ಸರಕಾರದ ವತಿಯಿಂದ ಕರಾಟೆ ಸ್ಪರ್ಧೆ ಆಯೋಜಿಸಲು ಚಿಂತನೆ: ರಘುಪತಿ ಭಟ್
ಉಡುಪಿ: ಸರ್ಕಾರದ ವತಿಯಿಂದ ಕರಾಟೆ ಸ್ಪರ್ಧಾಕೂಟಗಳನ್ನು ಆಯೋಜಿಸಲು ಚಿಂತನೆ ನಡೆಸಲಾಗುವುದು ಎಂದು ಶಾಸಕ ಕೆ. ರಘುಪತಿ ಭಟ್ ಹೇಳಿದರು. ಬುಡೋಕಾನ್ ಕರಾಟೆ ಹಾಗೂ ಸೆಲ್ಫ್ ಡಿಫೆನ್ಸ್ ಅಸೋಸಿಯೇಶನ್ ಆಫ್ ಇಂಡಿಯಾ ವತಿಯಿಂದ ಕರಂಬಳ್ಳಿ ಶ್ರೀ ವೆಂಕಟರಮಣ ದೇವಸ್ಥಾನ ಆವರಣದಲ್ಲಿ ಆಯೋಜಿಸಿದ್ದ ಎರಡು ದಿನಗಳ ರಾಜ್ಯಮಟ್ಟದ ಅಂತರ ಶಾಖಾ ಕರಾಟೆ ಸ್ಪರ್ಧಾಕೂಟ ‘ಬುಡೋಕಾನ್ ಧಮಾಕ–2019’ಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದರು. ಸರ್ಕಾರದಿಂದ ಕರಾಟೆ ಸ್ಪರ್ಧಾಕೂಟ ಆಯೋಜಿಸುವಂತೆ ಬುಡೋಕಾನ್ ಕರಾಟೆ ಶಿಕ್ಷಕರಿಂದ ಬೇಡಿಕೆ ಬಂದಿದ್ದು, ಈ ಬಗ್ಗೆ ಆದಷ್ಟು ಬೇಗ […]