ಕೇಂದ್ರ ಸರ್ಕಾರ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಎಲ್‌ಐಸಿಯ ಷೇರು ಮಾರಾಟ ಮಾಡುವ ಬಗ್ಗೆ ಪ್ರಸ್ತಾಪ ಮಾಡಿದ್ದು, ಇದು ಎಲ್‌ಐಸಿಯನ್ನು ಖಾಸಗೀಕರಣಗೊಳಿಸುವ ಭಾಗವಾಗಿದೆ. ಇದನ್ನು ವಿಮಾ ನೌಕರರ ಸಂಘ ಖಂಡಿಸುತ್ತದೆ ಎಂದು ವಿಮಾ ನೌಕರರು ಆಕ್ರೋಶ ವ್ಯಕ್ತಪಡಿಸಿದರು. ಅಧಿಕಾರಿಗಳ ಒಕ್ಕೂಟದ ಉಡುಪಿ ವಿಭಾಗದ […]

ಕಟೀಲು ಬ್ರಹ್ಮಕಲಶೋತ್ಸವ: ವಿಶೇಷ ವೇಷ ಧರಿಸಿ ಸಂಗ್ರಹಿಸಿದ ಹಣ ಕ್ಯಾನ್ಸರ್ ಪೀಡಿತ ಮಗುವಿನ ಹೆತ್ತವರಿಗೆ ಹಸ್ತಾಂತರ

ಮಂಗಳೂರು: ಬ್ಲಡ್ ಕ್ಯಾನ್ಸರ್ ಪೀಡಿತ ಪುಟ್ಟ ಕಂದಮ್ಮನ ಚಿಕಿತ್ಸೆಗಾಗಿ ಶ್ರೀ ಕಟೀಲು ಕ್ಷೇತ್ರದ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಯುವಕರ ತಂಡವೊಂದು ವಿಶೇಷ ವೇಷ ಧರಿಸಿ 3,00,136 ರೂ. ಹಣ ಸಂಗ್ರಹಿಸಿ ಮಗುವಿನ ಪೋಷಕರಿಗೆ ನೀಡಿದ್ದಾರೆ. ನಿಹಾರಿಕ ಎಂಬ 5 ವರ್ಷದ ಪುಟ್ಟ ಮಗು ರಕ್ತದ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು, ಮಣಿಪಾಲದ ಕೆ.ಎಂ.ಸಿ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಚಿಕಿತ್ಸೆಗೆ 10 ಲಕ್ಷ ರೂ.‌ ಆಗತ್ಯವಿದೆ. ನಿಹಾರಿಕಾಳ ತಂದೆ ತಾಯಿ ಬಡ ಕುಟುಂಬದವರಾಗಿದ್ದು, ಚಿಕಿತ್ಸೆ ಬೇಕಾದ ಹಣ ಸಂಗ್ರಹಿಸುವುದು ಕಷ್ಟವಾಗಿತ್ತು. ಹೀಗಾಗಿ […]

ಮಂಗಳೂರಿಗೆ ಆಗಮಿಸಿದ ಐಷಾರಾಮಿ ಹಡಗು ಕೋಸ್ಟಾ ವಿಕ್ಟೋರಿಯ

ಮಂಗಳೂರು: ಮಂಗಳೂರಿನ ಎನ್ಎಂಪಿಟಿ ಬಂದರಿಗೆ ಐಷಾರಾಮಿ ಹಡಗು ವಿದೇಶಿ ಪ್ರಯಾಣಿಕರನ್ನ ಹೊತ್ತು ತಂದಿದೆ. ಕೋಸ್ಟಾ ವಿಕ್ಟೋರಿಯಾ ಎಂಬ ಹೆಸರಿನ ಈ ಐಷಾರಾಮಿ ಹಡಗು ಮುಂಬೈಯಿಂದ ಪಣಂಬೂರಿನಲ್ಲಿರುವ ಬಂದರಿಗೆ ಆಗಮಿಸಿತು. ಈ ಹಡಗಿನಲ್ಲಿ 1,800 ಪ್ರಯಾಣಿಕರು ಹಾಗೂ 786 ಸಿಬ್ಬಂದಿ ಆಗಮಿಸಿದರು. ಮಂಗಳೂರು ನಗರಕ್ಕೆ ಆಗಮಿಸಿದ ವಿದೇಶಿ ಅತಿಥಿಗಳನ್ನ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. ಅನಂತರ ಪ್ರಯಾಣಿಕರನ್ನು ಮಂಗಳೂರಿನ ವಿವಿಧ ದೇವಾಲಯ, ಚರ್ಚ್ ಹಾಗೂ ಇನ್ನಿತರ ಪ್ರವಾಸಿ ತಾಣಗಳಿಗೆ ಕರೆದೊಯ್ಯಲಾಯಿತು.