ಉಚಿತ ಪರೀಕ್ಷಾಪೂರ್ವ ತರಬೇರಿ ಶಿಬಿರ ಉದ್ಘಾಟನೆ

ಉಡುಪಿ: ವಿಮಾ ನೌಕರರ ಸಂಘದ ಉಡುಪಿ ವಿಭಾಗದ ವತಿಯಿಂದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಸಂಸ್ಥೆ ಟೈಮ್ ಸಂಸ್ಥೆಯ ಸಹಯೋಗದಲ್ಲಿ ಅಸಿಸ್ಟೆಂಟ್ ಹುದ್ದೆಯ ಪ್ರಿಲಿಮಿನರಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಮೈನ್ ಪರೀಕ್ಷೆಗೆ ಆಯ್ಕೆಗೊಂಡ ಅಭ್ಯರ್ಥಿಗಳಿಗೆ ಉಡುಪಿಯ ಶಾಂಭವಿ ಹೋಟೆಲ್ನ ಅಪರ್ಣಾ ಸಭಾಂಗಣದಲ್ಲಿ ಆರಂಭಿಸಿರುವ ಉಚಿತ ಪರೀಕ್ಷಾಪೂರ್ವ ತರಬೇತಿ ಶಿಬಿರವನ್ನು ವಿಮಾ ನೌಕರರ ಸಂಘದ ಉಡುಪಿ ವಿಭಾಗದ ಮಾಜಿ ಕಾರ್ಯದರ್ಶಿ ಅದಮಾರು ಶ್ರೀಪತಿ ಆಚಾರ್ಯ ಭಾನುವಾರ ಉದ್ಘಾಟಿಸಿದರು. ಬಳಿಕ ಮಾತನಾಡಿದ ಶ್ರೀಪತಿ ಆಚಾರ್ಯ, ಈ ತರಬೇತಿ ಸಂಘದ ಸಾಮಾಜಿಕ ಕಳಕಳಿಯ ಭಾಗವಾಗಿದ್ದು, […]
ಭಗವದ್ಗೀತೆ ಸಾರ್ವಕಾಲಿಕ ಶ್ರೇಷ್ಠ ಗ್ರಂಥ: ಪ್ರಭಂಜನಾಚಾರ್ಯ

ಉಡುಪಿ: ಭಗವದ್ಗೀತೆ ಸಾರ್ವಕಾಲಿಕ ಶ್ರೇಷ್ಠ ಗ್ರಂಥವಾಗಿದ್ದು, ಇದಕ್ಕೆ ವಿಶ್ವದಲ್ಲಿಯೇ ಅತ್ಯಂತ ಗೌರವವಿದೆ ಎಂದು ವಿದ್ವಾಂಸ ಡಾ. ವ್ಯಾಸನಕೆರೆ ಪ್ರಭಂಜನಾಚಾರ್ಯ ಹೇಳಿದರು. ಶ್ರೀಪುತ್ತಿಗೆ ಮಠದ ಆಶ್ರಯದಲ್ಲಿ ಉಡುಪಿಯ ಗೀತಾಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಗೀತಾಜಯಂತಿ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು. ಶ್ರೀಕೃಷ್ಣನು ಕುರುಕ್ಷೇತ್ರದಲ್ಲಿ ಅರ್ಜುನನಿಗೆ ಭಗವದ್ಗೀತೆಯನ್ನು ಉಪದೇಶಿಸಿದನು. ಶ್ರೀಕೃಷ್ಣನಿಗೆ ಭಗವದ್ಗೀತೆ ಪುಟ್ಟ ಗ್ರಂಥವಾಗಿದ್ದರೂ ಅರ್ಥದ ದೃಷ್ಟಿಯಿಂದ ಬೃಹತ್ ಗ್ರಂಥವಾಗಿದೆ. ಮಾನವನ ಎಲ್ಲ ಸಂಶಯಗಳಿಗೂ ಇದರಲ್ಲಿ ಉತ್ತರವಿದೆ. ಇದು ವಿಶ್ವಮಾನ್ಯವಾಗಿರುವ ಗ್ರಂಥ ಎಂದರು. ಈ ಸಂದರ್ಭದಲ್ಲಿ ವಿವಿಧ ಶಾಲೆಗಳಲ್ಲಿ ನಡೆದ […]
ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ವತಿಯಿಂದ ಸಿ.ಎಂ.ಯಡಿಯೂರೂಪ್ಪ ಅವರಿಗೆ ಸಮ್ಮಾನ

ಧರ್ಮಸ್ಥಳ: ಪತ್ರಕರ್ತರಿಗೆ ಅರೋಗ್ಯ ಕಾರ್ಡ್ ಸೌಲಭ್ಯ ಹಾಗೂ ಪತ್ರಕರ್ತ ನಾಗೇಶ್ ಪಡು ಕುಟುಂಬಕ್ಕೆ ಆರ್ಥಿಕ ನೆರವು ನೀಡಿದ ಮುಖ್ಯಮಂತ್ರಿ ಬಿ.ಯಸ್ ಯಡಿಯೂರಪ್ಪ ಅವರನ್ನು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ವತಿಯಿಂದ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸನ್ಮಾನಿಸಿದರು. ಇದೇ ವೇಳೆ ಪತ್ರಕರ್ತರ ಸಂಘದ ವತಿಯಿಂದ ಡಿಸೆಂಬರ್ 22 ರಂದು ಸುಳ್ಯ ದಲ್ಲಿ ನಡೆಯಲಿರುವ ಪತ್ರಕರ್ತರ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು. ಮಂಗಳೂರು ವಾರ್ತಾ ಹಾಗೂ ಸಾರ್ವಜನಿಕ ಸಂಪರ್ಕ ಇಲಾಖೆಗೆ […]
ದುಗ್ಲಿಪದವು ಯುವ ಸೇವಾ ಸಂಘದ ಅಧ್ಯಕ್ಷರಾಗಿ ಸಂತೋಷ್ ಶೆಟ್ಟಿ ಆಯ್ಕೆ

ಉಡುಪಿ: ದುಗ್ಲಿಪದವು ಯುವ ಸೇವಾ ಸಂಘ, ಮಂಚಿ ಇದರ 2019–20ನೇ ಸಾಲಿನ ನೂತನ ಅಧ್ಯಕ್ಷರಾಗಿ ಸಂತೋಷ್ ಶೆಟ್ಟಿ ದುಗ್ಲಿಪದವು ಆಯ್ಕೆಯಾಗಿದ್ದಾರೆ. ಸಂಘದ ಕಚೇರಿಯಲ್ಲಿ ನಡೆದ ಸಂಘದ ವಾರ್ಷಿಕ ಸಭೆಯಲ್ಲಿ ಅವರನ್ನು ಆಯ್ಕೆ ಮಾಡಲಾಗಿದೆ. ಇತರ ಪದಾಧಿಕಾರಿಗಳು: ಗೌರವ ಸಲಹೆಗಾರ– ರಾಮಕೃಷ್ಣ ದುಗ್ಲಿಪದವು, ಬಾಲಕೃಷ್ಣಶೆಟ್ಟಿ ದುಗ್ಲಿಪದವು, ಸ್ಥಾಪಕಾಧ್ಯಕ್ಷ– ವಿನೋದ್ ಮಂಚಿ, ಪ್ರಧಾನ ಕಾರ್ಯದರ್ಶಿ– ಸತೀಶ್ ಬಿ. ಶೆಟ್ಟಿ ದುಗ್ಲಿಪದವು, ಉಪಾಧ್ಯಕ್ಷೆ–ಪೂರ್ಣಿಮಾ ದುಗ್ಲಿಪದವು, ಕಾರ್ಯದರ್ಶಿ– ಸುಮಂತ್ ದುಗ್ಲಿಪದವು, ಜಂಟಿ ಕಾರ್ಯದರ್ಶಿ– ನಳಿನಿ ದುಗ್ಲಿಪದವು, ಕೋಶಾಧಿಕಾರಿ– ಸಾಯಿಕಿರಣ್ ದುಗ್ಲಿಪದವು. ಸಂಘಟನಾ ಕಾರ್ಯದರ್ಶಿ– […]
ಸಾರ್ವಜನಿಕರ ಮನೆ ಬಾಗಿಲಿಗೇ ಪಿಂಚಣಿ- ಸಚಿವ ಅಶೋಕ್: ಹೆಬ್ರಿ ತಾಲೂಕಿನಲ್ಲಿ ಮಿನಿ ವಿಧಾನಸೌಧದ ಶಿಲಾನ್ಯಾಸ ನೆರವೇರಿಸಿದ ಸಚಿವ

ಉಡುಪಿ: ವೃದ್ದಾಪ್ಯ ವೇತನ , ವಿಧವಾ ವೇತನದ ಪಿಂಚಣಿಗೆ ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸದೇ , ಸರಕಾರದ ವತಿಯಿಂದಲೇ ಪಿಂಚಣಿಗೆ ಅರ್ಹರಾದವನ್ನು ಗುರುತಿಸಿ ಅವರ ಮನೆ ಬಾಗಿಲಿಗೇ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ. ಅವರು ಭಾನುವಾರ, ಹೆಬ್ರಿ ತಾಲೂಕಿನಲ್ಲಿ 10 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಮಿನಿ ವಿಧಾನಸೌಧದ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು. ರಾಜ್ಯದಲ್ಲಿ ಪ್ರತಿ ವರ್ಷ ವೃದ್ದಾಪ್ಯ ವೇತನ , ವಿಧವಾ ವೇತನ ಮುಂತಾದ ಪಿಂಚಣಿ ಯೋಜೆನಗಳಿಗಾಗಿ 7000 ಕೋಟಿ ರಊ […]